ಗದಗ: ಅಮೇರಿಕಾ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಚುನಾವಣಾ ಆಯೋಗ ತನ್ನ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಂಡಿದೆ’ ಎಂದು ಆರೋಪಿಸಿದ್ದಾರೆ. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದ್ದು, ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಚುನಾವಣೆ ಬಗ್ಗೆ ಅಮೇರಿಕದಲ್ಲಿ ಮಾತನಾಡಿದ್ದಾರೆ. ಏನೇ ಇದ್ರೂ ಸಂಸತ್ತಿನಲ್ಲಿ ಮಾತಾಡಬೇಕಿತ್ತು. ಅವಕಾಶ ಇತ್ತು. ಆದ್ರೆ ವಿದೇಶದಲ್ಲಿ ದೇಶದ ಬಗ್ಗೆ ಮಾತನಾಡಿದ್ದಾರೆ. ದೇಶದ ವ್ಯವಸ್ಥೆ ಬಗ್ಗೆ ಬೇಜವಾಬ್ದಾರಿ ಮಾತನಾಡೋದು ಸರಿಯಲ್ಲ, ಇದು ರಾಹುಲ್ ಗಾಂಧಿಯ ಮೂರ್ಖತನದ ಪರಮಾವಧಿ ಅಂತ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಬೆಲೆ ಏರಿಕೆ ಪರಿಣಾಮ ದೇಶದಲ್ಲಿ ಕರ್ನಾಟಕ ದುಬಾರಿ ರಾಜ್ಯ ಎನ್ನುವಂತಾಗಿದ್ದು, ದೇಶದಲ್ಲೇ ಎಲ್ಲ ರೀತಿಯ ಬೆಲೆ ಏರಿಕೆ ಮಾಡಿದೆ. ಹೀಗಾಗಿ ದೇಶದಲ್ಲಿ ಬೆಲೆ ಏರಿಕೆ ದುಬಾರಿ ರಾಜ್ಯವಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಕರಪ್ಟ್ ರಾಜಕಾರಣಿಯಾಗಿದ್ದು, ಮೈಸೂರು ಮೂಡಾ ಹಗರಣ ನಾವು ತಪ್ಪು ಎಸಗಿಲ್ಲ ಅಂತಿದ್ರು. ಅದೇ ಸಿದ್ದರಾಮಯ್ಯ 14 ನಿವೇಶನ ವಾಪಸ್ ನೀಡಿದ್ರು. ಸಿಎಂ ಸಿದ್ದರಾಮಯ್ಯ ಕ್ಲೀನ್ ಪಾಲಿಟಿಶಿಯನ್ ಅಲ್ಲ, ಸಿದ್ದರಾಮಯ್ಯ ಭ್ರಷ್ಟರು ಅಂತ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅದಲ್ಲದೆ ಕಾಂಗ್ರೆಸ್ ಗೆ ಜನಾಕ್ರೋಶ ಯಾತ್ರೆಯ ಬಗ್ಗೆ ಭಯವಾಗಿದ್ದು, ಆದ್ದರಿಂದ ಈ ವಿಚಾರ ಮರೆಮಾಚಲು ಜಾತಿಜನಣಗತಿ ವಿಚಾರ ಎತ್ತಿದ್ದಾರೆ. ಸಿಎಂ ಆಕಾಂಕ್ಷೆಗಳಿಗೆ ಹಾಗೂ ವಿಪಕ್ಷಗಳಿಗೆ ಹೆದರಿಸುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಗೂ ಸಿದ್ದರಾಮಯ್ಯ ಹೆದರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.