ರೋಣ ತಹಶೀಲ್ದಾರ ಜಕ್ಕಣಗೌಡ್ರ ಎತ್ತಂಗಡಿ; ಕುಮಾರಿ ವಾಣಿ ಅಧಿಕಾರ ಸ್ವೀಕಾರ

ವಿಜಯಸಾಕ್ಷಿ ಸುದ್ದಿ, ರೋಣ:
ಎಸಿಬಿ ಡಿವೈಎಸ್ಪಿ ಹೆಸರಲ್ಲಿ ಬ್ಲಾಕ್ ಮೇಲ್ ಒಳಗಾಗಿದ್ದ
ರೋಣ ತಾಲ್ಲೂಕಿನ ತಹಶೀಲ್ದಾರ ಜೆ. ಬಿ ಜಕ್ಕಣಗೌಡ್ರ ಎತ್ತಂಗಡಿಯಾಗಿದ್ದಾರೆ. ನೂತನ ತಹಶೀಲ್ದಾರ ಆಗಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಿ ವಾಣಿ ಎಂಬುವವರು ಸೋಮವಾರ ಮುಂಜಾನೆ ಅಧಿಕಾರ ಸ್ವೀಕರಿಸಿದರು.
ಇಂದು ಮುಂಜಾನೆ ಏಕಾಏಕಿ ನಡೆದ ಈ ಬೆಳವಣಿಗೆಯಿಂದಾಗಿ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿದೆ. ಉಪತಹಶೀಲ್ದಾರ ಜೆ.ಟಿ.ಕೊಪ್ಪದ ಹಾಗೂ ಇಲಾಖೆಯ ಸಿಬ್ಬಂದಿ ನೂತನ ದಂಡಾಧಿಕಾರಿಗಳನ್ನು ಬರಮಾಡಿಕೊಂಡರು.
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube ಅನುಸರಿಸಿ