Home Blog Page 2172

ಅಂಗಡಿ ಮುಂದೆ ಉಗುಳಿದ್ದಕ್ಕೆ ಯುವಕನ ಕೊಲೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚಿಕ್ಕಬಳ್ಳಾಪುರ: ಅಂಗಡಿ ಮುಂದೆ ಉಗುಳಿದ್ದಕ್ಕೆ ಯುವಕನ ಕೊಲೆ ನಡೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಊಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುನಿಕೃಷ್ಣ(23) ಕೊಲೆಯಾದ ದುರ್ದೈವಿಯಾಗಿದ್ದು, ಇಂದು ಬೆಳಿಗ್ಗೆ ಅದೇ ಗ್ರಾಮದ ಚೇತನ್ ಎಂಬಾತನ ಅಂಗಡಿಗೆ ಬಂದಿದ್ದ ಮುನಿಕೃಷ್ಣ ಅಂಗಡಿಯ ಮುಂದೆ ಉಗುಳಿದ್ದಾನೆ.

ಇದರಿಂದ ಕುಪಿತಗೊಂಡ ಚೇತನ್, ಮುನಿಕೃಷ್ಣನೊಂದಿಗೆ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ, ಮುನಿಕೃಷ್ಣನನ್ನು ಚೇತನ್ ಚಾಕುವಿನಿಂದ ಇರಿದು ಕೊಲೆ ಮಾಡುವ ಮೂಲಕ ಅಂತ್ಯಗೊಂಡಿದೆ.

ಚೇತನ್

ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಶ್ರೀನಿವಾಸಪ್ಪ, ಪಿಎಸ್ಐ ನರೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಚೇತನ್ ನನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಕೊಲೆಯಾದ ಮುನಿಕೃಷ್ಣ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಮಂಜುಳಾ ಪೂಜಾರಿ ಕೃಷಿ ಸಚಿವರ ಕ್ಷಮೆ ಕೇಳಲಿ: ಕಕ್ಕರಗೋಳ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿಕರ ಪ್ರತಿಭಟನೆಯಲ್ಲಿ ರೈತಮಹಿಳೆ ಮಂಜುಳಾ ಪೂಜಾರಿಯವರು ಮಾಧ್ಯಮದವರೊಂದಿಗೆ ಮಾತನಾಡುವ ಭರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಬಗ್ಗೆ ಅವಹೇಳನಕಾರಿ‌ ಪದ ಬಳಸಿರುವುದು ಸರಿಯಲ್ಲ.

ಕೂಡಲೇ ಮಂಜುಳಾ ಅವರು ಸಚಿವ ಬಿ.ಸಿ. ಪಾಟೀಲ ಅವರ ಕ್ಷಮೆ ಕೇಳಬೇಕು ಎಂದು ಬಿ.ಸಿ.ಪಾಟೀಲ ಅಭಿಮಾನಿ ಬಳಗದ ಮುಖಂಡ ಬಸನಗೌಡ ಕಕ್ಕರಗೋಳ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಚಿವ ಬಿ.ಸಿ.ಪಾಟೀಲ ಅವರು ರಾಜ್ಯದ ರೈತರ ಅಭಿವೃದ್ಧಿ ಕುರಿತು ಅಗಾಧ ಕನಸು‌ ಕಂಡಿದ್ದಾರೆ. ಕೃಷಿಪರ ಇರುವ ಸಚಿವರ ಉತ್ಸಾಹಕ್ಕೆ ತಣ್ಣೀರೆರಚುವಂಥ, ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಪದ ಬಳಸಿರುವುದು ವಿವೇಚನಾರಹಿತರು ಮಾಡುವ ಕೆಲಸ.

ಕೂಡಲೇ ಮಂಜುಳಾ ಪೂಜಾರಿಯವರು ಸಚಿವ ಬಿ.ಸಿ. ಪಾಟೀಲ ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿ.ಸಿ.ಪಾಟೀಲ ಅಭಿಮಾನಿ ಬಳಗ ಪ್ರತಿಭಟನೆಗೆ ಮುಂದಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಒಂದು ಅಡಿ ಕುಸಿದ ಮದಲಗಟ್ಟಿ ಸೇತುವೆ; ವಾಹನ ಸಂಚಾರ ಬಂದ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಸೇತುವೆ ಏಕಾಏಕಿ ಒಂದು ಅಡಿಯಷ್ಟು ಕುಸಿದಿದೆ.

