ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸ್ಪೂರ್ತಿ ಬಳ್ಳಾರಿ ಸಾಧನೆ

1
basavaraj
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷ ಹಾಗೂ ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗದಗ ತಾಲೂಕು ಅಧಿಕಾರಿಗಳಾಗಿರುವ ಡಾ. ಬಸವರಾಜ ಬಳ್ಳಾರಿ ಅವರ ಪುತ್ರಿ ಸ್ಪೂರ್ತಿ ಬಸವರಾಜ ಬಳ್ಳಾರಿ ಅವರು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 571 ಪಡೆಯುವ ಮೂಲಕ ಶೇ. 95.16ರಷ್ಟು ಅಂಕಗಳನ್ನು ಗಳಿಸಿ, ಕೊಪ್ಪಳ ಜಿಲ್ಲೆಯ ಚೇತನಾ ಪಿಯು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಇಂಗ್ಲಿಷ್-96, ಹಿಂದಿ-91, ಫಿಸಿಕ್ಸ್-95, ಕೆಮೆಸ್ಟಿ-95, ಮ್ಯಾಥಮೆಟಿಕ್ಸ್-94, ಬಯಾಲಜಿ-100ರಷ್ಟು ಅಂಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಸಾಧನೆ ಮೆರೆದ ಸ್ಪೂರ್ತಿ ಬಸವರಾಜ ಬಳ್ಳಾರಿ ಅವರಿಗೆ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ, ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.


Spread the love

1 COMMENT

  1. ಪ ಪೂ ದ್ವಿತೀಯ ಪರೀಕ್ಷೆಯಲ್ಲಿಉತ್ತೀರ್ಣರಾಗಿರುವನಮ್ಮ ಕರುನಾಡಿನ ಎಲ್ಲ ವಿಧ್ಯಾರ್ಥಿಗಳಿಗೆ ಶುಭಾಶಯ ಗಳು ಮುಂದಿನ ವಿದ್ಯಾಭ್ಯಾಸ ಯಾವ ವಿಷಯದಲ್ಲಿ ಮಾಡುವ ಇಚ್ಚೆ ಹೊಂದಿರುವಿರಿ ಆ ಮಾರ್ಗದಲ್ಲಿಯೇ
    ಮುಂದುವರೆಸುವ ಬಗ್ಗೆ ಪಾಲಕರಿಗೆ ತಿಳಿಸಿ ಅವರ ಆಶಿರ್ವಾದದೊಂದಿಗೆ ನಿಮ್ಮ ಶೈಕ್ಷಣಿಕ ಗುರಿಯ ಪಯಣ
    ಸಾಗಿಸಿ ಪಾಲಕರ ಒತ್ತಡಕ್ಕೊ, ನಿಮ್ಮ ತಪ್ಪು ನಿರ್ಧಾರದ ಪಲವಾಗಿ ನಿಮ್ಮ ಪಯಣದಲ್ಲಿ ಅಡೆತಡೆಯಾದ ಪಕ್ಷ
    ಎದೆಗುಂದಿ ಮಾನಸಿಕ ಖಿನ್ನತೆಗೆ ಒಳಗಾಗಿ ಕೊರಗದೆ ಸಂದರ್ಭವನ್ನು ಧೈರ್ಯದಿಂದ ಎದುರಿಸಲು ಪಾಲಕರ ಹಾಗೂ ಹಿತೈಸಿಗಳ ಮಾರ್ಗದರ್ಶನ ಪಡೆದುಕೊಳ್ಳಿ ಒಳ್ಳೆಯದಾಗಲಿ

LEAVE A REPLY

Please enter your comment!
Please enter your name here