ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಇಲ್ಲಿನ ಜಂತ್ಲಿ ಶಿರೂರ ಗ್ರಾಮದಲ್ಲಿ ಏ.17ರಂದು ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ನೆರವೇರಲಿದೆ.
ಶ್ರೀರಾಮ ನವಮಿಯಂದು ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ಮಾರುತಿ ದೇವರಿಗೆ ರುದ್ರಾಭಿಷೇಕ, ಸಕಲ ವಸ್ತಾçಭರಣಗಳಿಂದ ಅಲಂಕಾರ, ಸಾಯಂಕಾಲ 5 ಗಂಟೆಯಿಂದ ಡೊಳ್ಳು, ಸಕಲ ವಾದ್ಯ ಮೇಳಗಳೊಂದಿಗೆ ಪಾಲಕಿ ಉತ್ಸವ ನಡೆಯುವುದು. ಸಾಯಂಕಾಲ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾನ್ನಿಧ್ಯವನ್ನು ಚಿಕ್ಕೇನಕೊಪ್ಪದ ಚನ್ನವೀರ ಶರಣರಮಠ ಸುಕ್ಷೇತ್ರ ಬಳಗಾನೂರು ಶಾಖಾಮಠ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ವಹಿಸಿಕೊಳ್ಳುವರು.
ನಂತರ ಮಹಾದಾಸೋಹ ನಡೆಯುವುದು. ರಾತ್ರಿ ಗ್ರಾಮದ ಶ್ರೀ ರಾಮ ವಾಲ್ಮೀಕಿ ಯುವಕ ಮಂಡಳದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಏ.18ರಂದು ಸಾಯಂಕಾಲ 7ಕ್ಕೆ ಶ್ರೀ ಪರಮಪೂಜ್ಯ ಧರ್ಮರಾಜ ಧರ್ಮದಮಠ ಸಾ. ಕಣಗಿನಹಾಳ ಇವರ ಸಾನ್ನಿಧ್ಯದಲ್ಲಿ ಲಘು ರಥೋತ್ಸವ ನಡೆಯುವುದು. ಈ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಆಗಮಿಸಿ ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ಹನಮಂತಪ್ಪ ನಾಗಪ್ಪ ಚಿಗರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.