HomeCrime Newsಕಳೆದುಹೋದ ಮೊಬೈಲ್ ಮರಳಿ ವಾರಸುದಾರರಿಗೆ ಕೊಟ್ಟ ಪೊಲೀಸರು

ಕಳೆದುಹೋದ ಮೊಬೈಲ್ ಮರಳಿ ವಾರಸುದಾರರಿಗೆ ಕೊಟ್ಟ ಪೊಲೀಸರು

Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸಾರ್ವಜನಿಕ ಸ್ಥಳಗಳಲ್ಲಿ, ಸಂತೆ, ಜಾತ್ರೆಯಂಥಹ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಕಳೆದುಕೊಂಡವರ ಗೋಳು ಹೇಳತೀರದು. ಸಾವಿರಾರು ರೂ. ಬೆಲೆಬಾಳುವ ಮೊಬೈಲ್ ಕಳೆದುಕೊಂಡ ನೋವು ಒಂದೆಡೆಯಾದರೆ, ತಮ್ಮದೇ ವಿಳಾಸ ಪುರಾವೆಗಳ ಮೂಲಕ ಪಡೆದುಕೊಂಡ ಸಿಮ್ ಕಾರ್ಡ್ ಯಾರ್ಯಾರದೋ ಕೈಗೆ ಸಿಕ್ಕು ದುರ್ಬಳಕೆಯಾಗುವ ಸಾಧ್ಯತೆಗಳ ಬಗೆಗಿನ ಭಯ ಇನ್ನೊಂದೆಡೆ. ಮೊಬೈಲ್ ಮರಳಿ ಸಿಗುವ ನಂಬಿಕೆ ಇಲ್ಲದಿದ್ದರೂ, ದುರ್ಬಳಕೆಯ ಪ್ರಕರಣಗಳಿಂದ ರಕ್ಷಿಸಿಕೊಳ್ಳುವ ಉದ್ದೇಶಕ್ಕಾಗಿಯಾದರೂ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದಿರುವ ಬಗ್ಗೆ ಪ್ರಕರಣ ದಾಖಲಿಸುವರೇ ಅಧಿಕ.

ಆದರೆ, ಮುಂಡರಗಿ ಪೊಲೀಸರು ಇಂಥ ಪ್ರಕರಣಗಳನ್ನೂ ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳುವಾದ ಮತ್ತು ತಮ್ಮ ಅಜಾಗರೂಕತೆಯಿಂದ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಬಗ್ಗೆ ದಾಖಲಿಸಿಕೊಂಡ ಪ್ರಕರಣಗಳನ್ನು ಭೇದಿಸಿ ವಿವಿಧ ಕಂಪನಿಗಳ 8.9 ಲಕ್ಷ.ರೂ ಬೆಲೆಬಾಳುವ 68 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪತ್ತೆಮಾಡಿ, ವಶಪಡಿಸಿಕೊಂಡು ಮಾಲಕರಿಗೆ ಮರಳಿ ನೀಡಿದ್ದಾರೆ.

ಐಎಂಇಐ ಸಂಖ್ಯೆಯ ಆಧಾರದ ಮೇಲೆ ಈ ಎಲ್ಲ ಕಳೆದುಹೋದ ಮೊಬೈಲ್ ಗಳನ್ನು ಪತ್ತೆಹಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಠಾಣಾ ಪರಿವೀಕ್ಷಣೆಯ ಸಂದರ್ಭದಲ್ಲಿ ವಾರಸುದಾರರಿಗೆ ಹಿಂದಿರುಗಿಸಿದರು.

ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಾದ ಜೆ.ಆಯ್. ಬಚೇರಿ, ಅವಿನಾಶ ಸಿಂಗ್ ಬ್ಯಾಳಿ, ಶರಣಪ್ಪ ನಾಗೇಂದ್ರಗಡ, ಮಂಜುನಾಥ ಮಾದರ ಇವರು ನೆರವು ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ದೂರುದಾರರೂ ಕೂಡ, ಕಳೆದುಹೋದ ತಮ್ಮ ಮೊಬೈಲ್ ಮರಳಿ ಸಿಕ್ಕಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಯ ಜನಪರ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ತನ್ಮೂಲಕ, ಪೊಲೀಸ್ ಇಲಾಖೆ ಸದಾ ಸಾರ್ವಜನಿಕ ಸೇವೆಗೆ ಸನ್ನದ್ಧವಾಗಿದೆ ಎಂಬ ಅಂಶ ಸಾಬೀತಾದಂತಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!