ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಂಕರಭಾರತಿ ಮಠದಲ್ಲಿ ಬ್ರಹ್ಮವೃಂದ (ಬ್ರಾಹ್ಮಣ ಸಮಾಜ)ದ ಮೂಲಕ ದತ್ತ ಜಯಂತಿ ಅಂಗವಾಗಿ ಶನಿವಾರ ಮಧುಕರಿ ಸೇವಾ ಪೂಜೆ ಮತ್ತು ಸತ್ಯನಾರಾಯಣ ಪೂಜೆ ನೆರವೇರಿತು.
ಬಾಲಚಂದ್ರಭಟ್ ಹುಲಮನಿ ಅವರ ಮಾರ್ಗದರ್ಶನದಲ್ಲಿ ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣವನ್ನು ಮಾಡಿದರು. ಶನಿವಾರ ಕೊನೆಯ ದಿನ ಸತ್ಯನಾರಾಯಣ ಪೂಜೆ ಹಾಗೂ ವಟು ಪೂಜೆ ನೆರವೇರಿಸಲಾಯಿತು.
ಹಿರಿಯ ವೈದಿಕರಾದ ಅನಂತಭಟ್ ಪೂಜಾರ ಸತ್ಯನಾರಾಯಣ ಪೂಜೆಯನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ನಂತರ ಮಧುಕರಿ ಸೇವೆ ನಡೆಸಲಾಯಿತು. ವಿಪ್ರ ಸಮಾಜದ ಹತ್ತಾರು ಯುವಕರು ಸೇರಿ ಮನೆ ಮನೆಗೆ ತೆರಳಿ ಮಧುಕರಿ ಸಂಗ್ರಹವನ್ನು ನೆರವೇರಿಸಿದರು. ಸಮಾಜದ ಬಾಂಧವರು ಶ್ರೀಮಠಕ್ಕೆ ಆಗಮಿಸಿ ಮಧುಕರಿ ಸೇವೆ ಅರ್ಪಿಸಿದರು. ನಂತರ ಮಹಾಪ್ರಸಾದ ಸಾಮೂಹಿಕವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿದರು. ಕಾರ್ಯದರ್ಶಿ ಅರವಿಂದ ದೇಶಪಾಂಡೆ, ಗುರಣ್ಣ ಪಾಟೀಲ ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಪಲ್ಲಣ್ಣ ಕುಲಕರ್ಣಿ, ಧ್ರುವ ಬೆಟಗೇರಿ, ಅನಿಲ ಕುಲಕರ್ಣಿ, ದಿಗಂಬರ ಪೂಜಾರ, ಬಿ.ಕೆ. ಕುಲಕರ್ಣಿ, ಆರ್.ಎನ್. ಪಂಚಬಾವಿ, ಎ.ಪಿ. ಕುಲಕರ್ಣಿ, ಆರ್.ಎಚ್. ಕುಲಕರ್ಣಿ, ಚಿಕ್ಕರಸ ಪೂಜಾರ, ಸಂಜಯ ಪಾಟೀಲ, ರಾಜಾಚಾರ್ಯ ರಾಯಚೂರ, ವರದೇಂದ್ರ ಪುರೋಹಿತ, ಆನಂದ ಕುಲಕರ್ಣಿ (ಶ್ಯಾಬಳ), ವ್ಯಾಪಾರಿ, ರಾಘವೇಂದ್ರ ಪೂಜಾರ, ಸಾಹುಕಾರ, ರಾಘವೇಂದ್ರ ಪುರೋಹಿತ ಸೇರಿದಂತೆ ಸಮಾಜ ಬಾಂಧವರು, ವಿಪ್ರ ಮಹಿಳೆಯರು ಪಾಲ್ಗೊಂಡಿದ್ದರು.


