ನ. 26ರಂದು ಧರ್ಮ ಜಾಗೃತಿ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಖಾನತೋಟ ವೀರನಾರಾಯಣ ದೇವಸ್ಥಾನ ಹತ್ತಿರ ಶ್ರೀ ಬಾಲಮಾರುತಿ ದೇವಸ್ಥಾನದ ಬಳಿ ಕ್ರಾಂತಿಸೇನಾ, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳ, ಶ್ರೀ ಜಗದಂಬಾ ಸೇವಾ ಸಮಿತಿ, ಶ್ರೀ ಬಾಲ ಮಾರುತಿ ಪಾಲಕಿ ಸೇವಾ ಸಮಿತಿ, ಉಪನಯನ ಸಮಿತಿಯ ವತಿಯಿಂದ ನ. 26ರಂದು 4ನೇ ವರ್ಷದ ಎಸ್.ಎಸ್.ಕೆ ಹಾಗೂ ಕ್ಷತ್ರಿಯ ಸಮಾಜದ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ನ. 22ರಂದು ಸಾಯಂಕಾಲ 5 ಗಂಟೆಗೆ ಸನಾತನ ಹಿಂದೂ ಸಮಾಜದ ಯುವತಿಯರಿಗೆ ಹಿಂದೂ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಮುಖ್ಯ ಭಾಷಣಕಾರರಾಗಿ ಪ್ರಖರ ವಾಗ್ಮಿ ಚೈತ್ರಾ ಕುಂದಾಪುರ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಸರ್ವ ಹಿಂದೂ ಸಮಾಜದ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಉಪನಯನ ಸಮಿತಿಯ ಅಧ್ಯಕ್ಷ ಉಮೇಶ್ ಹಬೀಬ, ಸಂಸ್ಥಾಪಕರು ಬಾಬು ಬಾಕಳೆ ಹಾಗೂ ಉಪನಯನ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here