ಇದೆಂಥಾ ದುರ್ವಿಧಿ: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತದಲ್ಲಿ ಸಾವು!

0
Spread the love

ಮಂಗಳೂರು:- ಮಂಗಳೂರಿನ ಪಾವಂಜೆ ಬಳಿ ಮನಕಲಕುವ ಘಟನೆಯೊಂದು ಜರುಗಿದೆ. ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿಯಾಗಿರುವ ಘಟನೆ ಜರುಗಿದೆ. ನಗರದ ಬಂಗ್ರಕೂಳೂರು ನಿವಾಸಿಗಳಾದ ಶ್ರುತಿ ಹಾಗೂ ಸುಜಿತ್ ಮೃತಪಟ್ಟ ಅಕ್ಕ-ತಮ್ಮ. ಹದಿನೈದು ದಿನಗಳ ಅಂತರದಲ್ಲೇ ಅಕ್ಕ – ತಮ್ಮ ಇಬ್ಬರೂ ಸಾವನ್ನಪ್ಪಿದ್ದಾರೆ.

Advertisement

ಜೂನ್ 10ರಂದು ತಮ್ಮ ಸುಜಿತ್ ಮೃತಪಟ್ಟಿದ್ದ. ಹಾಗಾಗಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಶೃತಿ ಚೆನ್ನೈನಿಂದ ಬಂದಿದ್ದಳು. ಬ್ಯಾಂಕ್‌ ಕೆಲಸದ ನಿಮಿತ್ತ ಪಾವಂಜೆ ಬಳಿ ಸ್ಕೂಟರ್ ನಿಲ್ಲಿಸಿ ರೈನ್ ಕೋಟ್ ಧರಿಸುತ್ತಿದ್ದರು, ತಮ್ಮ ತಂದೆ ಕೂಡ ಜೊತೆಗಿದ್ದರು. ಈ ವೇಳೆ ಹಿಂಬಂದಿಯಿಂದ ಬಂದು ಕಾರು ಗುದ್ದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಶೃತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತಂದೆ ಗೋಪಾಲ ಆಚಾರ್ಯ ಅವರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಪಾಲ ಆಚಾರ್ಯರಿಗೆ ಇಬ್ಬರೇ ಮಕ್ಕಳಿದ್ದು, ಪುತ್ರನ ಸಾವು ಮಾಸುವ ಮುನ್ನವೇ ಪುತ್ರಿಯೂ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

LEAVE A REPLY

Please enter your comment!
Please enter your name here