ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ: 4 ತಿಂಗಳ ಬಳಿಕ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಾಲಕ

0
Spread the love

ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಪ್ರೀಮಿಯರ್‌ ವೇಳೆ ಸಂಭವಿಸಿದೆ ಕಾಲ್ತುಳಿತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಆಕೆಯ ಮಗ ಶ್ರೀತೇಜ್‌ ಕೋಮಾ ಸ್ಥಿತಿ ತಲುಪಿದ್ದ. ಆತನ ಪರಿಸ್ಥಿತಿ ತುಂಬಾನೇ ಗಂಭೀರ ಆಗಿತ್ತು. ನಾಲ್ಕು ತಿಂಗಳ ಕಾಲ ಆತನಿಗೆ ಚಿಕಿತ್ಸೆ ನೀಡಲಾಗಿತು. ಇದೀಗ ಕೊನೆಗೂ ಶ್ರೀತೇಜ್‌ ರಿಕವರಿ ಆಗಿದ್ದಾನೆ.

Advertisement

ಹೈದರಾಬಾದ್‌ ನ ಸಂಧ್ಯ ಥೀಯೇಟರ್‌ ನಲ್ಲಿ ‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ವೇಳೆ ಚಿತ್ರ ತಂಡ ಆಗಮಿಸಿತ್ತು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಪೊಲೀಸರು ಇದನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಸಾಧ್ಯವಾಗಿಲ್ಲ. ಈ ವೇಳೆ ಪೊಲೀಸರು ಲಾಠಿ ಚಾರ್ಜ್​ ಮಾಡಿದರು. ಕಾಲ್ತುಳಿತ ಕೂಡ ಉಂಟಾಯಿತು. ಈ ವೇಳೆ ಮಹಿಳೆ ಮೃತಪಟ್ಟರು. ಅವರ ಮಗ ಶ್ರೀತೇಜ್​ಗೆ ತೀವ್ರ ಗಾಯಗಳು ಆಗಿದ್ದವು. ಹೈದರಾಬಾದ್​ನ ಕಿಮ್ಸ್ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಯಿತು. ಸತತ ನಾಲ್ಕು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿದೆ ಇದೀಗ ಶ್ರೀತೇಜ್‌ ಕೊಂಚ ಚೇತರಿಸಿಕೊಂಡಿದ್ದಾನೆ.

ನಟ ಅಲ್ಲು ಅರ್ಜುನ್ ಮಾತ್ರವಲ್ಲ, ತೆಲಂಗಾಣ ಸರ್ಕಾರ, ‘ಪುಷ್ಪ 2’ ತಂಡದವರು ಆತ ರಿಕವರಿ ಆಗಲೇಬೇಕು ಎಂದು ವೈದ್ಯರ ಬಳಿ ಒತ್ತಾಯಿಸಿದ್ದರು. ಅಲ್ಲದೆ ಅಗತ್ಯ ಸಹಾಯವನ್ನು ನೀಡುವ ಭರವಸೆ ನೀಡಿದ್ದರು. ವೈದ್ಯರ ಸತತ ಪ್ರಯತ್ನದಿಂದ ಶ್ರೀತೇಜ್ ಚೇತರಿಕೆ ಕಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಚೇತರಿಕೆಕಂಡಿರುವ ಶ್ರೀತೇಜ್​ನ ಮನೆಗೆ ಕಳುಹಿಸುತ್ತಿಲ್ಲ. ಬದಲಿಗೆ ಆತನನ್ನು ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಅಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಅವನ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಪುನರ್ವಸತಿ ಕೇಂದ್ರದ ಸಮಯದಲ್ಲಿ ಅವರ ಆರೋಗ್ಯ ಮತ್ತಷ್ಟು ಚೇತರಿಕೆ ಕಾಣುವ ನಿರೀಕ್ಷೆ ಇದ್ದು ಆ ಬಳಿಕ ಆತನನ್ನು ಮನೆಗೆ ಕಳುಹಿಸಲಾಗುತ್ತದೆ.


Spread the love

LEAVE A REPLY

Please enter your comment!
Please enter your name here