ಬೆಂಗಳೂರು:- ನಗರದ ಉಲ್ಲಾಳ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಹಾಕದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸರಿಗೆ ವ್ಯಕ್ತಿಯೋರ್ವ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಘಟನೆ ಜರುಗಿದೆ. ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂದು ಸಂಚಾರಿ ಪೊಲೀಸರಿಗೆ ನವೀನ್ ಎಂಬ ವ್ಯಕ್ತಿ ಅವಾಜ್ ಹಾಕಿದ್ದಾನೆ.
ಸಂಚಾರಿ ಪೊಲೀಸರು, ಉಲ್ಲಾಳ ಮುಖ್ಯರಸ್ತೆಯಲ್ಲಿ ವಾಹನ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸಿಕೊಂಡು ನವೀನ್ ಎಂಬಾತ ಬಂದಿದ್ದ. ಈ ವೇಳೆ ಪೊಲೀಸರು ಬೈಕ್ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ಪ್ರಶ್ನೆ ಮಾಡಿದ ವೇಳೆ ಏಕವಚನದಲ್ಲೇ ನಿಂದಿಸಿ ನವೀನ್ ಅವಾಜ್ ಹಾಕಿದ್ದಾನೆ. “ಹೆಲ್ಮೆಟ್ ಹಾಕುವುದಿಲ್ಲ, ಫೈನ್ ಕಟ್ಟುವುದಿಲ್ಲ, ಯಾರನ್ನ ಕರಿಸ್ತಿಯಾ ಕರೆಸು. ಇಲ್ಲಿ ಫೈನ್ ಹಾಕಲು ನಿನಗೆ ಹೇಳಿದವರ್ಯಾರು,ಕೇಸ್ ಹಾಕ್ಬಾರ್ದು. ನೀವ್ ಕೇಸ್ ಹಾಕ್ತಿರೋದನ್ನ ನೋಡಿ ಬೇಕಂತಲೇ ಹೆಲ್ಮೆಟ್ ಧರಿಸದೇ ಬಂದಿದ್ದೇನೆ. ತಾನು ಯಶವಂತಪುರ ಜೆಡಿಎಸ್ ಅಧ್ಯಕ್ಷ ಎಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ಆರೋಪಿಯನ್ನ ಜ್ಞಾನಭಾರತಿ ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.