Home Blog Page 185

‘ನಾನ್ ಕನ್ನಡ HR’ ನೇಮಕಾತಿ ಜಾಹೀರಾತು: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಖಾಸಗಿ ಕಂಪನಿ!

0

ಬೆಂಗಳೂರು: ಖಾಸಗಿ ಕಂಪನಿಗಳು ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡಿಗರನ್ನು ಕಡೆಗಣಿಸುತ್ತಿವೆ ಎಂಬ ಆರೋಪಗಳು ಮತ್ತೆ ಕೇಳಿಬಂದಿವೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಎಂಬ ಖಾಸಗಿ ಕಂಪನಿಯೊಂದು ನೌಕ್ರಿ ಡಾಟ್ ಕಾಮ್‌ನಲ್ಲಿ ಪ್ರಕಟಿಸಿದ ನೇಮಕಾತಿ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕಂಪನಿಯು ಮಾನವ ಸಂಪನ್ಮೂಲ (HR) ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದು, “NON KANNADA HR” ಅಭ್ಯರ್ಥಿಗಳಿಗೆ ಆದ್ಯತೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿರುವುದು ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದೆ. ಈ ಜಾಹೀರಾತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.

ಕನ್ನಡ ನಾಡಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳು ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೆ ಆದ್ಯತೆ ನೀಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಕನ್ನಡ ಪರ ಸಂಘಟನೆಗಳೂ ಪ್ರತಿಕ್ರಿಯಿಸಿದ್ದು, ಕನ್ನಡ ನೆಲದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆರೋಪಿಸಿವೆ. ಕಂಪನಿಯು ಕೂಡಲೇ ಕ್ಷಮೆ ಕೇಳಬೇಕು ಹಾಗೂ ವಿವಾದಾತ್ಮಕ ಜಾಹೀರಾತನ್ನು ವಾಪಸ್ ಪಡೆಯಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಶೋಕಿಗಾಗಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ಇಬ್ಬರು ಖದೀಮರು ಅರೆಸ್ಟ್!

0

ಮಂಡ್ಯ: ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸದ್ಧಾಂ ಹುಸೇನ್ ಮತ್ತು ಸೈಯದ್ ಅಯೂಬ್ ಬಂಧಿತರು. ಆರೋಪಿಗಳು ಈ ಹಿಂದೆ 30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು. ಶಿಕ್ಷೆ ಪಡೆದು ಹೊರಬಂದರೂ ಬುದ್ಧಿ ಕಲಿಯದೆ, ಒಂಟಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವುದು, ಮನೆಗಳಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ಮಾಡುವುದು, ಹೀಗೆ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಇತ್ತೀಚೆಗೆ ಕಿರುಗಾವಲು ಪೊಲೀಸರು ತನಿಖೆ ನಡೆಸಿ ಮಹತ್ವದ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 31.98 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ಹಾಗೂ ಪಲ್ಸರ್ ಮತ್ತು ಆಕ್ಸಿಸ್ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಹ ಕಳ್ಳತನ ನಡೆಸಿದ್ದಾರೆ ಎಂಬುವುದು ಪೊಲೀಸರ ತನಿಖೆಯಲ್ಲಿ ಹೊರಬಂದಿದೆ.

ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್: ಆರೋಪಿ ಬಂಧನ

0

ಚಿಕ್ಕಮಗಳೂರು: ಇನ್‌ಸ್ಟಾಗ್ರಾಂನಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿ ಅವಮಾನಿಸಿದ ಯುವಕ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಯನಾ ಮೋಟಮ್ಮ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಎರಡು ಖಾತೆಗಳಿವೆ — ಒಂದು ವೈಯಕ್ತಿಕ, ಮತ್ತೊಂದು ರಾಜಕೀಯ. ವೈಯಕ್ತಿಕ ಖಾತೆಯಲ್ಲಿ ಪ್ರವಾಸ ಹಾಗೂ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದ ವೇಳೆ, ಬಟ್ಟೆ ವಿಚಾರ ಹಿಡಿದು ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡತೊಡಗಿದರು. ಈ ಕಾಮೆಂಟ್‌ಗಳು ಕ್ರಮೇಣ ಅವಮಾನಕಾರಿ ಮಟ್ಟ ತಲುಪಿದ್ದವು.

