HomeKarnataka Newsರಾಯಚೂರು: ವಲಯ ಅರಣ್ಯ ಅಧಿಕಾರಿಗಳಿಂದ ಮತ್ತೊಂದು ಚಿರತೆ ಸೆರೆ- ನಿಟ್ಟುಸಿರು ಬಿಟ್ಟ ಜನತೆ

ರಾಯಚೂರು: ವಲಯ ಅರಣ್ಯ ಅಧಿಕಾರಿಗಳಿಂದ ಮತ್ತೊಂದು ಚಿರತೆ ಸೆರೆ- ನಿಟ್ಟುಸಿರು ಬಿಟ್ಟ ಜನತೆ

For Dai;y Updates Join Our whatsapp Group

Spread the love

ರಾಯಚೂರು:- ಸಾರ್ವಜನಿಕರಿಗೆ ಸಂಕಷ್ಟ ಒಡ್ಡುತ್ತಿದ್ದ ಚಿರತೆಯನ್ನು ತಾಲೂಕು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಈ ಘಟನೆ ರಾಯಚೂರು ತಾಲೂಕಿನ ಮಾಲಿಯಬಾದ್ ಗೋಶಾಲೆ ಗುಡ್ಡದ ಪ್ರದೇಶದಲ್ಲಿ ಜರುಗಿದೆ. ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕರವರ ಯೋಜನೆಯಂತೆ ಅಳವಡಿಸಿದ ಬೋನಿನಲ್ಲಿ ಚಿರತೆ ಬೀಳುವಂತೆ ತಂತ್ರ ರೂಪಿಸಲಾಗಿದ್ದು, ಅದರಿಂದ ಚಿರತೆ ಸುಲಭವಾಗಿ ಬೋನಿನೊಳಗೆ ಪ್ರವೇಶಿಸಿತು. ಈ ಪ್ರದೇಶದಲ್ಲಿ ಈಗಾಗಲೇ ಮೂರು ಚಿರತೆಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಗೋವಿಂದರಾಜು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಚಿರತೆ ಆಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡಿತು.

ರಾಜೇಶ್ ನಾಯಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಮೌನೇಶ್, ಹುಸೇನ್ ಬಾಷಾ ಹಾಗೂ ಸಿಬ್ಬಂದಿ ಯಲ್ಲಪ್ಪ, ಭೀಮೇಶ್, ವೀರೇಶ್, ಬಾವಸಾಬ್, ಕನಕಪ್ಪ, ಸುಗುರೇಶ್, ಶಿವಕುಮಾರ್, ರಮೇಶ್, ಚಾಲಕರಾದ ವಿಜಯ್ ಮತ್ತು ಮೌನೇಶ್ ಆಚಾರಿ ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!