ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್: ಪೊಲೀಸ್ ಎನ್​ಕೌಂಟರ್​ನಲ್ಲಿ ಆರೋಪಿ ಸಾವು!

0
Spread the love

ಮುಂಬೈ:- ಇಲ್ಲಿನ ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಎನ್​ಕೌಂಟರ್​ನಲ್ಲಿ ಆರೋಪಿ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ಇಬ್ಬರು ನರ್ಸರಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅಕ್ಷಯ್ ಶಿಂಧೆ ಇಂದು ಸಂಜೆ ಪೊಲೀಸ್ ವಾಹನದೊಳಗೆ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಗಾಯಗೊಂಡ ಆ ಆರೋಪಿ ಸಾವನ್ನಪ್ಪಿದ್ದಾನೆ.

23 ವರ್ಷದ ಅಕ್ಷಯ್ ಶಿಂಧೆ ಎಂಬಾತ ಕಾನ್‌ಸ್ಟೆಬಲ್‌ನ ಬಂದೂಕನ್ನು ಕಿತ್ತುಕೊಂಡು ಗುಂಡು ಹಾರಿಸಿ ಗಾಯಗೊಂಡಿದ್ದ. ಬಳಿಕ ಆತ ಮೃತಪಟ್ಟಿದ್ದಾನೆ. ಅಕ್ಷಯ್ ಶಿಂಧೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬದ್ಲಾಪುರದ ಅಧಿಕಾರಿಗಳು ತಲೋಜಾ ಜೈಲಿಗೆ ತೆರಳಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ಮೊದಲ ಪತ್ನಿ ದಾಖಲಿಸಿದ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಲು ಪೊಲೀಸರು ತೆರಳಿದ್ದರು.

ಮದುವೆಯಾದ 5 ದಿನಗಳ ನಂತರ ಆತನನ್ನು ತೊರೆದ ಮಹಿಳೆ, ಆತನ ಮೇಲೆ ಅತ್ಯಾಚಾರ ಮತ್ತು ಹಲ್ಲೆಯ ಆರೋಪ ಮಾಡಿದ್ದರು. ಇಂದು ಸಂಜೆ 6.30ರ ಸುಮಾರಿಗೆ ಪೊಲೀಸ್ ತಂಡವು ಮುಂಬ್ರಾ ಬೈಪಾಸ್ ಬಳಿ ತಲುಪಿದಾಗ, ಅಕ್ಷಯ್ ಶಿಂಧೆ ಕಾನ್‌ಸ್ಟೆಬಲ್‌ನ ಬಂದೂಕನ್ನು ಕಸಿದುಕೊಂಡು ಹಲವಾರು ಸುತ್ತು ಗುಂಡು ಹಾರಿಸಿದರು.

ಆಗ ಇದಕ್ಕೆ ಪ್ರತೀಕಾರವಾಗಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆರೋಪಿ ಅಕ್ಷಯ್ ಶಿಂಧೆಗೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here