ವಿಜಯಸಾಕ್ಷಿ ಸುದ್ದಿ, ಗದಗ: ನಂದೀಶ್ವರ ನಗರದ 2 ಮತ್ತು 3ನೇ ಕ್ರಾಸ್ (ಇಂಡೋರ್ ಸ್ಟೇಡಿಯಂ ಬಡಾವಣೆಯ) ನಾಗರಿಕರ ವಿವಿಧೋದ್ದೇಶಗಳ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಜಿ.ಎಸ್. ಹಿರೇಮಠ, ಅಧ್ಯಕ್ಷರಾಗಿ ವಿಶ್ವನಾಥರೆಡ್ಡಿ ಗದ್ದಿಕೇರಿ, ಗೌರವ ಕಾರ್ಯದರ್ಶಿಯಾಗಿ ಬಸವರಾಜ ಎಚ್.ಕೊರ್ಲಹಳ್ಳಿ, ಉಪಾಧ್ಯಕ್ಷರಾಗಿ ಮಹೇಶ ರಂಗಣ್ಣವರ, ದೇವಪ್ಪ ನಡವಲಗುಡ್ಡ, ಶಿವಾನಂದ ಪಲ್ಲೇದ, ಜೆ.ವ್ಹಿ. ಹಿರೇಮಠ ಆಯ್ಕೆಯಾಗಿದ್ದಾರೆ.
ಕೋಶಾಧ್ಯಕ್ಷರಾಗಿ ಆರ್.ವ್ಹಿ. ಕರವೀರಮಠ, ಸಹ ಕಾರ್ಯದರ್ಶಿಯಾಗಿ ಡಾ. ಈರಣ್ಣ ಹಳೆಮನಿ, ಕೆ.ವ್ಹಿ. ಯಾಲಗಿಶೆಟ್ರು, ನೀಲಕಂಠಯ್ಯ ಕಳ್ಳಿಮಠ, ಅಶೋಕ ಮಾಳೆಕೊಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಡಾ. ಕೃಷ್ಣಾ ನಾವಳ್ಳಿ, ವ್ಹಿ.ವ್ಹಿ. ಕವಲೂರ, ಲಿಂಗರಾಜ ಗೊಲ್ಲರ, ಡಾ. ರವೀಂದ್ರ ನಂದಿ, ಕಾನೂನು ಸಲಹೆಗಾರರಾಗಿ ಎಸ್.ಜಿ. ಪಲ್ಲೇದ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುಭಾಸ ಗಡಾದ, ವ್ಹಿ.ಎಸ್. ಶಿವಕಾಳಿಮಠ, ಮಂಜುನಾಥ ಗಜಕೋಶ ಹಾಗೂ ಡಿ.ಬಿ. ಚೆನ್ನಶೆಟ್ಟರ ಆಯ್ಕೆಯಾಗಿದ್ದಾರೆ.