Home Blog Page 3181

ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಆದೇಶ ಪ್ರತಿತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 11 ರಿಂದ ಏಪ್ರಿಲ್ 20 ರವರೆಗೆ ಜನ ಜಾನುವಾರುಗಳಿಗೆ ಕುಡಿಯುವ ಸುಮಾರು 2 ಟಿಎಂಸಿ ನೀರನ್ನು ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ನೀರು ನಿರ್ವಹಣೆಯ ಉದ್ದೇಶದಿಂದ ನಾಲೆಯ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕಲುಬುರಗಿ ವಿಭಾಗದ ಪ್ರದೇಶಿಕ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆ 0 ಮೈಲ್‍ನಿಂದ 47 ನೇ ಮೈಲ್ ವರೆಗೆ ಎಡ ಮತ್ತು ಬಲ ದಡಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆಯನ್ವಯ ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಕಾಣಿಸಿದ ಪ್ರದೇಶದ 100 ಮೀಟರ್ ಅಂತರದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಓಡಾಡುವಂತಿಲ್ಲ, ಹಾಗೂ ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ.

ಈ ಆದೇಶವು ಮದುವೆ ಮತ್ತು ಶವ ಸಂಸ್ಕಾರ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ದ್ಯಾಮವ್ವನ ಗುಡಿ ಬಳಿ ಇಸ್ಪೀಟು ಜೂಜಾಟ: ಎಂಟು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಸಮೀಪದ ನೀಲಗುಂದ ಗ್ರಾಮದ ದ್ಯಾಮವ್ವನ ದೇವಸ್ಥಾನದ ಮುಂದಿರುವ ಸಾರ್ವಜನಿಕ ಬಯಲು ಜಾಗೆಯಲ್ಲಿ ಇಸ್ಟೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮುಳಗುಂದ ಠಾಣೆಯ ಪೊಲೀಸರು ದಾಳಿ ನಡೆಸಿ, 4,200 ರೂ. ನಗದು ಸೇರಿದಂತೆ ಎಂಟು ಜನರನ್ನು ಬಂಧಸಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ  ಸರ್ಕಾರಿ ಕಟ್ಟಡದಲ್ಲಿ ಫಂಡ್ ರೀತಿಯಲ್ಲಿ ಜೂಜಾಟ: ಬ್ಯಾಂಕ್ ನೌಕರ, ಉದ್ಯಮಿಗಳು ಸೇರಿದಂತೆ ಒಂಬತ್ತು ಜನರ ಬಂಧನ

ನೀಲಗುಂದ ಗ್ರಾಮದ ಬಸಪ್ಪ ಚನ್ನಪ್ಪ ಅರಳಿ, ಶಿವಾನಂದ ಶಿವಪ್ಪ ನಾಯ್ಕರ, ರಾಮಪ್ಪ ಯಲ್ಲಪ್ಪ ಗೋಕಾವಿ, ಸೋಮರೆಡ್ಡಿ ಮಲ್ಲಪ್ಪ ರಾಮರೆಡ್ಡಿ, ರಮೇಶಪ್ಪ ಹನಮಪ್ಪ ಕಮ್ಮಾರ, ದ್ಯಾಮಣ್ಣ ಪಕ್ಕೀರೇಶ ಚಿಕ್ಕಗಸಿ, ಬಸಪ್ಪ ಸೋಮಪ್ಪ ತಿರ್ಲಾಪೂರ ಹಾಗೂ ಈರಣ್ಣ ರಾಚಪ್ಪ ಅಂಗಡಿ ಎಂಬ ಎಂಟು ಜನರ ಮೇಲೆ ದೂರು ದಾಖಲಿಸಿಕೊಂಡಿರುವ
ಮುಳಗುಂದ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಇನ್ಸ್‌ಪೆಕ್ಟರ್ ಸಿದ್ದಲಿಂಗಪ್ಪಗೌಡ ಪಾಟೀಲ್ ಡಿವೈಎಸ್ಪಿಯಾಗಿ ಬಡ್ತಿ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಗದಗನ ಹೆಸ್ಕಾಂ ಜಾಗೃತದಳದಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ದಲ್ಲಿದ್ದ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಡಿವೈಎಸ್ಪಿ ಆಗಿ ಬಡ್ತಿ ಹೊಂದಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯ ಸಿಪಿ(ಸಿವಿಲ್) ವೃಂದದ ಅಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವೇತನ ಡಿವೈಎಸ್ಪಿ ವೃಂದಕ್ಕೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಧಾರವಾಡ ಜಿಲ್ಲಾ ಸಿಇಎನ್ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವಿಜಯ ಬಿರಾದರ್ ಅವರಿಗೂ ಡಿವೈಎಸ್ಪಿ ಹುದ್ದೆಗೆ ಬಡ್ತಿ ಆಗಿದೆ. ಇವರಲ್ಲದೇ ಇನ್ನೂ 27 ಜನ ಇನ್ಸ್‌ಪೆಕ್ಟರ್ ಗಳನ್ನು ರಾಜ್ಯ ಸರ್ಕಾರ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸದ್ಯ ಡಿಜಿ ಹಾಗೂ ಐಜಿಪಿ ಅವರಲ್ಲಿ ವರದಿ ಮಾಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ ಸಿದ್ದಲಿಂಗಪ್ಪಗೌಡ ಪಾಟೀಲ್ ಹಾಗೂ ವಿಜಯ ಬಿರಾದಾರ ಅವರನ್ನು ಸಿಬ್ಬಂದಿ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ.

