ಗದಗ: ತಿಮ್ಮಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಲಸಿಕಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಚಾಲನೆ ನೀಡಿದರು. 1ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ಮುಂದೆ ಬರಬಹುದಾದ ಅಂಗವಿಕಲತೆಯನ್ನು ತಡೆಯೋಣ ಎಂದು ಹೇಳಿದರು.
ಸಹಾಯಕ ವೈದ್ಯರಾದ ಗಂಗಮ್ಮ ಕುಂಬಾರ ಹಾಗೂ ಅಕ್ಷತಾ ಇಳಿಗೆರೆ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀ ಇದ್ಲಿ, ಶಂಕರಮ್ಮ ಇದ್ಲಿ, ವಿದ್ಯಾ ಇದ್ಲಿ, ದೇವಕ್ಕ ಆಲೂರು, ಶೃತಿ ತುಪ್ಪದ, ಸತ್ಯಮ್ಮ ಮಣ್ಣೂರ, ವಿಜಯಲಕ್ಷ್ಮೀ ಉಂಡಿ, ಶಾರದಾ ಗೋಂದಿ ಮುಂತಾದವರಿದ್ದರು.



