ಬೆಂಗಳೂರಿನಲ್ಲಿ ಚಾಕು ಇರಿದು ಯುವಕನ‌ ಕೊಲೆ ಮಾಡಿದ ರೌಡಿಶೀಟರ್!

0
Spread the love

ಬೆಂಗಳೂರು:- ನಗರದ ಕಾವೇರಿ ನಗರದಲ್ಲಿ ಯುವಕನಿಗೆ ಚಾಕು ಇರಿದು ರೌಡಿಶೀಟರ್ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ.

Advertisement

21 ವರ್ಷದ ವಿಕ್ರಂ ಮೃತ ದುರ್ದೈವಿ ಎನ್ನಲಾಗಿದೆ. ರೌಡಿಶೀಟರ್ ವಸಿಂ ಎಂಬಾತ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಆರೋಪಿ ವಸಿಂನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿಕ್ರಂ ಆರೋಪಿ ವಸೀಂಗೆ ಹಲ್ಲೆ ಮಾಡಿದ್ದ. ಹೀಗಾಗಿ ವಸೀಂ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದ.

ಇವತ್ತು ಕಾವೇರಿ ನಗರದ 8ನೇ ಕ್ರಾಸ್‌ನಲ್ಲಿ ವಿಕ್ರಂ ಸ್ನೇಹಿತನ ಜತೆ‌ ನಿಂತಿದ್ದ. ಈ ವೇಳೆ ಚಾಕುವಿನಿಂದ ನೇರ ಎದೆಗೆ ಇರಿದು ವಸೀಂ ಎಸ್ಕೇಪ್ ಆಗಿದ್ದ.

ಕೂಡಲೇ ಗಾಯಾಳು ವಿಕ್ರಂನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆ ನಡೆದು ಕೆಲವೇ ಗಂಟೆಯಲ್ಲಿ ಆರೋಪಿ ವಸೀಂನನ್ನು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here