HomeCrime Newsಮಡಿಕೇರಿಯಲ್ಲಿ ಲಕ್ಷ್ಮೇಶ್ವರದ ಯುವಕರಿಬ್ಬರ ದುರ್ಮರಣ

ಮಡಿಕೇರಿಯಲ್ಲಿ ಲಕ್ಷ್ಮೇಶ್ವರದ ಯುವಕರಿಬ್ಬರ ದುರ್ಮರಣ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ಪಾಕ ಗ್ರಾಮದಲ್ಲಿ ರಸ್ತೆ ಕೆಲಸ ಮಾಡುತ್ತಿದ್ದಾಗ
ಮಣ್ಣಿನ ಗುಡ್ಡ ಕುಸಿದು ಲಕ್ಷ್ಮೇಶ್ವರ ಪಟ್ಟಣದ
ಯುವಕರಿಬ್ಬರು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ಇಂದಿರಾನಗರ ನಿವಾಸಿಗಳಾದ ಸಂತೋಷ ಬಂಡಾರಿ (27)
ಹಾಗೂ ಪ್ರವೀಣ್ ಮಾವಿನಕಾಯಿ (21) ಮೃತರು. ರಸ್ತೆ ಕೆಲಸಕ್ಕೆ ಮಡಿಕೇರಿಗೆ ತೆರಳಿದ್ದರು.

ಮಡಿಕೇರಿ ತಾಲೂಕಿನ ಚೆರಂಬಾಣೆಯ ಸಿದ್ಧಾರೂಡ ಮಠದ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಿಕ್ಸರ್ ಲಾರಿ ಮೂಲಕ ಕಾಂಕ್ರಿಟ್ ಸುರಿಯುತ್ತಿರುವ ವೇಳೆ 20 ಅಡಿ ಎತ್ತರದಿಂದ ಲಾರಿ ಸಮೇತ ಗುಡ್ಡದ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದೆ.
ಈ ವೇಳೆ ಕೆಳಗೆ ಕೆಲಸ ಮಾಡುತ್ತಿದ್ದ ಏಳು ಜನ ಮಣ್ಣಿನಡಿ ಸಿಲುಕಿದ್ದಾರೆ. ಅದರಲ್ಲಿ 5 ಜನರನ್ನು ರಕ್ಷಿಸಲಾಗಿದೆ. ಸತತ ಮಳೆ ಆಗುತ್ತಿರುವದರಿಂದ ಮಣ್ಣು ಕುಸಿದಿದೆ ಎನ್ನಲಾಗಿದೆ.

ಮೃತ ಸಂತೋಷ ಹಾಗೂ ಪ್ರವೀಣ ಪಾಲಕರಿಗೆ ಒಬ್ಬೊಬ್ಬರೇ ಪುತ್ರರಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ‌.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img