ವಿಜಯಸಾಕ್ಷಿ ಸುದ್ದಿ, ಗದಗ: ಸಾಧು ಸತ್ಪುರುಷರ ತಪೋಭೂಮಿ ಗದಗ ತಾಲೂಕು ನಾಗಾವಿ ಗ್ರಾಮದ ಸುಕ್ಷೇತ್ರ ರೇಣುಕಾದೇವಿ ಜಾತ್ರೆಯ ನಿಮಿತ್ತ ಜ. 3ರಂದು ರಾತ್ರಿ 10 ಗಂಟೆಗೆ ಗ್ರಾಮದ ರೇಣುಕಾದೇವಿ ರಂಗಮಂದಿರದಲ್ಲಿ ಬಸವೇಶ್ವರ ಭಜನಾ ನಾಟ್ಯ ಸಂಘದಿಂದ ಎಚ್.ಎಸ್. ಹೊಸಮನಿ ಕವಿಗಳು ರಚಿಸಿದ `ಮಾನುಳ್ಳವರ ಮನೆತನ’ ಎಂಬ ಸಾಮಾಜಿಕ ನಾಟಕವು ಮಂಡಳ ಪಂಚಾಯತ್ ಪ್ರಧಾನರಾಗಿದ್ದ ದಿ. ವಿರೂಪಾಕ್ಷಪ್ಪನವರು ಚಿಂಚಲಿ ಅವರ ಸವಿನೆನಪಿನೊಂದಿಗೆ ಜರುಗಲಿದೆ.
ನಾಟಕದ ಉದ್ಘಾಟನೆಯನ್ನು ಕೊಟ್ಟೂರೇಶ್ವರ ಮಠದ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗ್ರಾಮದ ಗಂಗಾಧರೇಶ್ವರ ಮಠದ ವೇ.ಮೂ. ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ನೆರವೇರಿಸಲಿದ್ದಾರೆ.
ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ಪುತ್ರ ಕಾಂತೇಶ್, ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷ ರಾಜಣ್ಣ ಕುರುಡಗಿ, ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ, ಗದಗ ಗ್ರಾಮೀಣ ಪೊಲೀಸ್ ಠಾಣೆಯ ವಿ.ಜಿ. ಪವಾರ್, ಬೆಳದಡಿಯ ಬಿಜೆಪಿ ಮುಖಂಡರಾದ ಮಂಜುನಾಥ್ ಹಳ್ಳೂರಮಠ, ವಕೀಲರಾದ ರವಿಕಾಂತ್ ಅಂಗಡಿ, ಅಳಗವಾಡಿ ಗ್ರಾಮದ ಜಿ.ವೈ. ಅರಾಧಿ, ನಾಗಾವಿ ಗ್ರಾ.ಪಂ. ಸದಸ್ಯರಾದ ಅಲ್ಲಾಸಾಬ್ ಪೀರಖಾನವರ, ಹನುಮವ್ವ ಗುಡಿಮನಿ, ಕಳಸಾಪುರ ಗ್ರಾಮದ ಬಸವಯ್ಯಸ್ವಾಮಿ ಸಾಸ್ವಿಹಳ್ಳಿಮಠ, ನಾಗಸಮುದ್ರ ಗ್ರಾಮದ ಪ್ರಗತಿಪರ ರೈತರಾದ ನಿಂಗಪ್ಪ ಮಣ್ಣೂರ, ನಾಗಾವಿ ಗ್ರಾ.ಪಂ. ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಮುಖಂಡರುಗಳು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಬಸವೇಶ್ವರ ಭಜನಾ ಸಂಘದ ಸದಸ್ಯರು ತಿಳಿಸಿದ್ದಾರೆ.



