ಶಾಲಾ ಆವರಣದ ಸ್ವಚ್ಛತೆ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: 2025/26ನೇ ಸಾಲಿನ ಶೈಕ್ಷಣಿಕ ವರ್ಷ ಶಾಲಾ ಪ್ರಾರಂಭೊತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ.1ರ ಆವರಣ ಹಾಗೂ ಶೌಚಾಲಯಗಳನ್ನು ಅವ್ವ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಮಂಜುನಾಥ ಮಟ್ಟಿ ಶಿಕ್ಷಕರ ನೇತೃತ್ವದಲ್ಲಿ ಸ್ವಚ್ಛಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಯೋಧ ರಾಜು ರಸಾಳಕರ ಮಾತನಾಡಿ, ಸರಕಾರಿ ಶಾಲೆಗಳ ಉಳಿಯಬೇಕು, ಬೆಳೆಯಬೇಕು. ಸರಕಾರಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರಿರುತ್ತಾರೆ. ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮಾಡಿಸಬೇಕು, ಸರಕಾರ ಹಾಗೂ ಶಿಕ್ಷಣ ಇಲಾಖೆ ಮಕ್ಕಳಿಗಾಗಿ ಹಗಲಿರುಳು ಶ್ರಮಿಸುತ್ತಿವೆ. ನನಗೂ ಈ ಶಾಲೆಯ ಸೇವಾ ಋಣ ತೀರಿಸುವ ಭಾಗ್ಯ ಕರುಣಿಸಿದ ಅವ್ವ ಸೇವಾ ಪ್ರತಿಷ್ಠಾನ ಸಾಮಾಜಿಕ ಕಾರ್ಯ ಮಾಡುತ್ತಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಶಿಕ್ಷಕ ಕೆ.ಎಂ. ಹೆರಕಲ್ಲ, ಶರಣಪ್ಪ ಬಾಳಿಕಾಯಿ, ಸಾಹಿತಿ ಮಂಜುನಾಥ ಮಟ್ಟಿ, ಪ್ರಕಾಶ ಬಡಿಗೇರ, ವಿದ್ಯಾರ್ಥಿಗಳಾದ ಶ್ರೀನಿಧಿ ಸಿದ್ದನಗೌಡರ, ಕಾರ್ತಿಕ ಸಿದ್ದನಗೌಡರ, ವೀಣಾ ಟಿ, ಎಸ್.ವಿ. ಹಿರೇಮಠ, ಎಚ್.ಆರ್. ಭಜಂತ್ರಿ, ಅಡುಗೆ ಸಿಬ್ಬಂದಿ ಸಂಕಮ್ಮಾ ಯಳವತ್ತಿ, ರೇಣುಕಾ ಬಗಾಡೆ, ಮಾಬುಬ್ಬಿ ಹೊಸೂರ, ಲಕ್ಷ್ಮೀ ಬೇಂದ್ರೆ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here