ನವದೆಹಲಿ: ಭಾರತವನ್ನು ಹೊರತುಪಡಿಸಿ, ವಿಶ್ವದ ಯಾವುದೇ ರಾಷ್ಟ್ರದ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತವನ್ನು ಹೊರತುಪಡಿಸಿ, ವಿಶ್ವದ ಯಾವುದೇ ರಾಷ್ಟ್ರದ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಿಲ್ಲ.
ಆದರೆ, ಭಾರತದಲ್ಲಿ ಇದನ್ನು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮಾಡಲಾಗಿದೆ. ಇದು ಸನಾತನ ಸಂಸ್ಕೃತಿಯ ಸ್ಫೂರ್ತಿಗೆ ಮಾಡಿದ ದ್ರೋಹವಾಗಿದೆ. ಈ ಪದಗಳ ಸೇರ್ಪಡೆ ಮೂಲಕ ಸಂವಿಧಾನದ ರಚನಾಕಾರರ ಚಿಂತನೆಯನ್ನು ಅವಮಾನಿಸಿದೆ ಎಂದು ತಿಳಿಸಿದರು.
ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ (1973) ಮತ್ತು ಐಸಿ ಗೋಲಕ್ನಾಥ್ ವರ್ಸಸ್ ಪಂಜಾಬ್ ರಾಜ್ಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ನ 13 ಮತ್ತು 11 ನ್ಯಾಯಾಧೀಶರ ತೀರ್ಪುಗಾರರ ಸಂಯೋಜನೆಯ ತೀರ್ಪುಗಳನ್ನು ಉಲ್ಲೇಖಿಸಿದ ಧನ್ಕರ್, ನ್ಯಾಯಮೂರ್ತಿ ಹೆಚ್ಆರ್ ಖನ್ನಾ, ನ್ಯಾಯಮೂರ್ತಿ ಸಿಕ್ರಿ, ನ್ಯಾಯಮೂರ್ತಿ ಹಿದಾಯತುಲ್ಲಾ,
ನ್ಯಾಯಮೂರ್ತಿ ಹೆಗ್ಡೆ, ನ್ಯಾಯಮೂರ್ತಿ ಮುಖರ್ಜಿ, ನ್ಯಾಯಮೂರ್ತಿ ಶೆಲತ್ ಮತ್ತು ನ್ಯಾಯಮೂರ್ತಿ ಗ್ರೋವರ್ ಅವರಂತಹ ದಿಗ್ಗಜರು ಪೀಠಿಕೆಯು ಸಂವಿಧಾನದ ಆತ್ಮವಾಗಿದ್ದು, ಇದು ಬದಲಾಯಿಸಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.