ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದ 6 ಜನ ಅಯ್ಯಪ್ಪ ಮಾಲಾಧಾರಿಗಳು ಮರಣ ಹೊಂದಿದ್ದು, ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸೋಮವಾರ ಶಿರಹಟ್ಟಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಭಕ್ತ ವೃಂದದಿಂದ ತಹಸೀಲ್ದಾರರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಯ್ಯಪ್ಪ ಮಾಲಾಧಾರಿ ಸಂತೋಷ ಕುರಿ, ಹುಬ್ಬಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಪೂಜೆ ಮುಗಿಸಿ ಮಲಗಿದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸ್ಥಳದಲ್ಲಿ ಮಲಗಿದ್ದ 6 ಮಾಲಾಧಾರಿ ಸ್ವಾಮಿಗಳು ಗಾಯಗೊಂಡು ಮರಣ ಹೊಂದಿದ್ದು, ಈ ಕುಟುಂಬಗಳು ತುಂಬಾ ಬಡತನದಲ್ಲಿವೆ. ಆದ್ದರಿಂದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರಧನ ಒದಗಿಸಬೇಕು, ಜೊತೆಗೆ ಧಾರ್ಮಿಕ ದತ್ತಿ ಇಲಾಖೆಯು ಸಹಾಯಧನ ನೀಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹನಮಂತ ಪವಾರ, ಚಂದ್ರು ಜೋಗೇರ, ಪ್ರವೀಣ ಘಂಟಿ, ಮನೋಜ ಭಜಂತ್ರಿ, ಮಲ್ಲು ಬೋರಶೆಟ್ಟರ, ಮಲ್ಲಪ್ಪ ಕುದರಿ, ಆನಂದ ಘಂಟಿ, ಗೌಡಪ್ಪ ಪಾಟೀಲ, ಮಂಜು ಕಲಾಲ, ಪ್ರಶಾಂತ ಗಾಯಕವಾಡ, ಮಹಾಂತೇಶ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.