ಈ ಬಗ್ಗೆ ಶಾಸಕಿ ಅವರ ಪಿಎ ಸಂಸುದ್ದೀನ್ ಅವರು ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಶಾಸಕಿ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಕಾಮೆಂಟ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ತನಿಖೆ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮರುಮರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದು, ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ನಯನಾ ಮೋಟಮ್ಮ ಅವರು ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನೋವು ಹೊರಹಾಕಿದ್ದರು. “ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ಕೆಲವರು ನನ್ನನ್ನು ವೇಶ್ಯೆ ಎಂದು ಕರೆಯುವ ಮಟ್ಟಕ್ಕೂ ಇಳಿದಿದ್ದಾರೆ. ಡಿಪಿ ಇಲ್ಲದ ಪ್ರೊಫೈಲ್‌ಗಳಿಂದ ಕಾಮೆಂಟ್ ಮಾಡುತ್ತಾರೆ. ಆದರೆ ಒಂದು ದಿನ ನಾನವರನ್ನು ಎದುರಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.

ಒಟ್ಟಿನಲ್ಲಿ, ಈ ಪ್ರಕರಣ ಇದೀಗ ಮಹಿಳೆಯರ ಮೇಲೆ ನಡೆಯುವ ಆನ್‌ಲೈನ್ ಕಿರುಕುಳದ ವಿರುದ್ಧ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್ ಮಾಡಿದ್ದ ಯುವಕ ಅರೆಸ್ಟ್!

0

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದ ಅರೋಪಿಯೋರ್ವನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮೂಲದ ಯಕ್ಷಿತ್ ರಾಜ್ ಬಂಧಿತ ಆರೋಪಿ. ಬಂಧಿತನನ್ನು ಮೂಡಿಗೆರೆ ಪೊಲೀಸರು ಕಸ್ಟಡಿಗೆ ತೆಗೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯು, ಶಾಸಕಿ ನಯನಾ ಮೋಟಮ್ಮ ಅವರ ವೈಯಕ್ತಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ಅವರ ಬಟ್ಟೆ ಮತ್ತು ವೈಯಕ್ತಿಕ ಜೀವನದ ಕುರಿತು ನಿರಂತರವಾಗಿ ಕಾಮೆಂಟ್ ಮಾಡಿದ್ದ. ಈ ಸಂಬಂಧ ಶಾಸಕಿಯ ಪಿಎ ಸಂಸುದ್ದೀನ್ ಕಳೆದ ಅಕ್ಟೋಬರ್ ತಿಂಗಳಲ್ಲೇ ದೂರು ದಾಖಿಸಿದ್ದರು.

ತನಿಖೆ ಚುರುಕು ಮಾಡಿದ್ದ ಪೋಲೀಸರು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ನಮ್ಮದೇ ಜನರು ಸಿನಿಮಾಗೆ ಶತ್ರುಗಳಾಗಿದ್ದಾರೆʼ: ಫೇಕ್ ರಿವ್ಯೂಗಳಿಂದ ಬೇಸತ್ತ ವಿಜಯ್ ದೇವರಕೊಂಡ

ಸಿನಿಮಾ ಚೆನ್ನಾಗಿದ್ದರೂ ಫೇಕ್ ರಿವ್ಯೂಗಳಿಂದ ಚಿತ್ರಗಳಿಗೆ ಹೊಡೆತ ಬೀಳುತ್ತಿದೆ — ಈ ವಿಷಯದ ಬಗ್ಗೆ ನಟ ವಿಜಯ್ ದೇವರಕೊಂಡ ಓಪನ್ ಆಗಿ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವಿಮರ್ಶೆಗಳನ್ನು ಹರಡುವ ಮೂಲಕ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾಗಳನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಕಲಿ ವಿಮರ್ಶೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿರುವುದು ವಿಜಯ್ ಅವರಿಗೆ ಖುಷಿ ಕೊಟ್ಟಿದೆಯಾದರೂ, ಅದೇ ಸಮಯದಲ್ಲಿ ಇದು ನೋವನ್ನೂ ಕೊಡುತ್ತದೆ ಎನ್ನುತ್ತಾರೆ.

