ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಸನ್ಮಾನ

0
Honorary Doctorate Award
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಮಿಳುನಾಡಿನ ಏಶಿಯಾ ಇಂಟರನ್ಯಾಶನಲ್ ಕಲ್ಚರ್ ಅಕಾಡೆಮಿ ಇತ್ತೀಚೆಗೆ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಕಾರ್ಮಿಕ ಘಟಕದ ರಾಜ್ಯಾದ್ಯಕ್ಷ ಡಾ.ಶಿವಾನಂದ ಹಿರೇಮಠ, ಜಿಲ್ಲಾಧ್ಯಕ್ಷ ಡಾ. ಶಿವಕುಮಾರ ರಾಮನಕೊಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಎಸ್.ಎಸ್. ರಡ್ಡೇರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ವತಿಯಿಂದ ಸನ್ಮಾನಿಸಿ, ಶುಭ ಹಾರೈಸಲಾಯಿತು.

Advertisement

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಪದಾಧಿಕಾರಿಗಳಾದ ಶಿವಾನಂದ ಪಲ್ಲೇದ, ಎಮ್.ಎಸ್. ಪರ್ವತಗೌಡರ, ಪ್ರಭಾಕರ ಹೆಬಸೂರ, ಯು.ಆರ್. ಬೂಸನೂರಮಠ, ಸೋಳಂಕಿ, ಮಹಾಂತೇಶ ರಡ್ಡೇರ ಸೇರಿದಂತೆ ಹಲವರಿದ್ದರು.


Spread the love

LEAVE A REPLY

Please enter your comment!
Please enter your name here