ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಂಚೆ ಇಲಾಖೆಗೆ ಅಂಚೆ ಆಧೀಕ್ಷಕರಾಗಿ ಆಗಮಿಸಿದ ಎಸ್.ಎಸ್. ಶಿರಹಟ್ಟಿ ಅವರನ್ನು ಹಾಲುಮತ ಮಹಾಸಭಾ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಮುತ್ತು ಜಡಿ, ರಾಘು ವಗ್ಗನವರ, ಹೇಮಂತ ಗಿಡ್ಡಹನಮಣ್ಣನವರ, ಮಂಜು ಜಡಿ, ಸತೀಶ ಗಿಡ್ಡಹನಮಣ್ಣನವರ, ರವಿ ಜೋಗಿನ, ಸುರೇಶ ಹೆಬಸೂರ, ಕುಮಾರ ಮಾರನಬಸರಿ, ಪರಶುರಾಮ ಜಡಿ, ಸೋಮು ಮೇಟಿ, ಸೋಮು ಬಿಂಗಿ, ಅಂಚೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ ಕೊಳ್ಳಿ, ಎಂ.ಟಿ. ಕರಿಗಾರ, ನವೀನ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.