“ಬುಕ್ ಮೈ ಶೋನಲ್ಲಿ ಈ ಬದಲಾವಣೆ ನೋಡೋದು ಖುಷಿಯೂ ಹೌದು, ದುಃಖವೂ ಹೌದು. ಜನರ ಕನಸು, ಕಷ್ಟ, ಹಣವನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಆದರೆ ನಮ್ಮದೇ ಜನರು ಈ ಸಮಸ್ಯೆ ಹುಟ್ಟುಹಾಕುತ್ತಿದ್ದಾರೆ ಅನ್ನೋದು ತುಂಬಾ ದುಃಖಕರ” ಎಂದು ಅವರು ಬರೆದುಕೊಂಡಿದ್ದಾರೆ.

‘ಡಿಯರ್ ಕಾಮ್ರೇಡ್’ ಸಿನಿಮಾ ಸಮಯದಲ್ಲಿ ಸಂಘಟಿತ ದಾಳಿಗಳನ್ನು ಎದುರಿಸಿದ್ದೆ ಎಂದು ವಿಜಯ್ ಹೇಳಿದ್ದು, “ನಾನು ಮಾತಾಡಿದಾಗ ಯಾರೂ ಕೇಳದಂತೆ ಅನ್ನಿಸುತಿತ್ತು. ಒಳ್ಳೆಯ ಸಿನಿಮಾ ಯಾರೂ ತಡೆಯಲು ಸಾಧ್ಯವಿಲ್ಲ ಅಂತ ಕೆಲವರು ಸಮಾಧಾನ ಕೊಟ್ಟಿದ್ದರು. ನನ್ನ ಜೊತೆ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ನೋವನ್ನು ಅರ್ಥ ಮಾಡಿಕೊಂಡಿದ್ದರು” ಎಂದು ತಿಳಿಸಿದ್ದಾರೆ.

“ಯಾಕೆ ಇವರು ಹೀಗೆ ಮಾಡುತ್ತಾರೆ ಅಂತ ಯೋಚಿಸುತ್ತಾ ಅನೇಕ ರಾತ್ರಿ ನಿದ್ದೆಯೇ ಬಂದಿಲ್ಲ. ನನ್ನ ಕನಸುಗಳನ್ನು ಉಳಿಸಿಕೊಳ್ಳಲು ಹೇಗೆ ಹೋರಾಡಬೇಕು ಎಂದು ಯೋಚಿಸಿದ್ದೇನೆ. ಇಷ್ಟು ವರ್ಷಗಳ ಬಳಿಕ ಈ ವಿಚಾರ ಹೊರಬಂದಿರುವುದು ಸಂತೋಷ. ಚಿರಂಜೀವಿಯಂಥ ಟಾಪ್ ಹೀರೋ ಸಿನಿಮಾಗಿಗೂ ಇಂತಹ ಬೆದರಿಕೆ ಇದೆ ಎಂದು ನ್ಯಾಯಾಲಯ ಗುರುತಿಸಿರುವುದು ನನಗೆ ಧೈರ್ಯ ನೀಡಿದೆ” ಎಂದು ವಿಜಯ್ ಹೇಳಿದ್ದಾರೆ.

ಒಟ್ಟಿನಲ್ಲಿ, ಫೇಕ್ ರಿವ್ಯೂಗಳ ವಿರುದ್ಧ ವಿಜಯ್ ದೇವರಕೊಂಡ ನೀಡಿರುವ ಈ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕುಂಭಮೇಳದ ರುದ್ರಾಕ್ಷಿ ಹುಡುಗಿ ಈಗ ಸಿನಿಮಾ ಹೀರೋಯಿನ್! ಮೊನಾಲಿಸಾದ ‘ದಿಲ್ ಜಾನಿಯಾ’ ಸಾಂಗ್ ವೈರಲ್

2025ರ ಮಹಾಕುಂಭಮೇಳದಲ್ಲಿ ನೀಲಿ ಕಣ್ಣುಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ ಈಗ ಫುಲ್‌ ಫ್ಲೆಡ್ಜ್ ನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮೊನಾಲಿಸಾ ಮತ್ತು ಸಮರ್ಥ್ ಮೆಹ್ತಾ ಅಭಿನಯದ ‘ದಿಲ್ ಜಾನಿಯಾ’ ರೊಮ್ಯಾಂಟಿಕ್ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ.

