HomeEntertainmentಆರತಿ ನನ್ನನ್ನು ಹಣ ಮಾಡುವ ಯಂತ್ರದಂತೆ ನಡೆಸಿಕೊಂಡಳು: ನಟ ರವಿ ಮೋಹನ್ ಆರೋಪ

ಆರತಿ ನನ್ನನ್ನು ಹಣ ಮಾಡುವ ಯಂತ್ರದಂತೆ ನಡೆಸಿಕೊಂಡಳು: ನಟ ರವಿ ಮೋಹನ್ ಆರೋಪ

For Dai;y Updates Join Our whatsapp Group

Spread the love

ಖ್ಯಾತ ನಟ ರವಿ ಮೋಹನ್‌ ಪತಿ ಆರತಿ ಅವರಿಂದ ದೂರವಾಗಿದ್ದಾರೆ. ಇದೀಗ ಪತ್ನಿ ಬಗ್ಗೆ ಆರೋಪ ಮಾಡಿರುವ ರವಿ ಮೋಹನ್‌, ಆರತಿ ನನ್ನನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ರೀತಿ ನಡೆಸಿಕೊಂಡಳು. ಅವಳು ನನ್ನ ಮಕ್ಕಳನ್ನು ಸಹ ನೋಡದಂತೆ ತಡೆಯುತ್ತಾಳೆ. ಈ ದುಸ್ಥಿತಿ ಯಾವ ತಂದೆಗೆ ಬರಬಾರದು ಎಂದು ಅಳಲು ತೋಡಿಕೊಂಡಿದ್ದಾರೆ.

ರವಿ ಮೋಹನ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಆರತಿ, ಇತ್ತೀಚೆಗೆ ರವಿ ಮೋಹನ್ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ರವಿ ಮೋಹನ್‌ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ. ಹೇಳಿಕೆಯಲ್ಲಿ ಆರತಿಯ ಹೆಸರನ್ನು ಉಲ್ಲೇಖಿಸದೆ, ಮಾಜಿ ಪತ್ನಿ ಎಂದು ಮಾತ್ರ ಹೇಳಿದ್ದಾರೆ. ಇದು ಮೊದಲ ಮತ್ತು ಕೊನೆಯ ಹೇಳಿಕೆ ಎಂದೂ ಸಹ ರವಿ ಬರೆದುಕೊಂಡಿದ್ದಾರೆ.

ಹೆಂಡತಿಯಿಂದ ದೂರ ಆಗಿದ್ದೇನೆ, ಮಕ್ಕಳಿಂದ ಅಲ್ಲ. ಮಕ್ಕಳನ್ನ ಬಳಸಿಕೊಂಡು ಹಣ ಮಾಡಲು ನೋಡ್ತಿದ್ದಾರೆ. ಆರತಿ ಜೊತೆ ಜೀವನ ಮುಂದುವರಿಸಲು ಪ್ರಯತ್ನಿಸಿದೆ. ಆದರೆ ನನ್ನನ್ನು ಹಣ ಮಾಡುವ ಯಂತ್ರದಂತೆ ನೋಡಿದ್ರು. ಗಂಡನಾಗಿ ಗೌರವ ಕೊಡಲಿಲ್ಲ. ಮಕ್ಕಳನ್ನ ನೋಡಲು ಬಿಡುತ್ತಿಲ್ಲ. 5 ವರ್ಷದಿಂದ ನನ್ನ ದುಡಿಮೆಯನ್ನೆಲ್ಲಾ ಆರತಿ ಮತ್ತು ಅವರ ಕುಟುಂಬ ಉಪಯೋಗಿಸಿಕೊಂಡಿದೆ ಎಂದು ರವಿ ಮೋಹನ್‌ ಆರೋಪಿಸಿದ್ದಾರೆ.

ರವಿ ಮೋಹನ್‌ ಹೆಸರು ಖ್ಯಾತ ಗಾಯಕಿ ಕೆನಿಶಾ ಅವರ ಜೊತೆ ಕೇಳಿ ಬಂದಿತ್ತು. ಆದರೆ ತಮ್ಮಿಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ. ನಾವಿಬ್ಬರು ಕೇವಲ ಸ್ನೇಹಿತರು ಎಂದು ರವಿ ಸ್ಪಷ್ಟನೆ ನೀಡಿದ್ದರು. ಆದ್ರೆ ಇತ್ತೀಚೆಗೆ ಚೆನ್ನೈನಲ್ಲಿ ನಿರ್ಮಾಪಕ ಇಶಾರಿ ಗಣೇಶ್‌ ಅವರ ಮಗಳ ಮದುವೆಯಲ್ಲಿ ರವಿ ಹಾಗೂ ಕೆನಿಶಾ ಒಟ್ಟಿಗೆ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಗಿದ್ದರು. ಆ ಬಳಿಕ ನಟನ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಪತ್ನಿ ಆರತಿ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಇದರ ಬೆನ್ನಲ್ಲೇ ಮತ್ತೊಮ್ಮೆ ರವಿ ಹಾಗೂ ಕೆನಿಶಾ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆರತಿ ಮಾಡಿದ ಆರೋಪಗಳಿಂದ ವಿಚಲಿತರಾಗದ ರವಿ ಮೋಹನ್, ಕೆನಿಶಾ ಫ್ರಾನ್ಸಿಸ್ ಜೊತೆಗೆ ಮೇ 10 ರಂದು ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಆರತಿ ಪೋಸ್ಟ್‌ನಲ್ಲಿ ಏನಿದೆ?

ನನ್ನ ಮಕ್ಕಳು 10 ಮತ್ತು 14 ವರ್ಷ ವಯಸ್ಸಿನವರು. ಅವರಿಗೆ ಭದ್ರತೆ ಬೇಕು, ಅವರು ಕಾನೂನು ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವರು, ನಾನು ಇಂದು ಹೆಂಡತಿಯಾಗಿ ಮಾತನಾಡುವುದಿಲ್ಲ. ಅನ್ಯಾಯಕ್ಕೊಳಗಾದ ಮಹಿಳೆಯಾಗಿಯೂ ಅಲ್ಲ. ತಂದೆ ಕೇವಲ ಬಿರುದಲ್ಲ. ಅದು ಒಂದು ಜವಾಬ್ದಾರಿ. ನಾನು ಮತ್ತು ಕಾನೂನು ಇಬ್ಬರೂ ಬೇರೆ ರೀತಿಯಲ್ಲಿ ನಿರ್ಧರಿಸುವವರೆಗೆ ನಾನು ಆರತಿ ರವಿಯಾಗಿಯೇ ಇರುತ್ತೇನೆ. ಮಾಧ್ಯಮಗಳು, ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ನನ್ನನ್ನು ಮಾಜಿ ಪತ್ನಿ ಎಂದು ಕರೆಯಬಾರದು ಎಂದು ಮನವಿ ಮಾಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!