ಬಡ್ಡಿ ಹಣ ಕೊಡುವಂತೆ ಮಹಿಳೆಗೆ ಕಿರುಕುಳ; ನಾಗರಾಜ್ ಪೂಜಾರಿ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ಮಹಿಳೆ ಮನೆ ಅಡವಿಟ್ಟಿದ್ದನ್ನೇ ನೆಪ ಮಾಡಿಕೊಂಡ ಶಹಪೂರ ಪೇಟೆಯ ನಿವಾಸಿಯಾಗಿರುವ ಆರೋಪಿ ನಾಗರಾಜ್ ಅಂಬಸಾ ಪೂಜಾರಿ ಎಂಬ ವ್ಯಕ್ತಿ ಮಹಿಳೆಯೋರ್ವರಿಂದ ಕೊಟ್ಟ ಅಸಲು, ಅಸಲಿನ ಜೊತೆಗೆ ಬಡ್ಡಿ ಹಣ ಪಡೆದರೂ ಬಡ್ಡಿ ಹಣ ನೀಡುವಂತೆ ಮಹಿಳೆಗೆ ನಿತ್ಯ ಕಿರುಕುಳ ನೀಡುತ್ತಿರುವ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಖಾನತೋಟದ ನಿವಾಸಿ ಶಾರದಾ ಶಿವಪ್ಪ ನಾಯಕ ಎಂಬ ಮಹಿಳೆ ತನ್ನ ಮನೆಯನ್ನು ಆರೋಪಿ ನಾಗರಾಜ ಅಂಬಸಾ ಪೂಜಾರಿಗೆ 2008 ಜೂನ್ 23ರಲ್ಲಿ 60 ಸಾವಿರ ರೂ.ಗಳಿಗೆ ಅಡವಿಟ್ಟಿದ್ದಾರೆ. ಅಲ್ಲದೇ, ಆರೋಪಿ ನಾಗರಾಜನಿಗೆ 2010ರಲ್ಲಿ ಕಬ್ಜಾ ರಹಿತ ಖರೀದಿ ಕರಾರು ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಆದರೆ, ಆರೋಪಿಯು ಮಹಿಳೆ ಮನೆ ನೋಂದಣಿ ಮಾಡಿಕೊಟ್ಟ ಬಳಿಕ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಾ ಬರುತ್ತಿದ್ದಾನೆ.

2013-14 ರವರೆಗಿನ ಅಸಲು, ಬಡ್ಡಿ ಹಣ, ಮೂರು ಜೊತೆ ಬಂಗಾರದ ಕಿವಿಯೋಲೆ ಹಾಗೂ 2,90,000 ರೂ.ಗಳನ್ನು ನಾಗರಾಜ್ ಇನ್ನೂ ಬಡ್ಡಿ ಹಣ ಕೊಡಬೇಕು ಎಂದು ಪೀಡಿಸುತ್ತಿದ್ದಾನೆ. ಅಲ್ಲದೇ, ಮನೆ ನೋಂದಣಿ ರದ್ಧತಿಯ ಬಾಂಡ್ ಪೇಪರ್, ಒಡವೆಗಳನ್ನು ಕೊಡದೇ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ನೊಂದ ಮಹಿಳೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳ ಒತ್ತಡ; ಡಿಪೋ ಬಳಿಯೇ ವಿಷಸೇವಿಸಿ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ

ವಿಜಯಸಾಕ್ಷಿ ಸುದ್ದಿ, ಗದಗ

ಆರನೇ ವೇತನ ಆಯೋಗ ಜಾರಿ ಮಾಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕಳೆದೆರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ.

ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳಿಗೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಕೆಲವು ಕಡೆ ಕೆಲವರಿಗೆ ನೊಟಿಸ್ ಸಹಿತ ನೀಡಿದೆ.

ಈ ಮಧ್ಯೆ ಸಾರಿಗೆ ಸಂಸ್ಥೆಯ ನೌಕರನೊಬ್ಬನಿಗೆ ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಒತ್ತಡ ಹಾಕಿದ್ದಕ್ಕೆ ಮನನೊಂದು ಚಾಲಕ/ನಿರ್ವಾಹಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ(ಏ.೮) ಗದಗನಲ್ಲಿ ನಡೆದಿದೆ.

ಜಿಲ್ಲೆಯ ಕದಡಿ ಗ್ರಾಮದ 48 ವರ್ಷದ ವಸಂತ ರಾಮದುರ್ಗ ಎಂಬ ಚಾಲಕ/ ನಿರ್ವಾಹಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಗದಗ ಘಟಕ ಸಿಬ್ಬಂದಿ ಜೊತೆಗೆ ಜಿಲ್ಲೆ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿದ್ದು, ನಗರದ ಹುಡ್ಕೋ ಕಾಲನಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಸಂತ ಅವರಿಗೆ ಹಿರಿಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಿಂದ‌ ಮೇಲೆ ಒತ್ತಡ ಹೇರಿದ್ದಾರೆ. ಇಷ್ಟಕ್ಕೆ ಮನನೊಂದ ಸಿಬ್ಬಂದಿ ಡಿಪೋ ಬಳಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವಸಂತ ಸದ್ಯ ಮಾತನಾಡದ ಸ್ಥಿತಿಯಲ್ಲಿರುವ ಅವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮುಷ್ಕರದ ಎರಡನೇ ದಿನವಾದ ಗುರುವಾರದಂದು ಕೆಲವು ಬಸ್’ಗಳು ಸಂಚಾರ ನಡೆಸಿವೆ. ಇದರಿಂದ ಆರನೇ ವೇತನ ಆಯೋಗ ಜಾರಿಯಾಗುವುದಿಲ್ಲ. ನಮ್ಮ ಬೇಡಿಕೆಗಳು ಇಡೇರುವುದಿಲ್ಲ. ಪುನಃ ಸಾಲದ ಸುಳಿಗೆ ಸಿಲುಕುವುದು ತಪ್ಪುವುದಿಲ್ಲ. ಹೀಗಾಗಿ ಹೋರಾಟ ಮಾಡಿಯೂ ವ್ಯರ್ಥವಾಯಿತಲ್ಲ ಅಂತಾ ಮನನೊಂದಿದ್ದಾರೆ ಎಂದು ವಸಂತ ಅವರ ಮಗ ಬಸವರಾಜ್ ತಿಳಿಸಿದ್ದಾರೆ.

ಇನ್ನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಸಹದ್ಯೋಗಿಗಳಿಗೆ ಹೇಳಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.

ಯುಗಾದಿ ನಿಮಿತ್ತ ನೈರುತ್ಯ ರೈಲ್ವೆಯಿಂದ 18 ವಿಶೇಷ ರೈಲುಗಳ ಓಡಾಟ

ವಿಜಯಸಾಕ್ಷಿ ಸುದ್ದಿ ಗದಗ
ಯುಗಾದಿ ಹಬ್ಬದ ಅಂಗವಾಗಿ ನೈರುತ್ಯ ರೈಲ್ವೆ ವಿಭಾಗ ಒಟ್ಟು 18 ವಿಶೇಷ ರೈಲ್ವೆ ಗಳ ಓಡಾಟವನ್ನು ಪ್ರಕಟಿಸಿದೆ.

ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದಾಗಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಮರಳಿಸಿದ ಗದಗ ಪೊಲೀಸರು

0

ವಿಜಯಸಾಕ್ಷಿ ಸುದ್ದಿ, ಗದಗ
ಅಜಾಗರೂಕತೆಯಿಂದ ಮೊಬೈಲ್ ಫೋನ್ ಗಳನ್ನು ಕಳೆದುಕೊಂಡಿದ್ದವರಿಗೆ, ಗದಗ ನಗರ ಠಾಣೆ ಪೊಲೀಸರು ಅವರ ಫೋನ್ ಗಳನ್ನು ಹುಡುಕಿ ಮರಳಿಸಿದ್ದಾರೆ.
ಗದಗ ಶಹರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಂದಾಜು 3 ಲಕ್ಷ 25 ಸಾವಿರ ಮೌಲ್ಯದ, ಒಟ್ಟು 23 ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಶ್ರಮ ವಹಿಸಿ ಪತ್ತೆ ಹಚ್ಚಿ ಮಾಲಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರದಿದ್ದಾರೆ.

ತಮ್ಮ‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಮತ್ತು ಕಳೆದುಕೊಂಡಿದ್ದ ಪ್ರಕರಣಗಳ ಬೆನ್ನತ್ತಿದ ಪೊಲೀಸರು, ಇಂದು ಅವುಗಳ ಮಾಲೀಕರಿಗೆ ಕಳೆದುಕೊಂಡಿದ್ದ ಮೊಬೈಲ್ ಗಳನ್ನು ಮರಳಿಸಿದ್ದಾರೆ.
ಗದಗ ಉಪ-ವಿಭಾಗದ ಡಿವೈಎಸ್ಪಿ ಶಿವಾನಂದ ಅವರ ನೇತೃತ್ವದಲ್ಲಿ, ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ ವಿ ಸಾಲಿಮಠ ಹಾಗೂ ಅಪರಾಧ ವಿಭಾಗದ ಪಿಎಸ್ ಐ ಶ್ರೀಮತಿ ಜಿ ಟಿ ಜಕ್ಕಲಿ ಇವರ ಮಾರ್ಗದರ್ಶನ ದಲ್ಲಿ ಸಿಬ್ಬಂದಿಗಳಾದ ವಿ ಎಸ್ ಶೆಟ್ಟಣ್ಣವರ, ಬಿ ಜಿ ಹೊರಕೇರಿ, ಎಸ್ ಎ ಗುಡ್ಡಿಮಠ, ಪಿ ಎಸ್ ಕಲ್ಲೂರ, ಹನುಮಂತ ಯಡಿಯಾಪೂರ, ಐ ಟಿ ರವಳೋಜಿ, ಡಿಪಿಓ ಗದಗ ಎಆರ್ ಎಸ್ಐ ಗುರು ಬೂದಿಹಾಳ ಇವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಗರ ಠಾಣೆ ಪೊಲೀಸರ ಈ ಕಾರ್ಯಕ್ಕೆ ಮೊಬೈಲ್ ಗಳನ್ನು ಮರಳಿ ಪಡೆದವರೂ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎರಡನೇ ದಿನವೂ ಮುಂದುವರಿದ ಮುಷ್ಕರ; ಬಸ್ ನಿಲ್ದಾಣದಲ್ಲಿ ರೋಗಿ ಪರದಾಟ

0

ವಿಜಯಸಾಕ್ಷಿ ಸುದ್ದಿ, ಗದಗ

ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಹೋರಾಟ ನಡೆಸುತ್ತಿದ್ದಾರೆ.

ಬೆಳಿಗ್ಗೆಯಿಂದ ಯಾವೊಂದು ಸರ್ಕಾರಿ ಬಸ್ ಗಳು ರಸ್ತೆಗಿಳಿದಿಲ್ಲ. ಬಸ್ ಗಳಿಲ್ಲದೇ ನಗರದ ಬಸ್ ನಿಲ್ದಾಣಗಳು ಬಣಗುಡುತ್ತಿವೆ. ಪ್ರಯಾಣಿಕರು, ರೋಗಿಗಳು ಊರಿಗೆ ಹೋಗಲು ಪರದಾಡುತ್ತಿದ್ದಾರೆ.

ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಗೆ ಚಿಕಿತ್ಸೆಗಾಗಿ ತೆರಳಿದ್ದ ಕೊಪ್ಪಳ ಮೂಲದ ಮಂಜುನಾಥ್ ಎಂಬ ವ್ಯಕ್ತಿ ಇಂದು ಬೆಳಿಗ್ಗೆ ಕ್ರೂಸರ್ ಮೂಲಕ ಗದುಗಿಗೆ ಬಂದಿದ್ದಾನೆ. ಆದರೆ, ಮುಂದೆ ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾನೆ.