ಹಾಡಿನಲ್ಲಿ ಸಮರ್ಥ್ ಮೆಹ್ತಾ ಜೊತೆ ಮೊನಾಲಿಸಾ ಡ್ಯಾನ್ಸ್ ಮಾಡಿದ್ದು, ಆಕೆಯ ನ್ಯಾಚುರಲ್ ಚಾರ್ಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡು ಹನಿಮನಿ ಪ್ರೊಡಕ್ಷನ್ ಹೌಸ್ ನಿರ್ಮಾಣದಲ್ಲಿ, ರಿಥಮ್ ಸಂಧ್ಯಾ ನಿರ್ದೇಶನದಲ್ಲಿ ಮೂಡಿಬಂದಿದೆ. ರಾಜಾ ಹರ್ಭಜನ್ ಸಿಂಗ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಗಗನ್‌ದೀಪ್ ಲಿರಿಕ್ಸ್ ನೀಡಿದ್ದಾರೆ. ‘ದಿಲ್ ಜಾನಿಯಾ’ ಹಾಡು ವೀನಸ್ ಓರಿಜಿನಲ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದೆ.

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ ಇಂದು ಪೂರ್ತಿ ದೇಶಕ್ಕೆ ಪರಿಚಿತ ಹೆಸರು. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪ್ರದೇಶದ ಯುವತಿ ಮೊನಾಲಿಸಾ, ತನ್ನ ವಿಭಿನ್ನ ನೀಲಿ ಕಣ್ಣುಗಳಿಂದ ವೈರಲ್ ಆದ ಬಳಿಕ ಜೀವನವೇ ಬದಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋ-ವೀಡಿಯೋಗಳು ಟ್ರೆಂಡ್ ಆದ ನಂತರ, ನಿರ್ದೇಶಕ ಸನೋಜ್ ಮಿಶ್ರಾ ಅವರು ‘ದಿ ಡೈರಿ ಆಫ್ ಮಣಿಪುರ’ ಸಿನಿಮಾದಲ್ಲಿ ಅವಕಾಶ ನೀಡಿದರು. ಕಳೆದ ಒಂದು ವರ್ಷದಿಂದ ಮೊನಾಲಿಸಾ ಈ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಚಿತ್ರೀಕರಣ ಮುಂದುವರಿದಿದೆ. ಶೀಘ್ರದಲ್ಲೇ ಸಿನಿಮಾ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಒಟ್ಟಿನಲ್ಲಿ, ಕುಂಭಮೇಳದ ಸ್ಟಾಲ್‌ನಿಂದ ಸಿನಿಮಾ ಸ್ಟಾರ್ ಆಗುವವರೆಗೆ ಮೊನಾಲಿಸಾದ ಜರ್ನಿ ಈಗ ಲಕ್ಷಾಂತರ ಯುವತಿಯರಿಗೆ ಇನ್ಸ್ಪಿರೇಷನ್ ಆಗಿದೆ.

ಬೆಂಗಳೂರಿಗಿಂತ ಕಳಪೆ ಏರ್ ಕ್ವಾಲಿಟಿ ಉಡುಪಿಯಲ್ಲಿ; ತಜ್ಞರಿಂದ ಎಚ್ಚರಿಕೆ!

0

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ಏರ್ ಕ್ವಾಲಿಟಿ ಇಂದು ಸುಧಾರಣೆಯತ್ತ ಸಾಗುತ್ತಿದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 138 ಆಗಿದ್ದು, ಡಿಸೆಂಬರ್ ತಿಂಗಳಿಗೆ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಮೈಸೂರು (59) ಮತ್ತು ವಿಜಯಪುರ (62) ಸ್ಥಳಗಳಲ್ಲಿಯೂ ಏರ್ ಕ್ವಾಲಿಟಿ ಉತ್ತಮವಾಗಿದೆ. ಆದರೆ ಶಿವಮೊಗ್ಗ (154) ಮತ್ತು ಉಡುಪಿ (166) ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಅನಾರೋಗ್ಯಕರ ಮಟ್ಟದಲ್ಲಿದೆ. ಉಡುಪಿಯ ವಾಯು ಮಾಲಿನ್ಯ ಕಳೆದ ತಿಂಗಳು 50–100ರ ನಡುವೆ ಇಂದು 166ಕ್ಕೆ ಏರಿಕೆ ಕಂಡಿದೆ.

