ಶ್ರೀ ಮಾರುತಿ ದೇವರಿಗೆ ವಜ್ರಲೇಪನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹೊಂಬಳ ಗ್ರಾಮದ ಮಾರುತಿ ದೇವರ ಮೂರ್ತಿಗೆ ವಜ್ರಲೇಪನ ಹಾಗೂ ಪುನಃಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಸ್ತುತ ದೇಶದಲ್ಲಿಯ ಯುದ್ಧದ ವಾತಾವರಣದ ವಿಷಮ ಸ್ಥಿತಿಯಲ್ಲಿ ಶ್ರೀ ಮಾರುತಿ ಸಕಲರಿಗೆ ಒಳಿತನ್ನುಂಟು ಮಾಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

Advertisement

ಗ್ರಾಮದ ಹಿರಿಯರು, ತಾಯಂದಿರು ಶ್ರೀ ಮಾರುತಿ ದೇವರ ಪಲ್ಲಕ್ಕಿ ಸೇವೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಪೂಜಾ ಕೈಂಕರ್ಯದ ಸೇವೆಯನ್ನು ರಂಗನಾಥ (ವಿನೋದ), ಶ್ರೀನಿವಾಸ ಕುಲಕರ್ಣಿ ನೆರವೇರಿಸಿದರು. ಡಿ.ಆರ್. ಶಲವಡಿ, ಎಸ್.ಎನ್. ಬದಾಮಿ, ಶೇಷಗಿರಿರಾವ್, ಉಗ್ರದ, ಶ್ರೀನಿವಾಸ ಪೂಜಾರ, ಹೇಮಂತ ಕುಲಕರ್ಣಿ, ಜಿ.ಸಿ. ಕೊರವನವರ, ಕಳಕಪ್ಪ ಕುರಹಟ್ಟಿ, ದೇವಸ್ಥಾನದ ಕಮಿಟಿಯ ಅಧ್ಯಕ್ಷ ಚಂದ್ರಶೇಖರ ರಾಜೂರ, ಪದಾಧಿಕಾರಿಗಳಾದ ಶಿವಾನಂದ ಸಜ್ಜನ, ಶಿವಾನಂದ ಚೌಡಕಿ, ಮಲ್ಲಪ್ಪ ಹೊರಪೇಟಿ, ಅಂದಪ್ಪ ಎಕ್ಲಾಸಪೂರ ಮೊದಲಾದವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಶೇಷ ಪೂಜಾ ಸೇವೆ ಸಲ್ಲಿಸಿದ ರಂಗನಾಥ (ವಿನೋದ) ಶ್ರೀನಿವಾಸ ಕುಲಕರ್ಣಿ ಅವರನ್ನು ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.


Spread the love

LEAVE A REPLY

Please enter your comment!
Please enter your name here