ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡು-ನುಡಿಗಾಗಿ ಅನುಪಮ ಸೇವೆ ಸಲ್ಲಿಸಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಧನ್ಯ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷ ರಮೇಶ್ ಚಲವಾದಿ ಹಾಗೂ ಗದಗ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘ ರಚಿಸಿ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷ ಮೆಹಬೂಬ್ಖಾನ್ ಪಠಾನ್ ಇವರೆಲ್ಲರಿಗೂ ಭೀಮ ಬಂಧುಗಳ ಪರವಾಗಿ ಯುವ ಕರ್ನಾಟಕ ಭೀಮ ಸೇನೆ ಯುವಶಕ್ತಿ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಮು ಬಾಗಲಕೋಟ್, ಶಹರ ಘಟಕದ ಅಧ್ಯಕ್ಷ ಶಬ್ಬೀರ್ ತಹಸೀಲ್ದಾರ್, ಉಪಾಧ್ಯಕ್ಷ ಖಾಜಿಸಾಬ್ ಗಬ್ಬೂರ, ಪ್ರಧಾನ ಕಾರ್ಯದರ್ಶಿ ನಾಸಿರ್ ಚಿಕೇನಕೊಪ್ಪ, ಯಂಕಪ್ಪ ತಾಳದವರ್, ನಜೀರ್ ಬಳ್ಳಾರಿ, ಖಾದರ್ಭಾಷಾ ನವಲಗುಂದ್, ರಫೀಕ್ ಹಣಗಿ, ಮೊಹಮ್ಮದ್ರಫೀಕ್ ಹಣಗಿ, ಶಾಬುದ್ದೀನ್ ಧಾರವಾಡ, ಮಂಜುನಾಥ್ ಹೂವಿನಹಳ್ಳಿ, ಸಾಧಿಕ್ ಅರಗಂಜಿ, ಮುನ್ನಾ ಹರ್ಲಾಪುರ್, ರಶೀದ್ ನಾಗರದಿನ್ನಿ, ಇದರಿಸ ಮುಲ್ಲಾಲ್ ಮೆಹಬೂಬ್ ಬೆಟಗೇರಿ, ರೆಹಮಾನ್ಸಾಬ್ ಕಳಸಾಪುರ್, ಮುನ್ನಾ ಮುಳಗುಂದ, ರಾಘು ಪತ್ತಾರ್, ಝಬಿವುಲ್ಲಾ ಬೊದ್ಲೆಖಾನ್, ಆನಂದ್ ಗಡ್ಡದವರ, ದುರ್ಗೇಶ್ ಕಿನ್ನರಿ, ಹುಸೇನ್ಸಾಬ್ ಬೆಳಗಟ್ಟಿ, ಇಸ್ಮಾಯಿಲ್ ಶಿರ್ವಾರ್, ತೌಸಿಫ್ ಗೋಗೇರಿ, ಮೊಹಮ್ಮದ್ರಫೀಕ್ ಕರೆಕಾಯಿ, ಫಾರೂಕ್ ಶಿರಹಟ್ಟಿ, ಚೇತನ್ಸಿಂಗ್ ತಾಳಿಕೋಟಿ, ಅಬ್ಬು ವನಂಬಡಿ ಸೇರಿದಂತೆ ಮುಂತಾದವರಿದ್ದರು.