ವೈದ್ಯರು ಹೇಳಿದಂತೆ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಸಾಧ್ಯವಾಗಲಿಲ್ಲ. ಸಾರ್ವಜನಿಕರು ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಪೀಕ್ ಟ್ರಾಫಿಕ್ ಸಮಯ ತಪ್ಪಿಸುವುದು, ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸೇವಿಸುವುದನ್ನು ಕಾಪಾಡುವುದು ಮಹತ್ತರ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಇಂದಿನ ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟ (AQI):
ಬೆಂಗಳೂರು – 138
ಮಂಗಳೂರು – ೧೬೧
ಮೈಸೂರು – ೫೯
ಬೆಳಗಾವಿ – ೧೪೦
ಕಲಬುರ್ಗಿ – 79
ಶಿವಮೊಗ್ಗ – 154
ಬಳ್ಳಾರಿ – ೧೪೪
ಹುಬ್ಬಳ್ಳಿ – 87
ಉಡುಪಿ – ೧೬೬
ವಿಜಯಪುರ – ೬೨.

ಫಿನಾಲೆಗೂ ಮುನ್ನ ಬಿಗ್ ಶಾಕ್: ರಾಶಿಕಾ ಔಟ್! ಟಾಪ್–7 ಫೈನಲಿಸ್ಟ್‌ಗಳ ಪಟ್ಟಿ ರಿಲೀಸ್

ಬಿಗ್‌ಬಾಸ್ ಕನ್ನಡ ಸೀಸನ್ 12ರ ಕೊನೆಯ ಕಿಚ್ಚನ ಪಂಚಾಯಿತಿ ಪ್ರೇಕ್ಷಕರಿಗೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಈ ವಾರ ರಾಶಿಕಾ ಅಧಿಕೃತವಾಗಿ ಮನೆಯಿಂದ ಹೊರಬಂದಿದ್ದಾರೆ.

ಈ ವಾರ ಕ್ಯಾಪ್ಟನ್ ಧನುಷ್ ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ರಘು ಮತ್ತು ರಾಶಿಕಾ ಡೇಂಜರ್ ಝೋನ್‌ಗೆ ಬಂದಿದ್ದರು. ಅಭಿಮಾನಿಗಳಿಗೆ ಕುತೂಹಲ ಉಕ್ಕಿದ ಕ್ಷಣದಲ್ಲಿ ರಘು ಸೇಫ್ ಆಗಿ ಫಿನಾಲೆ ಟಿಕೆಟ್ ಪಡೆದರೆ, ರಾಶಿಕಾ ಔಟ್ ಆಗಿದ್ದಾರೆ.

ಶನಿವಾರದ ಪಂಚಾಯಿತಿಯಲ್ಲಿ ಅಶ್ವಿನಿ ಒಬ್ಬರೇ ಸೇಫ್ ಆಗಿದ್ದರು. ಭಾನುವಾರದ ಎಪಿಸೋಡ್‌ನಲ್ಲಿ ಮೊದಲು ಗಿಲ್ಲಿ ಮತ್ತು ರಕ್ಷಿತಾ ಸೇಫ್ ಆದರು. ನಂತರ ಧ್ರುವಂತ ಹಾಗೂ ಕಾವ್ಯ ಕೂಡ ಸೇಫ್ ಆಗಿದ್ದಾರೆ.

ಇದೀಗ ಬಿಗ್‌ಬಾಸ್ ಮನೆಯೊಳಗೆ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು ಧನುಷ್, ಅಶ್ವಿನಿ, ಗಿಲ್ಲಿ, ರಕ್ಷಿತಾ, ಧ್ರುವಂತ, ಕಾವ್ಯ, ರಘು ಆಗಿದ್ದಾರೆ.  ಟಾಪ್–7 ಫಿಕ್ಸ್ ಆದ ಬಳಿಕ ಬಿಗ್‌ಬಾಸ್ ಹೌಸ್‌ನಲ್ಲಿ ಈಗ ಆಟ ಇನ್ನಷ್ಟು ತೀವ್ರವಾಗುವ ಸೂಚನೆ ಸಿಕ್ಕಿದೆ.