ಬಳ್ಳಾರಿ ಜಿಲ್ಲೆಯ ಹಡಗಲಿ ಮತ್ತು ಗದಗ ಮಾರ್ಗದಲ್ಲಿರುವ ಬ್ರಿಡ್ಜ್ ನ ಮದ್ಯೆ ಏಕಾಏಕಿ ಕಂದಕ ಸೃಷ್ಠಿಯಾಗಿ ಭಾರೀ ಬಿರುಕು ಬಿಟ್ಟ ಪರಿಣಾಮ ಲಾರಿ ಮತ್ತು ಕಾರುಗಳು ಜಖಂಗೊಂಡಿವೆ.

ಬುಧವಾರ ಬೆಳ್ಳಂಬೆಳಗ್ಗೆ ಈ ಸೇತುವೆಯ ಮೇಲ್ಭಾಗದಲ್ಲಿ ಕುಸಿತ ಕಂಡುಬಂದಿದೆ. 2002 ರಲ್ಲಿ ನಿರ್ಮಾಣಗೊಂಡಿದ್ದ ಈ ಬ್ರಿಡ್ಜ್ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದರೂ ಸಹ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಿರಲಿಲ್ಲ.

ಬ್ರಿಡ್ಜ್ ನವೀಕರಣದ ಬಗ್ಗೆ ಅನೇಕ ಸಲ ದೂರು ಸಲ್ಲಿಸಿದ್ದರು ಸಹ ಕ್ಯಾರೇ ಎಂದಿರಲಿಲ್ಲ. ಬೆಳಗಿನ ಜಾವ ಕುಸಿತ ಕಂಡಿದ್ದು, ಈ ವೇಳೆ ವಾಹನ ಸಂಚಾರ ಕಡಿಮೆಯಿದ್ದ ಪರಿಣಾಮ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಘಟನೆಯ ನಂತರ ಲೋಕೋಪಯೋಗಿ ಇಲಾಖೆಯ ಇಂಜನಿಯರುಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಕೊವಿಡ್ ಕಾಲ: ಎಲ್ಲಿ ಲೀಕ್ ಆಗುತ್ತಿದೆ ಆಕ್ಸಿಜನ್? ಉತ್ಪಾದನೆ ಓಕೆ, ಆದರೂ ಕೊರತೆ ಏಕೆ?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಮಂಗಳವಾರ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ, ಕೊವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವ ಜ್ವಲಂತ ಸಮಸ್ಯೆಯನ್ನು ಗದಗ ಶಾಸಕ ಎಚ್.ಕೆ. ಪಾಟೀಲರು ಪ್ರಸ್ತಾಪಿಸಿದ್ದರು. ಪಕ್ಕದ ರಾಜ್ಯಗಳಿಗೆ ಆಕ್ಸಿಜನ್ ಕಳಿಸುವ ಸರ್ಕಾರ, ಇಲ್ಲೇ ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವ ಕೊವಿಡ್ ರೋಗಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿ ಕಾರಿದ್ದರು.

ಕೊವಿಡ್ ತೀವ್ರವಾಗಿರುವ ಐದಾರು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿದೆ. ಉತ್ಪಾದನೆ, ಪೂರೈಕೆ ಮತ್ತು ವಿತರಣೆಯಲ್ಲಿ ಸಾಕಷ್ಟು ದೋಷಗಳಿವೆ.
ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ಆಕ್ಸಿಜನ್ ಕೊರತೆಯಿಲ್ಲ, ಬದಲಿಗೆ ಅದನ್ನು ಬಳಸುವ ನಿರ್ವಹಣೆಯಲ್ಲಿ ಆಸ್ಪತ್ರೆಗಳು ತಪ್ಪು ಮಾಡುತ್ತಿವೆ, ಇದರಿಂದ ಆಕ್ಸಿಜನ್ ಕೊರತೆಯಾಗುತ್ತಿದೆ ಎಂದು ಹೇಳಿದೆ.