ತಲೆ ನೋವು ಹಾಗೂ ಜ್ವರದಿಂದ ಬಳಲುತ್ತಿರುವ ಮಂಜುನಾಥ್ ಕಳೆದ ಎರಡ್ಮೂರು ಗಂಟೆಯಿಂದ ಬಸ್ ಗಾಗಿ ಕಾಯ್ದು ಬಳಿಕ ಆಟೋ ಮೂಲಕ ಹಳೆ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್ ಮೂಲಕ ಕೊಪ್ಪಳಕ್ಕೆ ತೆರಳಿದ.

ಸಾರಿಗೆ ಮುಷ್ಕರವೂ..!
ಯಾರಿಗೆ ನಷ್ಟವೂ..!!

ವಿಜಯಸಾಕ್ಷಿ ವಿಶೇಷ

ಒಂದು ಕಾಲದಲ್ಲಿ ‘ಭಾರತ್ ಬಂದ್’ ಎಂದರೆ ಜನಸಾಮಾನ್ಯರು ಬೆಚ್ಚಿ ಬೀಳುತ್ತಿದ್ದರು. ಒಂದು ದಿನದ ಬಂದ್‌ಗೇ ಸರಕಾರ ಹೆದರಿ ಕಂಗಾಲಾಗಿ ಬಿಡುತ್ತಿತ್ತು. ಬಂದ್‌ನಿಂದಾಗಿ ನಾಶ ನಷ್ಟಗಳಾದರೆ ಅದರ ದುಷ್ಪರಿಣಾಮವನ್ನು ಶ್ರೀಸಾಮಾನ್ಯನು ಅನುಭವಿಸಬೇಕಾಗುತ್ತದೆ. ಆತನ ಕೆಂಗಣ್ಣು ಸರಕಾರದ ಮೇಲೆ ಬೀಳುತ್ತದೆ. ಒಂದು ರೀತಿಯಲ್ಲಿ, ಜನಸಾಮಾನ್ಯರ ಬದುಕನ್ನು ಒತ್ತೆಯಿರಿಸಿಕೊಂಡು ಈ ಬಂದ್‌ಗಳು ನಡೆಯುತ್ತಿದ್ದವು. ಸರಕಾರವನ್ನು ಬೆದರಿಸಲು ಕಾರ್ಮಿಕ, ರೈತ ಸಂಘಟನೆಗಳು ಪ್ರಯೋಗಿಸುವ ಕಟ್ಟಕಡೆಯ ಅಸ್ತ್ರವಾಗಿತ್ತು ಈ ಬಂದ್. ಆದರೆ ಈಗ ಪರಿಸ್ಥಿತಿ ತಿರುವು ಮುರುವಾಗಿದೆ. ಜನಸಾಮಾನ್ಯರು ಒಂದೊಮ್ಮೆ ಪ್ರತಿಭಟನಾರ್ಥವಾಗಿ ನಡೆಸುತ್ತಿದ್ದ ಬಂದ್‌ನ್ನು ಸರಕಾರವೇ ಜನರ ಮೇಲೆ ಪ್ರಯೋಗಿಸುತ್ತಿದೆ. ಜೊತೆಗೆ ಈ ಬಂದ್‌ಗೆ ‘ಲಾಕ್‌ಡೌನ್’ ಎನ್ನುವ ಸುಂದರ ನಾಮಕರಣವನ್ನೂ ಮಾಡಿದೆ.

