ಬೆಂಗಳೂರು: ಆರ್ಥಿಕ ತುರ್ತುಪರಿಸ್ಥಿತಿ ಹೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಆರ್ಥಿಕ ದಿವಾಳಿಯ ಕಾರಣ, ಆರ್ಥಿಕ ತುರ್ತು ಪರಿಸ್ಥಿತಿ ಹೇರಲು ಮುಂದಾಗಿತ್ತು.
ಆದ್ರೆ ಚುನಾವಣೆ ಬಂದಿದ್ದಕ್ಕೆ ಮಾಡಲಿಲ್ಲ.ಅದನ್ನ ಅವಿತಿಟ್ಟರು. ಈಗ ಮಾಡಲು ಬೆಳಗಾವಿ ಅಧಿವೇಶನ ಎದುರಾಗಿದೆ. ಆರ್ಥಿಕ ತುರ್ತುಪರಿಸ್ಥಿತಿ ಹೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಇನ್ನೂ 50 ಕೋಟಿ ಕೈ ಶಾಸಕರಿಗೆ ಅಮಿಷ ವಿಚಾರಕ್ಕೆ ಪ್ರತಿಕ್ರಿಯಿಸಿದ ಛಲವಾದಿ ಅವರು, ಸಿಎಂ ಅವರು ಈ ಹೇಳಿಕೆಗೆ ಪುರಾವೆ ಕೊಡಬೇಕು. ದಾರಿಹೋಕರ ರೀತಿ ಮತಾಡಿದ್ದೀರಿ,
ನಿಮ್ಮ ಶಾಸಕರು ದನಕರುಗಳಾ? ಖರೀದಿ ಮಾಡಲು ಬಂದವರು ಯಾರು? ಎಂದು ಪ್ರಶ್ನಿಸಿದ್ದಾರೆ. ಕೋಟಿ ರೂ ಗೆ ನಿಮ್ಮ ಶಾಸಕರು ಬರ್ತಾರೆ ಅಂದರೂ ನಮಗೆ ಬೇಡ. ಚುನಾವಣೆಗೆ ಹೋಗಿ ಸರ್ಕಾರ ಮಾಡ್ತೇವೆ ಹೊರತು, ನಿಮ್ಮ ಶಾಸಕರನ್ನ ಖರೀದಿ ಮಾಡಿ ಸರ್ಕಾರ ಮಾಡಲ್ಲ. ನಿಮ್ಮನ್ನ ಕೆಳಗಿಳಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡೋರು ನಿಮ್ಮಲ್ಲೇ ಇದ್ದಾರೆ. ಚೆಕ್ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ಕೊಟ್ಟಿದ್ದಾರೆ.