ಕಳೆದ 45 ದಿನದಲ್ಲಿ ಆಕ್ಸಿಜನ್ ಅಗತ್ಯವಿರುವ ಕೊವಿಡ್ ರೋಗಿಗಳ ಸಂಖ್ಯೆ ಶೇ. 1ರಷ್ಟು ಏರಿಕೆಯಾಗಿದೆ. 45 ದಿನದ ಹಿಂದೆ ಆಕ್ಸಿಜನ್ ಅಗತ್ಯವಿರುವ ಸಕ್ರಿಯ ರೋಗಿಗಳ ಸಂಖ್ಯೆ ಶೇ. 5.6 ಇತ್ತು. ಈಗ ಅದು ಶೇ. 6.5ಗೆ ಏರಿದೆ.

ಒಂದು ಪರ್ಸೆಂಟ್ ಏರಿಕೆ ಸಣ್ಣದು ಎನಿಸಿದರೂ, ದೈನಂದಿನ ಕೇಸುಗಳ ಸಂಖ್ಯೆ ನೋಡಿದರೆ ಇದು ಗಣನೀಯ ಏರಿಕೆಯೇ. ಇಷ್ಟಾದರೂ ಈಗ ಉತ್ಪಾನೆಯಾಗುತ್ತಿರುವ ಆಕ್ಸಿಜನ್‌ನಲ್ಲೇ ನಿರ್ವಹಣೆ ಮಾಡಲು ಸಾಧ್ಯ ಎಂಬುದು ಕೇಂದ್ರದ ವಾದ.

ಕೇಂದ್ರ ಸರ್ಕಾರದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗಳು ಆಕ್ಸಿಜನ್ ಬಳಸುತ್ತಿವೆ. ಸೌಮ್ಯ ಲಕ್ಷಣಗಳಿರುವ ಕೊವಿಡ್ ರೋಗಿಗಳಲ್ಲಿ ಎಷ್ಟು ಜನರಿಗೆ ಆಕ್ಸಿಜನ್ ಅಗತ್ಯ ಎಂಬುದರ ಅಂದಾಜನ್ನು ಮೊದಲೇ ಮಾಡಿಕೊಳ್ಳುತ್ತಿಲ್ಲ. ರೋಗಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲೂ ಆಕ್ಸಿಜನ್ ಪೂರೈಸಿದ ವರದಿಗಳಿವೆ.

ಕೆಲವು ದೊಡ್ಡ ಆಸ್ಪತ್ರೆಗಳು ನೇರವಾಗಿ ಉತ್ಪಾದಕರಿಂದ ಆಕ್ಸಿಜನ್ ಸಿಲಿಂಡರ್ ಪಡೆದರೆ, ಉಳಿದ ಆಸ್ಪತ್ರೆಗಳು ಬಾಟ್ಲರ್‌ಗಳ ಮೂಲಕ ಪಡೆಯುತ್ತವೆ. ಈ ಬಾಟ್ಲರ್‌ಗಳು ಉತ್ಪಾದಕರಿಂದ ಪಡೆದು, ಅದನ್ನು ಸಿಲಿಂಡರ್‌ಗೆ ತುಂಬಿ ಪೂರೈಸುತ್ತಾರೆ. ಇಲ್ಲಿಯೂ ವಿಳಂಬವಾಗುತ್ತಿದೆ.

ಇವೆಲ್ಲ ಕಾರಣಗಳು ಸರಿ. ಆದರೆ ಈಗ ಆಗಬೇಕಾದ ತುರ್ತು ಕೆಲಸ ಆಕ್ಸಿಜನ್ ಕೊರತೆಯ ಕಾರಣಕ್ಕೇ ಸಾವು ಸಂಭವಿಸದಂತೆ ತಡೆಯುವುದೇ ಆಗಿದೆ. ಸಾಕಷ್ಟು ಉತ್ಪಾದನೆಯಿದ್ದೂ, ಅದರ ಸಮರ್ಪಕ ಉಪಯೋಗ ಮಾಡದಿದ್ದರೆ ಈ ಆಡಳಿತ ವ್ಯವಸ್ಥೆ ಇದ್ದೂ ಏನು ಉಪಯೋಗ?

ಬಂದ್ರು ಸಾರ್ ಶಶಿಕಲಾ, ಬಂದ್ವು ಸಾರ್ ತಮಿಳ್ನಾಡು ಎಲೆಕ್ಷನ್!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚೆನ್ನೈ/ಬೆಂಗಳೂರು/ನವದೆಹಲಿ: ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ದಿ. ಜಯಲಲಿತಾರ ಆಪ್ತ ಗೆಳತಿ ಶಶಿಕಲಾರನ್ನು ಸನ್ನಡತೆಯ ಆಧಾರದ ಮೇಲೆ ನಾಲ್ಕು ತಿಂಗಳು ಮೊದಲೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ವಾರೊಪ್ಪತ್ತಿನಲ್ಲಿ ಅವರು ಹೊರಗೆ ಬರುತ್ತಿದ್ದಾರೆ.