ಈ ಹಿಂದೆಲ್ಲ ಒಂದೆರಡು ದಿನ ಬಂದ್‌ಗಳು ನಡೆಯುತ್ತಿದ್ದರೆ, ಮೋದಿ ಸರಕಾರದ ನೇತೃತ್ವದಲ್ಲಿ ಎರಡು ತಿಂಗಳು ಭಾರತ ‘ಬಂದ್’ ಆಚರಿಸಿತು. ಲಾಕ್‌ಡೌನ್‌ನಿಂದ ದೇಶಕ್ಕಾಗಿರುವ ನಾಶ, ನಷ್ಟ, ಜನಸಾಮಾನ್ಯರ ಸಂಕಟಗಳು ಸರಕಾರವನ್ನು ಯಾವ ರೀತಿಯಲ್ಲೂ ತಾಕುತ್ತಿಲ್ಲ. ಲಾಕ್‌ಡೌನ್ ಎನ್ನುವುದು ಜನಸಾಮಾನ್ಯರಿಗಾಗಿ ನೀಡುತ್ತಿರುವ ಕೊಡುಗೆಯೇನೋ ಎನ್ನುವ ರೀತಿಯಲ್ಲಿ ಪದೇ ಪದೇ ‘ಲಾಕ್‌ಡೌನ್’ ಹೇರುವ ಬೆದರಿಕೆಯನ್ನು ಸರಕಾರವೇ ಒಡ್ಡುತ್ತಿದೆ. ಇಂತಹ ಸಂದರ್ಭದಲ್ಲಿ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ‘ಬಂದ್’ ಘೋಷಿಸಿದರೆ ಅದನ್ನು ಸರಕಾರ ಗಂಭೀರವಾಗಿ ಸ್ವೀಕರಿಸುತ್ತದೆಯೆ?. ಈ ಹಿಂದೆ ಎರಡು ಬಾರಿ ರೈತ ಸಂಘಟನೆಗಳು ಭಾರತ್ ಬಂದ್ ನಡೆಸಿದಾಗಲೂ ಇದೇ ನಡೆಯಿತು. ಈಗಾಗಲೇ ದೇಶ ಅಘೋಷಿತ ಬಂದ್ ಆಚರಿಸುತ್ತಿರುವುದರಿಂದ ರೈತ ಸಂಘಗಳ ಅಧಿಕೃತ ಬಂದ್‌ಗಳನ್ನು ಯಾರೂ ಗಮನಿಸಲೇ ಇಲ್ಲ. ಇವೆಲ್ಲದರ ನಡುವೆ, ಗಾಯಗಳ ಮೇಲೆ ಬರೆ ಎಳೆಯುವಂತೆ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಲಾಕ್‌ಡೌನ್‌ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಮಧ್ಯಮವರ್ಗ, ಈ ಸಾರಿಗೆ ಮುಷ್ಕರದಿಂದಾಗಿ ಮತ್ತೆ ಹೊಸ ಬಗೆಯ ಲಾಕ್‌ಡೌನ್‌ಗೆ ಸಿಲುಕಿಕೊಂಡಂತಾಗಿದೆ. ಮುಷ್ಕರದ ಪರಿಣಾಮವಾಗಿ ರಾಜ್ಯದೆಲ್ಲೆಡೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲು ಮತ್ತು ಖಾಸಗಿ ವಾಹನಗಳಲ್ಲಿ ಹೆಚ್ಚಿದ ಒತ್ತಡ ಸುರಕ್ಷಿತ ಅಂತರವನ್ನು ನಗೆಪಾಟಲಿಗೀಡು ಮಾಡಿದೆ. ಕೊರೋನಾ ಕುರಿತ ಸರಕಾರದ ಎಲ್ಲಾ ಮುಂಜಾಗ್ರತೆಗಳನ್ನು ಈ ಮುಷ್ಕರ ವಿಫಲಗೊಳಿಸಿದೆ.

ಮುಷ್ಕರದ ಬಗ್ಗೆ ಸರಕಾರ ತಳೆದಿರುವ ಬಿಗಿ ನಿಲುವನ್ನು ಗಮನಿಸಿದರೆ ಈ ಸ್ಥಿತಿ ಇನ್ನೂ ಎರಡು-ಮೂರು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಗಳು ಕಾಣುತ್ತಿವೆ. ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಸರಕಾರ ಪರಿಗಣಿಸಿದೆಯಾದರೂ, ಅತಿ ಮುಖ್ಯ ಬೇಡಿಕೆಯಾಗಿರುವ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಅವರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎನ್ನುವುದು ಇನ್ನೂ ನೆನಗುದಿಯಲ್ಲಿದೆ. ಸದ್ಯಕ್ಕಂತೂ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಸರಕಾರದ ಬಳಿಯೂ ಸಕಾರಣಗಳಿವೆ. ರಾಜ್ಯ ಮಾತ್ರವಲ್ಲ, ಇಡೀ ದೇಶವೇ ಕೊರೋನನಂತರ ಆರ್ಥಿಕವಾಗಿ ಕುಸಿದು ಕೂತಿದೆ. ಪೆಟ್ರೋಲ್ ಬೆಲೆಯೇರಿಕೆ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ರಾಜ್ಯದ ಸ್ಥಿತಿ ಇನ್ನಷ್ಟು ದಯನೀಯವಾಗಿದೆ. ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಪರಿಹಾರವನ್ನು ನೀಡಲು ಕೇಂದ್ರ ಸತಾಯಿಸುತ್ತಿದೆ. ನೀಡಬೇಕಾದ ಅನುದಾನಗಳನ್ನೂ ಬಾಕಿ ಉಳಿಸಿದೆ.

