HomeCrime Newsಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!

ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಯೊಂದಿಗೆ ಚಕ್ಕಂದ ಆಡಲು ಹೋಗಿ ಸಿಕ್ಕಿ ಬಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬನ ಅಸಲಿ ಕಥೆಯಿದು. ಆತ‌ ಗದಗನ ಠಾಣೆಯೊಂದರಲ್ಲಿ ಎಎಸ್ ಐ. ವಯಸ್ಸು 50 ಕ್ಕೂ ಹೆಚ್ಚು ಇರಬಹುದು. ಅಮಾಯಕರಿಗೆ, ಅಭಲೆಯರಿಗೆ,‌ನ್ಯಾಯ ಕೇಳಿ ಬಂದವರಿಗೆ ನ್ಯಾಯ ಕೊಡಿಸುವ ‌ಮಹತ್ವದ ಜವಬ್ದಾರಿ ಹೊತ್ತ ಪೊಲೀಸ್ ಅಧಿಕಾರಿ.

ಈ ಪೊಲೀಸ್ ಅಧಿಕಾರಿ ಮಾತ್ರ ಇದನ್ನೆಲ್ಲ ಮರೆತು ಏನೂ ಅರಿಯದ, ಬಾಲಕಿಯೊಂದಿಗೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದು ಬಾಲಕಿಯ ಪೋಷಕರೊಂದಿಗೆ ಮಂಗಳಾರತಿ ಮಾಡಿಸಿಕೊಂಡಿದ್ದಾನೆ.

ಗದಗನ ಸಮೀಪ ಇರುವ ತಾಂಡಾವೊಂದರಲ್ಲಿ ಈ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಅಂದು ಸಾಹೇಬರು‌ ತಾಂಡಾದ ಹೊರವಲಯದಲ್ಲಿ ಇತ್ತೀಚೆಗೆ ಕಟ್ಟಿಸಿರುವ ಹೊಸ ಮನೆಯಲ್ಲಿ ಒಬ್ಬರೇ ಇದ್ದಾರೆ. ಮಟ ಮಟ‌ ಮಧ್ಯಾಹ್ನ ಅಪ್ರಾಪ್ತ ಬಾಲಕಿ ಸಮೇತ ಮೂವರು ಬಹಿರ್ದೆಸೆಗೆ ಬಂದಿದ್ದಾರೆ. ಅದೂ ಈ‌ ಪೊಲೀಸ್ ಪ್ಪನ ಮನೆಯ ಕೂಗಳತೆಯಲ್ಲಿ.

ಸಾಹೇಬರು‌ ಮೂವರನ್ನು ಕರೆದು ಚಾಕಲೇಟ್, ಚಿಪ್ಸ್ ಆಶೆ ತೋರಿಸಿ ಒಳಗೆ ಕರೆದಿದ್ದಾರೆ ಅಂತೆ. ಅದರಲ್ಲಿ ಇಬ್ಬರು ಸಣ್ಣ ಮಕ್ಕಳನ್ನು ನೀವು ಮನೆಗೆ ಹೋಗಿ ಅಂದಿದ್ದಾನೆ.

ಇಬ್ಬರೇ ಮನೆಗೆ ಬಂದ ಮಕ್ಕಳನ್ನು ಪೋಷಕರು ಇನ್ನೊಬಳು ಎಲ್ಲಿ ಎಂದಾಗ, ಆ ಮಕ್ಕಳು ಪೊಲೀಸಪ್ಪನ ವೃತ್ತಾಂತ ಹೇಳಿದ್ದಾರೆ. ಆಗ ಪೋಷಕರು ಎದ್ನೋ….ಬಿದ್ನೋ ಅಂತ ಎಎಸ್ ಐ ಸಾಹೇಬರ ಮನೆಗೆ ಬಂದಾಗ ಸಾಹೇಬರು ತುಂಡುಡಗೆಯಲ್ಲಿ‌ ಇದ್ದರು. ಗಾಬರಿ ಬಿದ್ದ ಬಾಲಕಿಯ ಪೋಷಕರು ಪೊಲೀಸಪ್ಪನ ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಸಾಹೇಬರ ಚಪಲ ಸ್ವಲ್ಪವೇ ತೀರಿದೆ. ಆದರೆ ಅಂತಹ‌ ಅನಾಹುತ ಆಗಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಪೋಷಕರು ಸಾಹೇಬರಿಗೆ ಮಂಗಳಾರತಿ ಮಾಡಿ ಮನೆ ಕಡೆ ಹೋಗಿದ್ದಾರೆ.

