ಗದಗ:- ಕೌಟುಂಬಿಕ ಕಲಹದಿಂದ ಮನನೊಂದು ಮೂವರು ಮಕ್ಕಳನ್ನು ಎಸೆದು, ನದಿಗೆ ಹಾರಿದ ವ್ಯಕ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಶೋಧ ಕಾರ್ಯಕ್ಕೆ ಮೀನುಗಾರರು ಮುಂದಾಗಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಯು ತುಂಬಿ ಹರಿಯುತ್ತಿದ್ದು, ತಾಲೂಕಾಡಳಿತದ ತುಂಬಾ ತಡವಾಗಿ ಕಾರ್ಯಾಚರಣೆ ಶೋಧ ಕೈಗೊಂಡಿದ್ದಾರೆ.
ಘಟನೆ ನಡೆದು ಇಷ್ಟು ಸಮಯ ಕಳೆದರೂ ಬೆಳಗ್ಗೆ 8 ಗಂಟೆಯಾದ್ರೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿರಲಿಲ್ಲ. ಇನ್ನೂ ತಾಲೂಕಾ ಆಡಳಿತ ಕೂಡ ಬೋಟ್ ವ್ಯವಸ್ಥೆಯೂ ಮಾಡದೆ, ಇಷ್ಟು ದೊಡ್ಡ ದುರಂತ ನಡೆದರೂ ನಿರ್ಲಕ್ಷ್ಯ ವಹಿಸಿದೆ.
ಮಾನವೀಯತೆ ಆಧಾರದಲ್ಲಿ ಸ್ಥಳೀಯ ಮೀನುಗಾರರೇ ಶೋಧ ಕೈಗೊಂಡಿದ್ದಾರೆ. ನದಿ ತುಂಬಿ ಹರಿಯುತ್ತಿರೋದ್ರಿಂದ ಸಾಕಷ್ಟು ಆಳ ನೀರು ಇದೆ. ಹೀಗಾಗಿ ಬೋಟ್ ಗಳ ವ್ಯವಸ್ಥೆ, ನುರಿತ ಈಜು ತಜ್ಞರ ಅವಶ್ಯಕತೆ ಇದೆ.
ಘಟನೆ ಹಿನ್ನೆಲೆ:-
ಗದಗ ಜಿಲ್ಲೆ ಮುಂಡರಗಿಯ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ನಿನ್ನೆ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ನಿವಾಸಿ 40 ವರ್ಷದ ಮಂಜುನಾಥ್ ಅರಕೇರಿ ಎಂಬ ವ್ಯಕ್ತಿ ತನ್ನ ಮಕ್ಕಳನ್ನ ಎಸೆದು ನದಿಗೆ ಹಾರಿದ್ದಾರೆ.
ಮಂಜುನಾಥನು ತನ್ನ ಅಳಿಯನ ಮಗ ವೇದಾಂತ ಡಂಬಳ ಸೇರಿ ತನ್ನ ಮಕ್ಕಳು ಆದ ಪವನ್ (4) ಧನ್ಯಾ (6) ಇವರನ್ನು ನದಿಗೆ ಎಸೆದು ತಾನು ನೀರಿಗೆ ಬಿದ್ದಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಕ್ಕಳನ್ನು ನದಿಗೆ ಎಸೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.