ಕೇಂದ್ರಕ್ಕೆ ಒತ್ತಡ ಹೇರಿ, ರಾಜ್ಯದ ಜನರ ತೆರಿಗೆ ಹಣವನ್ನು ವಸೂಲಿ ಮಾಡಿಕೊಂಡು ಬರುವ ವ್ಯಕ್ತಿತ್ವ ಇರುವ ಒಬ್ಬನೇ ಒಬ್ಬ ಸಂಸದ ರಾಜ್ಯದಲ್ಲಿ ಇಲ್ಲ. ರಾಜ್ಯ ಬೊಕ್ಕಸ ಅಕ್ಷರಶಃ ಖಾಲಿಯಾಗಿದೆ. ಇಂತಹ ಸಂದರ್ಭದಲ್ಲಿ ಸಹಸ್ರಾರು ಕೋಟಿ ರೂಪಾಯಿ ಅಗತ್ಯಬೀಳುವ, ಬೇಡಿಕೆಯೊಂದನ್ನು ಮುಂದಿಟ್ಟು ಸಾರಿಗೆ ಕಾರ್ಮಿಕರು ಮುಷ್ಕರ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ತಲೆಯೆತ್ತುತ್ತದೆ. ಆದರೆ ಇಂತಹದೊಂದು ಬೇಡಿಕೆ ತಲೆಯೆತ್ತಲು ಪರೋಕ್ಷ ಕಾರಣ ನಮ್ಮ ಸರಕಾರವೇ ಆಗಿದೆ. ತನ್ನ ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳುವ ಸರಕಾರ, ಮಗದೊಂದೆಡೆ ತನ್ನ ರಾಜಕೀಯ ದುರುದ್ದೇಶಗಳಿಗಾಗಿ ಜನರ ತೆರಿಗೆಯ ಹಣವನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಪಡಿಸುತ್ತಿದೆ. ಯಾವುದೇ ಬೇಡಿಕೆಯಿಲ್ಲದೇ ಇದ್ದರೂ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ, ಮಂಡಳಿಗಳನ್ನು ರಚಿಸಿ ಅವುಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತು. ಈ ಹಣ ಎಲ್ಲಿಂತ ಬಂತು? ಎಂದು ಸಾರಿಗೆ ಕಾರ್ಮಿಕರು ಕೇಳುತ್ತಿದ್ದಾರೆ. ಈ ಮೂರು ಜಾತಿಗಳು ಯಾವುದೇ ದುರ್ಬಲ ಸಮುದಾಯಕ್ಕೆ ಸೇರಿಲ್ಲ.

ರಾಜಕೀಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ ಸಮರ್ಥವಾಗಿ ಪ್ರಾತಿನಿಧ್ಯಗಳನ್ನು ಈ ಜಾತಿಗಳು ಹೊಂದಿವೆ. ಹೀಗಿದ್ದರೂ, ಇವರಿಗಾಗಿ ಪ್ರತ್ಯೇಕ ನಿಗಮ, ಮಂಡಳಿ, ಪ್ರಾಧಿಕಾರವನ್ನು ರಚಿಸುವುದಕ್ಕೆ ಇರುವ ಕಾರಣಗಳೇನು? ಸಾರಿಗೆ ನೌಕರರ ಬೇಡಿಕೆ ಈಡೇರಿಸಿದ್ದೇ ಆಗಿದ್ದರೆ, ಆ ಸಂಸ್ಥೆಯೊಳಗಿರುವ ಎಲ್ಲ ಜಾತಿ, ಧರ್ಮಗಳ ಜನರಿಗೂ ಸವಲತ್ತು ಹಂಚಿ ಹೋಗುತ್ತಿತ್ತು. ಬೀದಿಯಲ್ಲಿ ಅತ್ತು ಕರೆಯುವ ಮಕ್ಕಳನ್ನು ಬೀದಿಯಲ್ಲೇ ಬಿಟ್ಟು, ಸುಖದ ಸುಪ್ಪತ್ತಿಗೆಯ ತೊಟ್ಟಿಲಲ್ಲಿ ನಿದ್ರಿಸುತ್ತಿರುವ ಮಕ್ಕಳನ್ನು ಎಚ್ಚರಿಸಿ ಅವುಗಳಿಗೆ ಹಾಲುಣಿಸುವ ಸರಕಾರದ ನೀತಿಗಳೇ ಕಾರ್ಮಿಕರನ್ನು ಕೆರಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.

