ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನದಲ್ಲಿ ಶಾಲಾ ನಾಯಕ-ನಾಯಕಿ ಮತ್ತು ಉಪ ನಾಯಕ-ಉಪನಾಯಕಿಯರನ್ನು ಆಯ್ಕೆ ಮಾಡಲು ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.
ಸಾರ್ವತ್ರಿಕ ಚುನಾವಣೆಯಲ್ಲಿ ಪಾಲಿಸಲಾಗುವ ಎಲ್ಲಾ ಹಂತಗಳನ್ನು ಪಾಲಿಸಲಾಯಿತು. ಚುನಾವಣಾ ಘೋಷಣೆಯಿಂದ ಹಿಡಿದು, ನಾಮಪತ್ರ ಸಲ್ಲಿಕೆ, ಅಭ್ಯರ್ಥಿಗಳ ಪ್ರಚಾರ ಭಾಷಣ, ಅಭ್ಯರ್ಥಿಗಳ ಪರವಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ, ಚುನಾವಣಾ ಜಾಗೃತಿ ನಾಟಕ, ಕೊನೆಯಲ್ಲಿ ಮತದಾನದ ಹಂತಗಳನ್ನು ಪಾಲಿಸಲಾಯಿತು.
ಶಾಲೆಯ ಯುವ ಪೀಳಿಗೆಯಲ್ಲಿ ಚುನಾವಣೆ ಮತ್ತು ಮತದಾನದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ವಿಶೇಷ ಶ್ರಮವಹಿಸಿ ಎಲೆಕ್ಟಾçನಿಕ್ ವೋಟಿಂಗ್ ಮಷಿನ್ ಮಾದರಿಯ ಸಾಫ್ಟ್ ವೇರ್ ತಯಾರಿಸಿ ಅದರಲ್ಲಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸುವ ಮೂಲಕ ತಮ್ಮ ನಾಯಕ-ನಾಯಕಿಯರನ್ನು ತಾವೇ ಆಯ್ಕೆ ಮಾಡಿದರು.
ಶಾಲಾ ಚುನಾವಣಾ ಅಧಿಕಾರಿಯಾಗಿ ಹಿರಿಯ ಶಿಕ್ಷಕಿ ಸವಿತಾ ತುಕೋಳ ಕಾರ್ಯ ನಿರ್ವಹಿಸಿದರು.