ಎಐಡಿಎಂಕೆಯಿಂದ ಒಡೆದು ಹೋಗಿರುವ ಎಎಂಎಂಕೆ ಬಣ (ಶಶಿಕಲಾ ಬೆಂಬಲಿಗರ ಬಣ)ವನ್ನು ಮರಳಿ ಎಐಡಿಎಂಕೆಯಲ್ಲಿ ವಿಲೀನಗೊಳಿಸುವ ಮೀಡಿಯೇಟರ್ ಕೆಲಸಕ್ಕೆ ರಾಷ್ಟ್ರೀಯ ಬಿಜೆಪಿ ಅದಾಗಲೇ ಇಳಿದಾಗಿದೆ. ಎಎಂಎಂಕೆ ನಡೆಸುತ್ತಿರುವ ಟಿಟಿಕೆ ದಿನಕರನ್ ಎರಡು ದಿನದ ಹಿಂದಷ್ಟೇ ದೆಹಲಿಗೆ ಹೋಗಿ ಬಂದಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾಗಿ, ಮುಂದಿನ ರಾಜಕೀಯದ ಬಗ್ಗೆ ಚರ್ಚಿಸಿದ್ದಾಗಿ ಅವರೇ ಹೇಳಿದ್ದಾರೆ.

ಮೇ 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಸತತ ಎರಡನೇ ಬಾರಿ ಅಧಿಕಾರ ನಡೆಸುತ್ತಿರುವ ಎಐಡಿಎಂಕೆ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ. ಅದೂ ಅಲ್ಲದೇ ಜಯಲಲಿತಾ ಇಲ್ಲದೇ ಅದು ಮೊದಲ ಸಲ ಚುನಾವಣೆ ಎದುರಿಸಲಿದೆ.

ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೇಳಿಕೊಳ್ಳುವ ಅಸ್ತಿತ್ವವೇ ಇಲ್ಲದ ಬಿಜೆಪಿ ಈಗ ಒಡೆದು ಹೋದ ಎಐಎಡಿಎಂಕೆಯ ಬಣವನ್ನು ಮರಳಿ ಮೂಲ ಪಕ್ಷಕ್ಕೆ ಸೇರಿಸುವ ಮಧ್ಯಸ್ಥಿಕೆ ಕೆಲಸ ಶುರು ಮಾಡಿದೆ. ಎಐಡಿಎಂಕೆ ಮತ್ತು ಬಿಜೆಪಿ ಪರಸ್ಪರ ಹೊಂದಾಣಿಕೆ ಹೊಂದಿವೆ.

ಅಂದಂತೆ ಜಯಲಲಿತಾ ಸಾವಿನ ನಂತರ ಎಐಡಿಎಂಕೆ  ಹೋಳಾಗಲು ಬಿಜೆಪಿಯೇ ಕಾರಣ ಎಂಬುದನ್ನು ಜನ ಮರೆತಿರಲಾರರು. ಕಾದು ನೋಡಬೇಕು.

65 ಕೋಟಿ ರೂ. ಭ್ರಷ್ಟಾಚಾರ ಹಗರಣದಲ್ಲಿ 4 ವರ್ಷ ಜೈಲುಶಿಕ್ಷೆ ಅನುಭವಿಸಿದ ಶಶಿಕಲಾ ಶಿಕ್ಷೆಯ ಅವಧಿ ಜನವರಿಗೆ ಮುಗಿಯುತ್ತದಾದರೂ, ಸನ್ನಡತೆಯ ಆಧಾರದ ಮೇಲೆ ಈ ವಾರ ಅಥವಾ ಮುಂದಿನ ವಾರ ಅವರ ಬಿಡುಗಡೆ ಆಗಲಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಆಗ ಬಂದ್ರು ಸಾರ್ ಶಕುಂತಲಾ ಶುರು. ತಮಿಳರು ಶಶಿಕಲಾರಲ್ಲಿ ಜಯಲಲಿತಾರನ್ನು ಕಂಡರೆ ಪೊಲಿಟಿಕಲ್ ಪಿಚ್ಚರೇ ಬದಲಾಗಿದೆ.

