ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಮನೆಗೆ ಬಂದಿದ್ದ ಸೋಂಕಿತ ಅಣ್ಣನನ್ನೇ ಸಹೋದರ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ. ಮಹಾವೀರ (45) ಕೊಲೆಯಾದ ವ್ಯಕ್ತಿ. ಮೃತನ ಸಹೋದರನೇ ಆಗಿರುವ ಪಾರ್ಶ್ವನಾಥ್ ಕೊಲೆ ಮಾಡಿರುವ ವ್ಯಕ್ತಿ.
ಕೊಲೆಯಾಗಿರುವ ಮಹಾವೀರ ಸೋಂಕಿನಿಂದ ಗುಣಮುಖನಾಗದಿದ್ದರೂ ಮನೆಗೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದ. ಹೀಗೆ ಸೋಂಕಿನಿಂದ ಗುಣಮುಖನಾಗದಿದ್ದರೂ ಬಂದಿರುವುದಕ್ಕೆ ತಮ್ಮ ಪ್ರಶ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಕೋಪಗೊಂಡ ತಮ್ಮ, ಅಣ್ಣನ ಕೊಲೆ ಮಾಡಿದ್ದಾನೆ. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣವಾಗಿರುವ ತಮ್ಮನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.