Homecultureಬಾಲೇಹೊಸೂರ ಮಠದ ಜಾತ್ರಾ ಮಹೋತ್ಸವ

ಬಾಲೇಹೊಸೂರ ಮಠದ ಜಾತ್ರಾ ಮಹೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವ ಏ.28 ಮತ್ತು 29 ರಂದು ಜರುಗಲಿದೆ.

ಏ.28ರ ಪ್ರಾತಃಕಾಲ ಶ್ರೀ ಗುರು ದಿಂಗಾಲೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಷಟಸ್ಥಲ ದ್ವಜಾರೋಹಣ, ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ 5ಕ್ಕೆ ಮಹಾರಥೋತ್ಸವ ಜರುಗುವುದು.

ಏ.29ರ ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗುವುದು. ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ಬಾಲೇಹೊಸೂರ ಮಠದ ಕಿರು ಪರಿಚಯ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠವು 300 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ. ಈ ಮಠದ ಲಿಂ.ಶ್ರೀಗಳೆಲ್ಲರೂ ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಕ್ಕಾಗಿ ಸಮರ್ಪಿಸಿಕೊಂಡವರಾಗಿದ್ದರು. ಕಳೆದ 3 ದಶಕಗಳ ಹಿಂದೆ ಶ್ರೀಮಠದ 6ನೇ ಪಟ್ಟಾಧ್ಯಕ್ಷರು, ಸದ್ಯ ಶಿರಹಟ್ಟಿ ಫಕೀರೇಶ್ವರಮಠದ ಉತ್ತರಾಧಿಕಾರಿಗಳಾದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಮ್ಮ ಪಾಂಡಿತ್ಯ, ಪ್ರವಚನದ ಪ್ರಖರತೆ ಮತ್ತು ಶ್ರೀಮಠದ ಅಭಿವೃದ್ಧಿಗಾಗಿ ಹಾಗೂ ಧರ್ಮ ಯುದ್ಧಕ್ಕಾಗಿ ಶ್ರಮಿಸುವ ಮೂಲಕ ಬಾಲೇಹೊಸೂರ ಮಠವನ್ನು ನಾಡಿನಾದ್ಯಂತ ಗುರುತಿಸುವ ಮಹೋನ್ನತ ಕಾರ್ಯ ಮಾಡಿದ್ದಾರೆ.

jatre

ಫಕೀರ ದಿಂಗಾಲೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ನಾಡಿನ ಜನ ಮಾನಸದಲ್ಲಿ ಮನೆ ಮಾಡಿದ್ದಾರೆ. `ಸದ್ಗುಣಗಳ ದೀಕ್ಷೆ-ದುಶ್ಚಟಗಳ ದೀಕ್ಷೆ ಕಾರ್ಯಕ್ರಮದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಕಾಳಜಿ ಅವರದ್ದಾಗಿದೆ. ಪರಿಸರ ಪ್ರೇಮಿಗಳಾದ ಶ್ರೀಗಳು, ಮಠದ ಕಾರ್ಯಕ್ರಮದಲ್ಲಿ 5001 ಮಾತೆಯರಿಗೆ 1 ತೆಂಗು, 1 ಮಾವಿನ ಸಸಿಗಳನ್ನು ಉಡಿ ತುಂಬಿ ವನಸಿರಿ ಬೆಳೆಸುವಂತೆ ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದು ಅವರ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ. ಕೆರೆಗೆ ನದಿ ನೀರು ಹರಿಸಲು ಹೋರಾಟ, ಕೆರೆ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಸದಾ ಓದುವ ಹಂಬಲ ಹೊಂದಿರುವ ಇವರು ತಮ್ಮದೇ ಆದ ಗ್ರಂಥಾಲಯ ಹೊಂದಿದ್ದು, ಅಲ್ಲಿ ಅತ್ಯಂತ ಶ್ರೇಷ್ಠವಾದ ಸಾವಿರಾರು ಗ್ರಂಥಗಳಿವೆ. ಇದೀಗ ಕಳೆದ ಒಂದು ವರ್ಷದಿಂದ ಶಿರಹಟ್ಟಿ ಸಂಸ್ಥಾನದ ಮಠದ ಉತ್ತರಾಧಿಕಾರಿಗಳಾಗಿ ಧರ್ಮ ಜನಜಾಗೃತಿ, ಶಿಕ್ಷಣ ಸೇವೆ, ಸಾಮಾಜಿಕ ಬದಲಾವಣೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿರುವ ಫಕೀರ ದಿಂಗಾಲೇಶ್ವರ ಶ್ರೀಗಳು ಈ ನೆಲದ ನಾಡಿನ ಭಕ್ತರ ಮನೆ ಮಾತಾಗಿದ್ದಾರೆ.

ಗ್ರಾಮೀಣ ಭಾಗದ ಶ್ರೀಮಠಕ್ಕೆ ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಅಮೃತ ಶಿಲೆಯ ಭವ್ಯ ಮಠ, ದಾಸೋಹ ಭವನ, ಯಾತ್ರಿ ನಿವಾಸ, ಶಾಲೆ, ಗೋಶಾಲೆ, ಸಮುದಾಯ ಭವನ, ಸುಂದರ ಸಮೃದ್ಧ ತೋಟ ನಿರ್ಮಿಸಿ ಸಮಾಜಕ್ಕೆ ಸಮರ್ಪಿಸಿದ್ದಾರೆ. `ಮಠ ಕಟ್ಟುವುದು ಭಕ್ತರ ಕೆಲಸ, ಸಮಾಜ ಕಟ್ಟುವುದು, ಧರ್ಮ ಕಾಪಾಡುವುದು ಸ್ವಾಮಿಗಳ ಕೆಲಸ’ ಎಂದು ಹೇಳುವ ಶ್ರೀಗಳು ಭಕ್ತರು ನೀಡುವ ಕಾಣಿಕೆ ಸತ್ಕಾರ್ಯಕ್ಕೆ ಸಲ್ಲಬೇಕೆಂಬ ಉದ್ದೇಶ ಸಾಕಾರಗೊಳಿಸಿದ್ದಾರೆ. ಶ್ರೀಮಠವಿಂದು ನಾಡಿನೆಲ್ಲೆಡೆ ಹೆಸರಾಗಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img