ಸದ್ಯಕ್ಕೆ ಅಂತಹ ವಾತಾವರಣವಂತೂ ಇಲ್ಲ. ಈ ನಡುವೆ ವಿರೋಧ ಪಕ್ಷ ಡಿಎಂಕೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಹಿಂದಿ ಹೇರಿಕೆಯ ವಿರುದ್ಧದ ಅಲೆ ಜೋರಾಗಿಯೇ ಇದ್ದು, ಇದು ಡಿಎಂಕೆಗೆ ವರದಾನವೂ, ಬಿಜೆಪಿ ಸಖ್ಯ ಮಾಡಿದರೆ ಎಐಡಿಎಂಕೆಗೆ ಶಾಪವೂ ಆಗಬಹುದು.

1 ಕೋಟಿ ವಲಸೆ ಕಾರ್ಮಿಕರು ನಡೆದೇ ಹೋದರು: ಕೇಂದ್ರ ಸರ್ಕಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕೊವಿಡ್ ಲಾಕ್‌ಡೌನ್ ಕಾರಣಕ್ಕೆ ಮಾರ್ಚ್-ಜೂನ್ ಅವಧಿಯಲ್ಲಿ 1 ಕೋಟಿ 6 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಪ್ರದೇಶದಿಂದ ತಮ್ಮೂರಿಗೆ ನಡೆದುಕೊಂಡೇ ಹೋಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಸ್ತೆ ಮತ್ತು ಹೆದ್ದಾರಿ ರಾಜ್ಯ ಸಚಿವ ವಿ.ಕೆ.ಸಿಂಗ್ ಮಂಗಳವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಮಾರ್ಚ್-ಜೂನ್ ಅವಧಿಯಲ್ಲಿ ಹೆದ್ದಾರಿ ಸೇರಿ ಒಟ್ಟು 81,385 ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ 29,415 ಜನರು ಮೃತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ವಲಸೆ ಕಾರ್ಮಿಕರ ಕುರಿತಂತೆ ಪ್ರತ್ಯೇಕ ವರದಿಯನ್ನು ತಮ್ಮ ಸಚಿವಾಲಯ ಸಿದ್ಧಪಡಿಸಿಲ್ಲ ಎಂದು ತಿಳಿಸಿದ್ದಾರೆ.

ಬುಧವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಯಲ್ಲಿ ಕನಿಷ್ಠ 50,630, ದೆಹಲಿಯಲ್ಲಿ ಗರಿಷ್ಠ 54,000 ರೂ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,000 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್:48,050 ರೂ.,24 ಕ್ಯಾರಟ್: 52,420 ರೂ.
ಹುಬ್ಬಳ್ಳಿ: 22 ಕ್ಯಾರಟ್: 47,713 ರೂ., 24 ಕ್ಯಾರಟ್: 52,050 ರೂ.

5 ವರ್ಷ, 58 ದೇಶ, 517 ಕೋಟಿ ರೂ!: ಪ್ರಧಾನಿ ವಿದೇಶ ಪ್ರವಾಸ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: 2015 ರಿಂದ ಇಲ್ಲಿವರೆಗೆ ಪ್ರಧಾನಿ ನರೇಂದ್ರ ಮೋದಿ 58 ದೇಶಗಳಿಗೆ ಭೇಟಿ ನೀಡಿದ್ದು, ಅದಕ್ಕಾಗಿ ಸರ್ಕಾರದಿಂದ ತಗುಲಿದ ಖರ್ಚು 157.82 ಕೋಟಿ ರೂ. ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ವಿದೇಶಂಗ ಖಾತೆಯ ರಾಜ್ಯ ಸಚಿವ ವಿ ಮುರಳಿಧರನ್, ಪ್ರಧಾನಿಯ ವಿದೇಶ ಪ್ರವಾಸ ಮತ್ತು ಅದರಿಂದಾದ ಫಲಶೃತಿಗಳ ಕುರಿತು ರಾಜ್ಯಸಭೆಗೆ ವಿವರ ನೀಡುವಾಗ ಮೇಲಿನ ಮಾಹಿತಿಯನ್ನು ನೀಡಿದ್ದಾರೆ.

