ಚಿತ್ರದುರ್ಗ: ಚಳ್ಳಕೆರೆಯಲ್ಲಿ ತಹಸೀಲ್ದಾರ ಜೀಪಿಗೆ ಬೆಂಕಿ ಹಚ್ಚಿ ಯುವಕ ಹುಚ್ಚಾಟ ಮೆರೆದಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ನಡೆದಿದೆ.
Advertisement
ಗಾಂಧಿ ನಗರ ನಿವಾಸಿ ಪೃಥ್ವಿರಾಜ್ ಈ ಹುಚ್ಚಾಟ ಮೆರೆದಿರುವ ಯುವಕ. ತಹಸೀಲ್ದಾರ ರೇಹಾನ್ ಪಾಷ ಜೀಪಿಗೆ ಬೆಂಕಿ ಹಚ್ಚಿದ್ದು, ದೊಡ್ಡ ದುರಂತ ತಪ್ಪಿದಂತಾಗಿದೆ.
ಚಳ್ಳಕೆರೆ ಪೊಲೀಸರು ಯುವಕನ ವಿರುದ್ದ ದೌರ್ಜನ್ಯ ನಡೆಸಿದ್ದಾರೆಂದು, ವಿಧಾನ ಸೌಧ ಮುಂಭಾಗ ಈ ಹಿಂದೆ ಬೆಂಕಿ ಹಚ್ಚಿದ್ದ. ಇದೀಗ ತಹಸೀಲ್ದಾರ ಜೀಪಿಗೂ ಬೆಂಕಿ ಹಚ್ಚಿದ್ದಾನೆ. ಪೊಲೀಸರ ಜೀಪಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಸಮೇತ ಬಂದಿದ್ದ, ಆದರೆ ತಹಸೀಲ್ದಾರ ಜೀಪಿಗೆ ಬೆಂಕಿ ಹಚ್ಚಿದ್ದಾನೆ. ಈ ಸಂಬಂಧ ಯುವಕ ಪೃಥ್ವಿರಾಜ್ ನನ್ನ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.