ಟೊಮೆಟೊಗಳನ್ನು ಫ್ರಿಡ್ಜ್‌ʼನಲ್ಲಿ ಇಡ್ತೀರಾ? ಹಾಗಾದರೆ ಈ ಮಾಹಿತಿ ತಪ್ಪದೇ ತಿಳಿದುಕೊಳ್ಳಿ!

0

ಚಟ್ನಿಯಿಂದ ಹಿಡಿದು ಸಾಂಬಾರ್‌ವರೆಗೆ ಟೊಮೆಟೊ ಇಲ್ಲದೆ ಅಡುಗೆ ಅಪೂರ್ಣ. ಆದರೆ ಮಾರುಕಟ್ಟೆಯಿಂದ ತಂದ ಟೊಮೆಟೊಗಳನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸ ಹಲವರಲ್ಲಿದೆ. ಈ ರೀತಿ ಸಂಗ್ರಹಿಸುವುದು ಟೊಮೆಟೊಗಳ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಸರಿಯೇ?

ಚೆನ್ನಾಗಿ ಮಾಗಿದ ಟೊಮೆಟೊಗಳನ್ನು ಕೆಲ ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬಹುದು. ಆದರೆ ಆರೋಗ್ಯ ತಜ್ಞರ ಪ್ರಕಾರ, ಐದು ದಿನಗಳಿಗಿಂತ ಹೆಚ್ಚು ಕಾಲ ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವಲ್ಲ. ಅತಿಯಾದ ತಂಪು ತಾಪಮಾನವು ಟೊಮೆಟೊಗಳಲ್ಲಿನ ಜೀವಕೋಶ ರಚನೆಯನ್ನು ಹಾನಿಗೊಳಿಸಿ, ಅವುಗಳ ರುಚಿ ಮತ್ತು ಪೌಷ್ಟಿಕ ಮೌಲ್ಯವನ್ನು ಕಡಿಮೆ ಮಾಡುತ್ತದೆ.

 ಎರಡು–ಮೂರು ದಿನಗಳಲ್ಲಿ ಬಳಸುವುದಾದರೆ ಮಾತ್ರ ಫ್ರಿಡ್ಜ್‌ನಲ್ಲಿ ಇಡಬಹುದು. ಇಲ್ಲದಿದ್ದರೆ, ಸಾಮಾನ್ಯ ತಾಪಮಾನದಲ್ಲೇ ಇಡುವುದು ಉತ್ತಮ.

ಒಂದು ವಾರಕ್ಕಿಂತ ಹೆಚ್ಚು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತದೆ?

ಒಂದು ವಾರಕ್ಕಿಂತ ಹೆಚ್ಚು ಕಾಲ ಫ್ರಿಡ್ಜ್‌ನಲ್ಲಿ ಇಟ್ಟ ಟೊಮೆಟೊಗಳು ಹೊರಗೆ ಚೆನ್ನಾಗಿ ಕಾಣಿಸಿದರೂ, ಒಳಗಿನಿಂದ ಕೊಳೆಯಲು ಆರಂಭಿಸಬಹುದು. ಇಂತಹ ಟೊಮೆಟೊಗಳನ್ನು ಅಡುಗೆಯಲ್ಲಿ ಬಳಸಿದರೆ:

  • ಅಜೀರ್ಣ

  • ವಾಂತಿ

  • ಅತಿಸಾರ

  • ರೋಗನಿರೋಧಕ ಶಕ್ತಿ ಕುಂಠಿತವಾಗುವುದು

  • ಸೋಂಕುಗಳ ಅಪಾಯ ಹೆಚ್ಚುವುದು

ಎಂಬಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಫ್ರಿಡ್ಜ್‌ನಲ್ಲಿನ ಹೆಚ್ಚುವರಿ ತೇವಾಂಶವು ಟೊಮೆಟೊಗಳು ಬೇಗ ಹಾಳಾಗಲು ಪ್ರಮುಖ ಕಾರಣವಾಗುತ್ತದೆ.