ಪ್ರಧಾನಿ ಅಮೆರಿಕ, ಚೀನಾ ಮತ್ತು ರಷ್ಯಾಗಳಿಗೆ ತಲಾ 5 ಸಲ ಭೇಟಿ ನೀಡಿದ್ದಾರೆ. ಇನ್ನು ಹಲವು ದೇಶಗಳಿಗೆ ಹಲವಾರು ಸಲ ಭೇಟಿ ನೀಡಿದ್ದಾರೆ. ಕೆಲವೊಮ್ಮೆ ಏಕಕಾಲಕ್ಕೆ ಹಲವು ದೇಶಗಳನ್ನು ಸುತ್ತಿ ಬಂದಿದ್ದರೆ, ಇನ್ನು ಕೆಲವು ಸಲ ದ್ವಿಪಕ್ಷಿಯ ಮಾತುಕತೆಗಾಗಿ ಒಂದೇ ದೇಶಕ್ಕೆ ಹೋಗಿ ಬಂದಿದ್ದಾರೆ.

ಅಂದಂತೆ, ಅವರ ಕೊನೆಯ ಭೇಟಿ 2019 ರ ನವಂಬರ್ 13-14ರಂದು ಬ್ರೆಜಿಲ್‌ಗೆ ಭೇಟಿ ನೀಡಿದ್ದು. ಅಂದರೆ 5 ವರ್ಷದಲ್ಲಿ ಅವರು 58 ದೇಶ ಸಂದರ್ಶಿಸಿ,517.82 ಕೋಟಿ. ರೂ ಖರ್ಚು ಮಾಡಿದ್ದಾರೆ!
ಅದರಿಂದ ಸಾಕಷ್ಟು ಲಾಭವಾಗಿವೆ ಎಂದು ಸರ್ಕಾರ ಹೇಳಿದೆಯಾದರೂ, ವಾಸ್ತವದಲ್ಲಿ ಎಷ್ಟು ಪ್ರಾಜೆಕ್ಟ್ ಗಳು ಕಾರ್ಯಾರಂಭ ಮಾಡಿವೆ ಎಂಬ ವಿವರವಿಲ್ಲ.

ಚೀನಾಕ್ಕೆ ಅವರು 5 ಸಲ ಭೇಟಿ ನೀಡಿದ್ದು, ಚೀನಾ ಪ್ರಧಾನಿ ಇಲ್ಲಿಗೆ 2 ಸಲ ಬಂದಿದ್ದು ನೋಡಿದ ಮೇಲೆ ಅದರ ಫಲಶೃತಿ ಇಷ್ಟೇನಾ ಎಂಬ ಪ್ರಶ್ನೆ ಕಾಡದೇ ಇರದು!

ಉದ್ಯೋಗವಷ್ಟೇ ಖಾತ್ರಿ, ಕೂಲಿಗೆ ಮಾತ್ರ ಕತ್ರಿ!ನರೇಗಾ ಮೆಂ ಮರೇಗಾ: 3 ತಿಂಗಳಾದ್ರೂ ಕೂಲಿಯಿಲ್ಲ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನರೇಗಾ ಯಾ ಮರೇಗಾ ಎಂದರೆ ಈಗ ಎರಡನೆಯದ್ದೆ ಬೆಟರ್ ಎನಿಸುವಂತಹ ಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದೆ. 3 ತಿಂಗಳುಗಟ್ಟಲೇ ಉದ್ಯೋಗ ಮಾಡಿದ್ದು ಮಾತ್ರ ಖಾತ್ರಿ, ಕೂಲಿಗೆ ಮಾತ್ರ ಕತ್ರಿ. ಜಿಲ್ಲೆಯ ಕುಕನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಿದ ಜನರಿಗೆ 3 ತಿಂಗಳಾದರೂ ಕೂಡ ಹಣ ಬಂದಿಲ್ಲ. ಜೊತೆಗೆ ಮೇಟಿಗಳಿಗೆ ಕೂಡ ನಯಾಪೈಸೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಕೂಡ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಮಂಗಳೂರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ಕೂಡ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೆ ಜನರು ಪಂಚಾಯತಿಗೆ ಅಲೆದಾಡುವ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ‘ಆಗ ಉದ್ಯೋಗ ಖಾತ್ರಿ, ಈಗ ಪಂಚಾಯತಿ ಸುತ್ರಿ’ ಎನ್ನುವಂತಹ ಪರಿಸ್ಥಿತಿ ಏರ್ಪಟ್ಟಿದೆ.

