ಮುಖರ್ಜಿಯವರ ಸಂಕಲ್ಪ ಸಾಕಾರಗೊಂಡಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಲು ಹೋರಾಟ ಮಾಡುತ್ತಾ ಪ್ರಾಣ ತ್ಯಾಗ ಮಾಡಿದ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಅವರ ಸಂಕಲ್ಪವನ್ನು ಆರ್ಟಿಕಲ್ 370 ರದ್ದು ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಸಾಕಾರಗೊಳಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ನಾಗರಾಜ ಕುಲಕರ್ಣಿ ಹೇಳಿದರು.

Advertisement

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಪುಣ್ಯತಿಥಿ ನಿಮಿತ್ತ ಜರುಗಿದ `ಬಲಿದಾನ ದಿವಸ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಸ್ವಾತಂತ್ರ‍್ಯದ ಬಳಿಕವೂ ರಾಷ್ಟ್ರದ ಆಡಳಿತದಲ್ಲಿ ಒಂದಾಗದೆ ಪ್ರತ್ಯೇಕ ಪ್ರಧಾನಿ, ಧ್ವಜ, ಕಾನೂನು ಅನುಸರಿಸುವ ಮೂಲಕ ಕಾಶ್ಮೀರವು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂದು ಮನಗಂಡ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಪ್ರಧಾನಿ, ಎರಡು ರಾಷ್ಟ್ರಧ್ವಜ, ಎರಡು ಸಂವಿಧಾನ ನಡೆಯದು ಎಂದು ತೀವ್ರ ಹೋರಾಟ ಕೈಗೊಂಡ ಕಾಲದಲ್ಲಿಯೇ ಕಾಶ್ಮೀರದಲ್ಲಿ ಬಂಧನವಾಗಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ಅಂದಿನ ಅವರ ತ್ಯಾಗ-ಬಲಿದಾನ, ಸಂಕಲ್ಪಗಳು ವ್ಯರ್ಥವಾಗದೆ ಏಳು ದಶಕದ ನಂತರ ಈಗ ಈಡೇರಿದೆ ಎಂದು ಅಭಿಪ್ರಾಯಪಟ್ಟರು.

ಅತಿಥಿಗಳಾದ ಶ್ರೀಪತಿ ಉಡುಪಿ, ಎಂ.ಎಸ್. ಕರಿಗೌಡ್ರ ಮಾತನಾಡಿದರು. ಜಗನ್ನಾಥಸಾ ಭಾಂಡಗೆ, ಬಸವಣ್ಣೆಪ್ಪ ಚಿಂಚಲಿ, ಸುರೇಶ ಮರಳಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸುಧೀರ ಕಾಟೀಗರ, ಅಶೋಕ ಕುಡತಿನಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಸಿದ್ದು ಮೊರಬದ, ರಮೇಶ ಸಜ್ಜಗಾರ, ಶಂಕರ ಖಾಕಿ, ದೇವೇಂದ್ರಪ್ಪ ಗೋಟುರ, ಅಪ್ಪಣ್ಣ ಟೆಂಗಿನಕಾಯಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ರ, ದೇವೇಂದ್ರಪ್ಪ ಹೂಗಾರ, ಕುಮಾರ ಮಾರನಬಸರಿ, ಸಂತೋಷ ಕಲ್ಯಾಣಿ, ರಾಚಯ್ಯ ಹೊಸಮಠ, ವಿನೋದ ಹಂಸನೂರ ಮುಂತಾದವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ದೇಶದ ಅಖಂಡತೆ ಮತ್ತು ಸಮಗ್ರತೆಗಾಗಿ ಶ್ಯಾಮ ಪ್ರಸಾದ ಮುಖರ್ಜಿ ಅವರ ಸೇವೆ ಅನುಪಮ ಮತ್ತು ಅಪಾರವಾದದ್ದು. ಸ್ವಾರ್ಥವಿಲ್ಲದ ಅವರು ಬದುಕು, ಸದ್ವಿಚಾರದಿಂದ ವಿಮುಖರಾಗದೇ ಹೋರಾಟ, ದೇಶವೇ ಮೊದಲು ಎಂಬ ಅವರ ದೃಷ್ಟಿಕೋನವು ನಮಗೆಲ್ಲ ಮಾದರಿಯಾಗಿದೆ. ಅವರ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಬೆಳೆದ ಭಾರತೀಯ ಜನತಾ ಪಾರ್ಟಿ ಇಂದು ಪ್ರತಿ ಭಾರತೀಯನ ಮೊದಲ ಆಯ್ಕೆಯಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here