₹40 ಕೋಟಿ ಚೀಟಿ ಹಣದ ಜೊತೆ ಕುಟುಂಬ ಪರಾರಿ: ಬೇಸತ್ತ ಜನರಿಂದ ಜಿ .ಪರಮೇಶ್ವರ್ ಮೊರೆ!

0
Spread the love

ಬೆಂಗಳೂರು: ನಗರದ ಜರಗನಹಳ್ಳಿಯಲ್ಲಿ ಚೀಟಿ ಹಣದ ಹೆಸರಿನಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕರಿಂದ ಸುಮಾರು ₹40 ಕೋಟಿ ವಂಚಿಸಿದ ದಂಪತಿಯೊಬ್ಬರು ಕುಟುಂಬ ಸಮೇತ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

Advertisement

ಆರೋಪಿಗಳು ಸುಧಾ ಮತ್ತು ಅವರ ಪತಿ ಸಿದ್ದಾಚಾರಿ, ಕಳೆದ 20 ವರ್ಷಗಳಿಂದ ಚೀಟಿ ಹಣದ ವ್ಯವಹಾರ ನಡೆಸುತ್ತಿದ್ದರು. ಸಾರ್ವಜನಿಕರು ₹5 ಲಕ್ಷದಿಂದ ₹10 ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದು, ಆರಂಭದಲ್ಲಿ ವ್ಯವಹಾರ ಸರಿಯಾಗಿ ನಡೆದರೂ, ಕಳೆದ ಒಂದು ವರ್ಷದಿಂದ ಹಣ ಹಂಚಿಕೆ ನಿಲ್ಲಿಸು ಲ್ಪಟ್ಟಿತ್ತು.

ಜೂನ್ 3ರ ರಾತ್ರಿ, ಸುಧಾ ದಂಪತಿ ತಮ್ಮ ಮಕ್ಕಳೊಂದಿಗೆ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಬ್ಯಾಂಕ್‌ನಲ್ಲಿದ್ದ ಚಿನ್ನವನ್ನು ತೆಗೆದುಕೊಂಡಿದ್ದು, ಮೊಬೈಲ್‌ಗಳನ್ನು ಮನೆದಲ್ಲಿಯೇ ಬಿಟ್ಟಿದ್ದಾರೆ. ಅದರೊಂದಿಗೆ ಕೆಲವೊಂದು ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಸಾರ್ವಜನಿಕರು ದೂರು ದಾಖಲಿಸಿದ್ದು,

ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂರೂ ವಿಭಿನ್ನ ತಂಡಗಳನ್ನು ರಚಿಸಿ, ಆರೋಪಿಗಳ ಪತ್ತೆಗೆ ಕ್ರಮ ಆರಂಭಿಸಿದ್ದಾರೆ. ಆದರೆ ಇನ್ನೂ ಬಂಧನವಾಗಿಲ್ಲ. ವಂಚಿತ ವ್ಯಕ್ತಿಗಳು ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಅವರಿಂದ ಸ್ಪಂದನೆ ಬರುವ ನಿರೀಕ್ಷೆಯಲ್ಲಿ ಹೂಡಿಕೆದಾರರು ನಿರೀಕ್ಷೆಯಲ್ಲಿದ್ದಾರೆ.


Spread the love

LEAVE A REPLY

Please enter your comment!
Please enter your name here