HomeKarnataka Newsಕರ್ನಾಟಕ SIR ಪರಿಷ್ಕರಣೆ: 17.19 ಲಕ್ಷ ಮತದಾರರ ಫಾರ್ಮ್‌ಗಳಿಗೆ ವಂಶಾವಳಿ ಮಾಹಿತಿ ಇಲ್ಲ - ಚುನಾವಣಾ...

ಕರ್ನಾಟಕ SIR ಪರಿಷ್ಕರಣೆ: 17.19 ಲಕ್ಷ ಮತದಾರರ ಫಾರ್ಮ್‌ಗಳಿಗೆ ವಂಶಾವಳಿ ಮಾಹಿತಿ ಇಲ್ಲ – ಚುನಾವಣಾ ಆಯೋಗ

For Dai;y Updates Join Our whatsapp Group

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 17.19 ಲಕ್ಷ ಎನ್ಯುಮರೇಶನ್ ಫಾರ್ಮ್‌ಗಳು ವಂಶಾವಳಿ ಮಾಹಿತಿ ಇಲ್ಲದೆ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಮನೆ-ಮನೆ ಗಣತಿ ವೇಳೆ ಒಟ್ಟು 5.53 ಕೋಟಿ ಎಸ್‌ಐಆರ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಈ ಪೈಕಿ ಇದುವರೆಗೆ 3.67 ಕೋಟಿ ಫಾರ್ಮ್‌ಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಒಟ್ಟು ಫಾರ್ಮ್‌ಗಳ ಪೈಕಿ ಶೇ.66.35ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಆಯೋಗ ತಿಳಿಸಿದೆ.

ಡಿಜಿಟಲೀಕರಣಗೊಂಡ ಫಾರ್ಮ್‌ಗಳಲ್ಲಿ 1.56 ಕೋಟಿ ಮತದಾರರು ಸ್ವಯಂ ಮ್ಯಾಪಿಂಗ್ ಮಾಡಿಕೊಂಡಿದ್ದಾರೆ. 1.93 ಕೋಟಿ ಮತದಾರರ ವಿವರಗಳನ್ನು ವಂಶಾವಳಿ ಮ್ಯಾಪಿಂಗ್ ಮೂಲಕ ಜೋಡಿಸಲಾಗಿದೆ. ಆದರೆ 17.19 ಲಕ್ಷ ಫಾರ್ಮ್‌ಗಳಲ್ಲಿ ಯಾವುದೇ ಮ್ಯಾಪಿಂಗ್ ಮಾಹಿತಿ ಲಭ್ಯವಾಗಿಲ್ಲ.

ಮ್ಯಾಪಿಂಗ್ ವಿವರಗಳಿಲ್ಲದಿದ್ದರೂ ಮತದಾರರು ಆತಂಕಪಡಬೇಕಿಲ್ಲ. ಆಗಸ್ಟ್ 8ರೊಳಗೆ ತಮ್ಮ ಫಾರ್ಮ್‌ಗಳನ್ನು ಮತಗಟ್ಟೆ ಹಂತದ ಅಧಿಕಾರಿಗಳಿಗೆ (BLO) ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕ್ಕುಮಾರ್ ಮನವಿ ಮಾಡಿದ್ದಾರೆ. ಕುಟುಂಬದ ಯಾವುದೇ ವಯಸ್ಕ ಸದಸ್ಯರು ಕೂಡ ಫಾರ್ಮ್ ಸಲ್ಲಿಸಬಹುದಾಗಿದೆ.

ಫಾರ್ಮ್ ಸಲ್ಲಿಸಿದವರ ಹೆಸರನ್ನು ಆಗಸ್ಟ್ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ದಾಖಲೆಗಳ ಕೊರತೆ ಇದ್ದರೆ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಬಳಿಕ ಫಾರ್ಮ್ ಹಿಂಭಾಗದಲ್ಲಿ ಸೂಚಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಇನ್ನು ರಾಜ್ಯದಲ್ಲಿ ASDDO (Absent, Shifted, Dead, Duplicate, Others) ವರ್ಗದಡಿ ಗುರುತಿಸಲಾದ ಮತದಾರರ ಸಂಖ್ಯೆ 44.84 ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ 5.87 ಲಕ್ಷ ಗೈರುಹಾಜರಿ ಮತದಾರರು, 26.32 ಲಕ್ಷ ಸ್ಥಳಾಂತರಗೊಂಡವರು, 9.81 ಲಕ್ಷ ಮೃತಪಟ್ಟವರು, 2.70 ಲಕ್ಷ ನಕಲಿ ದಾಖಲೆಗಳು ಹಾಗೂ 12,344 ಇತರೆ ಪ್ರಕರಣಗಳು ಸೇರಿವೆ.

ಬೆಂಗಳೂರಿನ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲೇ 23.86 ಲಕ್ಷ ASDDO ಪ್ರಕರಣಗಳು ದಾಖಲಾಗಿವೆ. ಇಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಇನ್ನೂ ಶೇ.30ರಷ್ಟು ಮಾತ್ರ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ 4.51 ಲಕ್ಷ ಗೈರುಹಾಜರಿ, 16.62 ಲಕ್ಷ ಸ್ಥಳಾಂತರಗೊಂಡವರು, 2.40 ಲಕ್ಷ ಮೃತಪಟ್ಟವರು, 27,480 ನಕಲಿ ಹಾಗೂ 5,189 ಇತರೆ ಪ್ರಕರಣಗಳು ಪತ್ತೆಯಾಗಿವೆ.

ಇದೇ ವೇಳೆ ಉತ್ತರಹಳ್ಳಿ ಮತ್ತು ಯಲಹಂಕ ವ್ಯಾಪ್ತಿಯ 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆರಂಭದಲ್ಲಿ ಕೆಲವು ಮತಗಟ್ಟೆಗಳ ಪಿಡಿಎಫ್ ದಾಖಲೆಗಳು ಮಾತ್ರ ಅಪ್‌ಲೋಡ್ ಆಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಇದೀಗ ಎಕ್ಸೆಲ್ ದಾಖಲೆಗಳನ್ನು ಸಿದ್ಧಪಡಿಸಿ ದೋಷ ಸರಿಪಡಿಸಲಾಗಿದೆ ಎಂದು ಆಯೋಗ ತಿಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img