ಟೊಮೆಟೊಗಳನ್ನು ಸರಿಯಾಗಿ ಸಂಗ್ರಹಿಸುವ ಟಿಪ್ಸ್

  • ಸಾಧ್ಯವಾದಷ್ಟು ಬೇಗ ಖರೀದಿಸಿದ ಟೊಮೆಟೊಗಳನ್ನು ಬಳಸಿ

  • ಫ್ರಿಡ್ಜ್‌ನಲ್ಲಿ ಇಟ್ಟರೆ ತರಕಾರಿಗಳಿಗಾಗಿ ಮೀಸಲಾದ ಡ್ರಾಯರ್‌ನಲ್ಲಿ ಇರಿಸಿ

  • ಒಳಗೆ ಕಪ್ಪು ಕಲೆಗಳು, ಮೃದುವಾಗಿರುವುದು ಅಥವಾ ಕೆಟ್ಟ ವಾಸನೆ ಇದ್ದರೆ ಬಳಸದಿರಿ

  • ಹೆಚ್ಚು ದಿನ ಸಂಗ್ರಹಿಸುವುದಕ್ಕಿಂತ ತಾಜಾ ಟೊಮೆಟೊ ಬಳಸುವುದು ಉತ್ತಮ

ಒಟ್ಟಿನಲ್ಲಿ, ಟೊಮೆಟೊಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಮಾತ್ರ ರುಚಿಯ ಜೊತೆಗೆ ಆರೋಗ್ಯ ಲಾಭವೂ ನಿಮ್ಮದಾಗುತ್ತದೆ.

AI ಯುವತಿಯ ಮೋಹದಲ್ಲಿ ಸಿಲುಕಿದ ಬೆಂಗಳೂರು ಯುವಕ: ವಿಡಿಯೋ ಕಾಲ್ ಟ್ರ್ಯಾಪ್ ಮೂಲಕ 1.53 ಲಕ್ಷ ರೂ. ಲೂಟಿ

0

ಬೆಂಗಳೂರು: ಎಐ ಯುವತಿಯ (AI Girl) ಬಲೆಗೆ ಬಿದ್ದು ಬೆಂಗಳೂರಿನ 26 ವರ್ಷದ ಯುವಕನೊಬ್ಬ ಸುಮಾರು 1.53 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯುವಕ Happn ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದು, ಇಶಾನಿ ಎಂಬ ಹೆಸರಿನ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ.

ನಂತರ ಇಬ್ಬರ ನಡುವೆ ಮೊಬೈಲ್ ನಂಬರ್ ವಿನಿಮಯವಾಗಿ ಖಾಸಗಿ ವಿಚಾರಗಳ ಬಗ್ಗೆ ಚಾಟಿಂಗ್ ಆರಂಭವಾಗಿದೆ. ಕೆಲ ದಿನಗಳ ಬಳಿಕ ಯುವತಿಯ ಮೊಬೈಲಿನಿಂದ ಯುವಕನಿಗೆ ವಿಡಿಯೋ ಕಾಲ್ ಬಂದಿದೆ. ಆ ವಿಡಿಯೋ ಕಾಲ್‌ನಲ್ಲಿ ಯುವತಿ ಬೆತ್ತಲಾಗಿದ್ದಳು. ಬಳಿಕ ಯುವಕನಿಗೂ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದು, ಯುವಕ ಆಕೆಯ ಮಾತಿಗೆ ಮರುಳಾಗಿ ಬೆತ್ತಲಾಗಿದ್ದಾನೆ.

ಈ ಸಂದರ್ಭವನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡು, ಯುವಕನ ಬೆತ್ತಲೆ ವಿಡಿಯೋ ಮತ್ತು ಫೋಟೊಗಳನ್ನು ಆತನಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಯುವಕನಿಂದ 1.53 ಲಕ್ಷ ರೂ. ವಸೂಲಿ ಮಾಡಲಾಗಿದೆ. ಇನ್ನೂ ಹಣ ಕೇಳಲು ಆರಂಭಿಸಿದಾಗ ಯುವಕ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಎಐ ತಂತ್ರಜ್ಞಾನ ಬಳಸಿ ಯುವತಿಯಂತೆ ನಟಿಸಿ ಈ ವಂಚನೆ ನಡೆಸಿರುವ ಸಾಧ್ಯತೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

error: Content is protected !!