ಬೆಳಗಾವಿ:-ಮಾತಾಡ್ಬೇಕು ಬಾ ಎಂದು ಕರೆದು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳ ಗುಂಪೊಂದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೋಕಾಕ್ ನಗರದ ಸತೀಶ್ ಜಾರಕಿಹೊಳಿ ನಿವಾಸದ ರಸ್ತೆಯಲ್ಲಿ ಜರುಗಿದೆ. 25 ವರ್ಷದ ಪರಶುರಾಮ ಗೊಂದಳಿ ಕೊಲೆಯಾದ ವ್ಯಕ್ತಿ.
Advertisement
ಹೌದು, ಮಾತನಾಡೋದಿದೆ ಬಾ ಎಂದು ಯುವಕನನ್ನು ಕರೆದು ಕೊಲೆ ಮಾಡಿ ದುಷ್ಕರ್ಮಿಗಳ ಗ್ಯಾಂಗ್ ಪರಾರಿ ಆಗಿದೆ. ಕೂಡಲೇ ಸ್ಥಳಕ್ಕೆ ಗೋಕಾಕ್ ನಗರ CPI, PSI ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.