ಜಿಂದಾಶ್ಯಾವಲಿ ಉರುಸು ಇಂದು

0
lakkundi
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಪವಾಡ ಪುರುಷ ಹಜರತ್ ಜಿಂದಾಶ್ಯಾವಲಿಯವರ 56ನೇ ವರ್ಷದ ಉರುಸು ಉತ್ಸವ ಮಾರ್ಚ್ 2 ರಂದು ಮುಸ್ಲಿಮ್ ಜಮಾತ ಅಂಜುಮನ್ ಏ ಇಸ್ಲಾಮ್ ಕಮಿಟಿಯ ಆಶ್ರಯದಲ್ಲಿ ಜರುಗಲಿದೆ.

Advertisement

ಲಕ್ಕುಂಡಿ ಮತ್ತು ಕದಾಂಪೂರ ಗ್ರಾಮದ ಮಧ್ಯೆ ಇರುವ ಜಿಂದಾಶ್ಯಾವಲಿ ದರ್ಗಾದ ಗದ್ದುಗೆ ಮೇಲೆ ಬೆಳಿಗ್ಗೆ ಪುಷ್ಪ ಗುಚ್ಛ ಸಮರ್ಪಿಸುವ ಮೂಲಕ ಉರುಸು ಕಾರ್ಯಕ್ರಮ ಆರಂಭವಾಗಲಿದೆ. ರಾತ್ರಿ 9.30ಕ್ಕೆ ವಿಧಿ ವಿಧಾನಗಳೊಂದಿಗೆ ಜ್ಯೋತಿ ಬೆಳಗಿಸುವ ವಿಶೇಷ ಕಾರ್ಯಕ್ರಮ ನೆರವೇರಲಿದೆ. 9 ಗಂಟೆಗೆ ಕಲಕತ್ತಾದ ಜಹಾಂಗೀರ್ ಅಲಮ್‌ನೂರಿ ಅವರಿಂದ ಬಯಾನ ಕಾರ್ಯಕ್ರಮ, ನಂತರ ರಿವಾಯತ್ ಕವಾಲಿ ಜಾನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷವಾಗಿ ಸಂದಲ್ ಗಂಧ ಮೆರವಣಿಗೆಯಲ್ಲಿ ಗುಡಗೇರಿಯ ತಾಜ್ ಮ್ಯೂಜಿಕಲ್ ಬ್ರಾಸ್ ಬ್ಯಾಂಡ್ ಕಂಪನಿಯಿಂದ ಕವಾಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಮಾ.28ರಂದು ತವಾಫ್(ಚಿರಶಾಂತಿ ಪ್ರಾರ್ಥನೆ) ನಡೆಯಲಿದೆ. ಎಪ್ರೀಲ್ 7ರಂದು ಸಂಜೆ ಧ್ವಜ ಇಳಿಸಲಾಗವುದು. ನಂತರ ಉರುಸು ಲೆಕ್ಕ ಪತ್ರ ಪರಿಶೀಲನೆ ಸಭೆ ನಡೆಯುವುದು ಎಂದು ಉರುಸು ಕಮಿಟಿ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here