ಕಲಿಕಾ ಹಬ್ಬದಿಂದ ಜ್ಞಾನ ವೃದ್ಧಿ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಲ್ಲಿ ಕನಿಷ್ಠ ಜ್ಞಾನಾರ್ಜನೆ ಬೆಳೆಸುವುದು ಎಫ್‌ಎಲ್‌ಎನ್, ಕಲಿಕಾ ಹಬ್ಬದ ಉದ್ದೇಶ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.

Advertisement

ಅವರು ಪಟ್ಟಣದ ಸಮೀಪದ ಯಲಿಶಿರುಂದ ಕ್ಲಸ್ಟರ್ ಮಟ್ಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿರುಂಜ ಪ್ಲಾಟ್‌ನಲ್ಲಿ ಜರುಗಿದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, 2024/25ನೇ ಸಾಲಿನಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಲ್ಲಿ ಕಲಿಕೆಯನ್ನು ಗಟ್ಟಿಗೋಳಿಸುವ ಉದ್ದೇಶ ಶಿಕ್ಷಣ ಇಲಾಖೆದ್ದಾಗಿದೆ. ಮಕ್ಕಳಲ್ಲಿ ಕಲಿಕಾ ಬಲವರ್ಧನೆ ಹಾಗೂ ಸಂಖ್ಯಾ ಅಧ್ಯಯನ ಮಾಡುವುದು, ಅಲ್ಲದೇ ಮಕ್ಕಳಲ್ಲಿ ಕನಿಷ್ಠ ಜ್ಞಾನಾರ್ಜನೆಯನ್ನು ಬೆಳೆಸುವುದು, ಪದಗಳ ಜೋಡಣೆ ಮಾಡಿ ಓದುವುದು ಇತ್ಯಾದಿ ಉದ್ದೇಶಗಳನ್ನು ಹೊಂದಿದ್ದು, ಎಲ್ಲಾ ಮಕ್ಕಳು ಸತತ ಅಭ್ಯಾಸದಲ್ಲಿ ತೊಡಗಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

ಅಧ್ಯಕ್ಷತೆಯನ್ನು ಮುತ್ತಪ್ಪ ಡಂಬ್ರಳ್ಳಿ ವಹಿಸಿದ್ದರು. ಲಕ್ಷ್ಮೀ ದೇವರಮನಿ, ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ಆರ್.ಕೆ. ಪವಾರ, ಟಿ.ಎಸ್. ಪವಾರ, ಎಂ.ವಾಯ್. ಮಲಕಶೆಟ್ಟಿ, ವಿ.ಸಿ. ನೆರೆಗಲ್ಲಮಠ, ಬಿ.ವಾಯ್. ಹುಡೆದಮನಿ, ಶಾಲಾ ಪ್ರಧಾನ ಗುರು ಆರ್.ಡಿ. ಜಿನಗಿ, ವಿ.ಆರ್. ಕೆರಿ, ವಿ.ಎಸ್. ಹೊಸಳ್ಳಿ, ಸಿಆರ್‌ಪಿ ಸುವರ್ಣಾ ಚವಡಿ, ಎಸ್.ಅರ್. ಮಂಡಳಗೇರಿ, ಜಯಶ್ರೀ ಶ್ರೀಗಿರಿ, ಸಿ.ಬಿ. ಪಾಟೀಲ್, ಟಿ.ಠಾಣೆದ, ಚಂದ್ರು ಶಿವಸಿಂಪಗೇರ, ದೇವಪ್ಪ ಕಳಕಣ್ಣವರ, ಅಂಬರೀಶ ಲಕ್ಕಣ್ಣವರ ಹಾಗೂ ಎಸ್‌ಡಿಎಂಸಿ ಸರ್ವ ಸದಸ್ಯರು ಇದ್ದರು.


Spread the love

LEAVE A REPLY

Please enter your comment!
Please enter your name here