ಈ ಘಟನೆ ಆದ ನಂತರ ಸಾಹೇಬರ ವರಸೆಯೇ‌ ಬದಲಾಗಿದೆ. ಖಾಕಿ ಡ್ರೆಸ್ ಮೈ‌ಮೇಲೆ ಹಾಕಿಕೊಂಡು ಆ ಬಾಲಕಿ ಮನೆಗೆ ಹೋಗಿ ದೊಡ್ಡ ರಾದ್ದಾಂತ ಮಾಡಿದ್ದಾನೆ. ಅವರಿಗೆ ಹೆದರಿಸಿದ್ದಾನೆ.‌ಅದರೆ ಆ ಪೋಷಕರು ಪೊಲೀಸಪ್ಪನ ಯಾವುದೇ ಬೆದರಿಕೆಗೆ ಬಗ್ಗದೇ ಸೀದಾ ತಾಂಡಾದ ಹಿರಿಯರ ಹತ್ರ ಹೋಗಿ ನ್ಯಾಯ ಕೇಳಿದ್ದಾರೆ.

ತಾಂಡಾದ ಪ್ರಮುಖರು ಸೋಮವಾರ ಮಧ್ಯಾಹ್ನ ಸಭೆ ಸೇರಿ ಎಎಸ್ ಐ ಸಾಹೇಬರನ ಕರೆಸಿ ನೀವು ಮಾಡಿದ್ದು ಖರೇನಾ ಅಂತ ಕೇಳಿದ್ದಾರೆ. ಸಾಹೇಬರು ತಲೆ ತಗ್ಗಿಸಿದ್ದಾರೆ. ಇದರಿಂದ ತಾಂಡಾದ ಹಿರಿಯರಿಗೂ ಖಾತ್ರಿಯಾಗಿದೆ ಪೊಲೀಸಪ್ಪನ ಲೈಂಗಿಕ ಕಿರುಕುಳ. ಆಗ ನಾಲ್ಕು ಲಕ್ಷ ರೂ, ದಂಡ ಕೊಡಬೇಕು ಅಂದವರೇ. ಇಲ್ಲ ಅಷ್ಟು ಆಗಲ್ಲ…ಇಷ್ಟು ಆಗಲ್ಲ ಅಂದವನೇ ಎರಡು ಲಕ್ಷ ರೂಪಾಯಿ ಕೊಡ್ತೀನಿ ಅಂತ ಒಪ್ಪಕೊಂಡು‌ ಶುಕ್ರವಾರ ಯಾವುದೇ ಕಾರಣಕ್ಕೂ ಮಿಸ್ ಮಾಡಂಗಿಲ್ಲ ಅಂತ ಮಾತು ಕೊಟ್ಟು ಆ‌ ಸಭೆಯಿಂದ ಎದ್ದು ಬಂದು ಡ್ಯೂಟಿ ಮಾಡ್ತಾ ಇದ್ದಾರೆ. ಇದೀಗ ಈ ಸುದ್ದಿ ಇಡೀ ತಾಂಡಾದಲ್ಲಿ….ಶಹರ ಠಾಣೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ಆದರೆ ಸಾಹೇಬರು ಮಾತ್ರ ತಮ್ಮ ಪಟಾಲಂ ಬಳಿ ಅಂತಹ ಯಾವುದೇ ಕೆಲಸ ಮಾಡಿಲ್ಲ, ನಾ ಯಾಕೆ ದುಡ್ಡು ಕೊಡಲಿ ಅಂತ ಮೀಸೆ ಮೇಲೆ ಕೈ ಹಾಕ್ತಾ ಇದ್ದಾರೆ.

ಅಂದಹಾಗೆ ಎಎಸ್ಐ ಸಾಹೇಬರು ಆ ತಾಂಡಾಕ್ಕೆ ಅಳಿಯದೇವರು. ಪತ್ನಿಯ ತವರುಮನೆ ಅಂತೆ. ಆತನದು ಸೊರಟೂರು ಬಳಿ ಇರುವ ತಾಂಡಾ ಅಂತೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!