ನೂರು ದಿನಗಳ ಕಾಲದ ಉದ್ಯೋಗ ಖಾತ್ರಿ ಕೆಲಸವನ್ನು ಕೇವಲ ಹದಿನೈದು ದಿನಗಳ ಮಾತ್ರ ಒದಗಿಸಿದ್ದಾರೆ. ಇನ್ನೂ ಅನೇಕ ಜನರ ಖಾತೆಗೆ ಹಣ ಬಂದಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ದುಡಿದ ಹಣದ ಕೂಲಿ ಒದಗಿಸಬೇಕು, ಇಲ್ಲದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಿಲ್ಲೆಯಲ್ಲಿ 120 ಜನರಿಗೆ ಸೋಂಕು; 92 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಮಂಗಳವಾರ ದಿ. 22 ರಂದು 120 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

120 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8567 ಕ್ಕೇರಿದೆ. ಇಂದು 92 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7570 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 872 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 125 ಜನರು ಮೃತಪಟ್ಟಿದ್ದಾರೆ.

ಗದಗ-65, ಮುಂಡರಗಿ-14, ನರಗುಂದ-06, ರೋಣ-19, ಶಿರಹಟ್ಟಿ-03, ಹೊರ ಜಿಲ್ಲೆಯ 13 ಸೇರಿದಂತೆ 120 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಮಸಾರಿ, ಮಾರುತಿ ದೇವಸ್ಥಾನದ ಹತ್ತಿರ, ಗಂಗಾಪುರ ಪೇಟ, ವಿವೇಕಾನಂದ ನಗರ, ಗಾಂಧಿನಗರ, ಅಮರೇಶ್ವರ ನಗರ, ಜನತಾ ಕಾಲೋನಿ, ಅಕ್ಕಮಹಾದೇವಿ ದೇವಸ್ಥಾನದ ಹತ್ತಿರ, ಟ್ಯಾಗೋರ ರಸ್ತೆ, ಸರ್ವೋದಯ ಕಾಲೋನಿ, ಹುಡ್ಕೋ ಕಾಲೋನಿ, ಹಾತಲಗೇರಿ ನಾಕಾ, ಆರ.ಕೆ.ನಗರ, ಕಳಸಾಪುರ ರಸ್ತೆ, ಜಿಮ್ಸ್ , ಭುಳ್ಳಾ ಗಲ್ಲಿ, ಎಲ್.ಆಯ್.ಸಿ. ಕಚೇರಿ ಹತ್ತಿರ,

ಗದಗ ತಾಲೂಕಿನ ಲಕ್ಕುಂಡಿ, ಹುಲಕೋಟಿ, ನೀಲಗುಂದ, ಯಲಿಶಿರೂರ, ಹಾಳಕೇರಿ, ಕುರ್ತಕೋಟಿ, ಚಿಕ್ಕ ಹಂದಿಗೋಳ, ಮುಳಗುಂದ, ಕಣಗಿನಹಾಳ, ಮಲ್ಲಸಮುದ್ರ, ಸಂಭಾಪುರ,

ಮುಂಡರಗಿ ಪಟ್ಟಣದ ಮಾಬುಸಾಬನಿ ನಗರ, ಮುಂಡರಗಿ ತಾಲೂಕಿನ ಬರದೂರ, ಕದಾಂಪುರ, ಶೀರನಹಳ್ಳಿ,

ನರಗುಂದ ಪಟ್ಟಣದ ಅಧ್ಯಾಪಕ ನಗರ,

ರೋಣ ಪಟ್ಟಣದ ತಳವಾರ ಓಣಿ, ಶಿವಪೇಟ, ಬದಾಮಿ ರಸ್ತೆ, ಗುಲಗುಂಜಿಮಠ,

ರೋಣ ತಾಲೂಕಿನ ಇಟಗಿ, ಅಬ್ಬಿಗೇರಿ, ನಿಡಗುಂದಿ, ಮುಶಿಗೇರಿ, ಸೂಡಿ, ಮಲ್ಲಾಪುರ, ಗಜೇಂದ್ರಗಡ ಪಟ್ಟಣದ ಬಸವನಗರ,

ಶಿರಹಟ್ಟಿ ಪಟ್ಟಣದ ಈಶ್ವರ ನಗರ, ತಾಲೂಕಿನ ಬಾಳೆಹೊಸೂರ, ಬನ್ನಿಕೊಪ್ಪ

error: Content is protected !!