ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಿಲ್ಲಾ ಓಣಿಯ ತ್ರಿಕೋಟೇಶ್ವರ ದೇವಸ್ಥಾನದ ಉತ್ತರ ದ್ವಾರದಲ್ಲಿ ಮಾ.14ರಂದು ಕಾಮರತಿಯ ಪ್ರತಿಷ್ಠಾಪನೆ, ಹಿರಿಯರಿಗೆ ಸನ್ಮಾನ, ಸಾಂಸ್ಕೃತಿಕ ಸಮಾರಂಭ, ಓಕಳಿ, ಕಾಮದಹನ ಹಾಗೂ ಅಲಕೃಂತಗೊಂಡ ರತಿ-ಕಾಮರ ಮೆರವಣಿಗೆ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
2025ನೇ ಸಾಲಿನ ಕಿಲ್ಲಾ ಸರ್ಕಾರಿ ಕಾಮರತಿಯರ 160ನೇ ವರ್ಷದ ಉತ್ಸವದ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುರೇಶ ಹೆಚ್.ಬಾಕಳೆ, ಉಪಾಧ್ಯಕ್ಷರಾಗಿ ಮನೋಹರ ದಲಬಂಜನ, ಗೌರವ ಕಾರ್ಯದರ್ಶಿಯಾಗಿ ವೆಂಕಟೇಶ ಖೋಡೆ, ಕಾರ್ಯದರ್ಶಿಯಾಗಿ ವೆಂಕಟೇಶ ಪಿ.ಭಾಂಡಗೆ, ಖಜಾಂಚಿಯಾಗಿ ಪ್ರಕಾಶ ಎಸ್.ಕಾಟಿಗರ ಆಯ್ಕೆಯಾದರು.
ಸಭೆಯಲ್ಲಿ ಹಿರಿಯರಾದ ಪರಶುರಾಮ ಬದಿ, ತುಳಸಿನಾಥಸಾ ಖೋಡೆ, ರಮೇಶ ಖೋಡೆ, ರಾಜೇಶ ಖೋಡೆ, ಪರಶುರಾಮ ಮಿಸ್ಕಿನ್, ಕೃಷ್ಣಾ ಬಿ.ಖೋಡೆ, ರಾಜು ಖೋಡೆ, ಸುಧೀರ ಆರ್.ಕಾಟಿಗರ, ಜಿ.ಎನ್. ಹಬೀಬ, ನಾಗರಾಜ ಖೋಡೆ, ಮಾಧುಸಾ ವಿ.ಬದಿ, ವೆಂಕಟೇಶ ಪಿ.ಖೋಡೆ, ರವಿ ಚವ್ಹಾಣ, ಸುನೀಲ ಬಸವಾ, ಮೋಹನ ಹಬೀಬ, ವಸಂತ ಬಾಕಳೆ, ಅಶ್ವಿನ ಹಬೀಬ, ಶ್ರೀಕಾಂತ ಪವಾರ, ಶೀನು ಜೆ.ಭಾಂಡಗೆ, ಪ್ರದೀಪ ಖಟವಟೆ, ವಿನೋದ ಪವಾರ ಮುಂತಾದವರು ಪಾಲ್ಗೊಂಡಿದ್ದರು.