ಸರಕಾರ ಮೊತ್ತ ಮೊದಲು ರಾಜಕೀಯ ದುರುದ್ದೇಶಗಳನ್ನು ಇಟ್ಟುಕೊಂಡು ಸ್ಥಾಪಿಸಿರುವ ಜಾತಿ ಅಭಿವೃದ್ಧಿಗಾಗಿ ರಚಿಸಿದ ನಿಗಮ, ಮಂಡಳಿಗಳನ್ನು ಹಿಂಪಡೆದು, ಅದಕ್ಕಾಗಿ ಮೀಸಲಿಟ್ಟ ಹಣವನ್ನು ಈ ಕಾರ್ಮಿಕರಿಗಾಗಿ ಉಪಯೋಗಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ‘ಗೋಶಾಲೆಗಳು’ ಎಂಬ ಅನುಪಯುಕ್ತ ಯೋಜನೆಗಾಗಿ ರಾಜ್ಯ ಸರಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿಯನ್ನು ವ್ಯಯಿಸುತ್ತಿವೆ. ಉದ್ಯಮ ನಡೆಸುವುದು ಸರಕಾರದ ಕೆಲಸವಲ್ಲ ಎಂದು ಪ್ರಧಾನಿ ಒಂದೆಡೆ ಹೇಳಿದ್ದಾರೆ. ಹಾಗಾದರೆ, ಅನುಪಯುಕ್ತ ಗೋವುಗಳನ್ನು ಸಾಕುವುದು ಸರಕಾರದ ಕೆಲಸವೇ ಎಂದು ರೈತರು ಕೇಳುತ್ತಿದ್ದಾರೆ.

ಈ ಗೋಶಾಲೆಗಳು ರಚನೆಯಾಗುವ ಮೊದಲು ಗೋವುಗಳ ಮಾರಾಟದ ಹಕ್ಕುಗಳನ್ನು ರೈತರೇ ಹೊಂದಿದ್ದರು. ಅದರಿಂದ ಅವರಿಗೆ ಆರ್ಥಿಕವಾಗಿಯೂ ಲಾಭವಾಗುತ್ತಿತ್ತು. ಜೊತೆಗೆ ಸರಕಾರಕ್ಕೂ ಅವನ್ನು ಸಾಕುವ ಹೊಣೆಗಾರಿಕೆಗಳು ಇರಲಿಲ್ಲ. ಇದೀಗ ಸರಕಾರ ಗೋವು ಮಾರಾಟದ ಮೇಲೆ ನಿಯಂತ್ರಣ ಹೇರುವ ಮೂಲಕ, ಅನಗತ್ಯವಾಗಿ ಅನುಪಯುಕ್ತ ಗೋವುಗಳ ಹೊಣೆಯನ್ನು ಮೈಮೇಲೆ ಎಳೆದುಕೊಂಡಿದೆ. ಇದರಿಂದಾಗಿ ರೈತರ ಆದಾಯವನ್ನು ಸರಕಾರ ಕಿತ್ತುಕೊಂಡಿದೆ. ಇನ್ನೊಂದೆಡೆ, ಜನ ಸಾಮಾನ್ಯರ ತೆರಿಗೆಯನ್ನು ಈ ಗೋಶಾಲೆಗಳೆಂಬ ಪ್ರಹಸನಕ್ಕೆ ಚೆಲ್ಲುತ್ತಿದೆ. ಆದರೆ ಇದರಿಂದ ಸರಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಗೋಶಾಲೆಗಳಿಗಾಗಿ ಬಿಡುಗಡೆ ಮಾಡಿರುವ ಹಣವನ್ನು ಕಪಟ ಸ್ವಾಮೀಜಿಗಳು, ನಕಲಿ ಗೋರಕ್ಷಕರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಇಂತಹ ಎಲ್ಲ ಗೋಶಾಲೆಗಳನ್ನು ಕಿತ್ತು ಹಾಕಿ, ಅವುಗಳಿಗಾಗಿ ಮೀಸಲಿಟ್ಟ ಹಣವನ್ನು ತಮ್ಮ ಹಕ್ಕುಗಳನ್ನು ಕೇಳುತ್ತಿರುವ ಕಾರ್ಮಿಕರಿಗಾಗಿ ವ್ಯಯಿಸುವ ಅವಕಾಶ ಸರಕಾರಕ್ಕಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳೂ ಜನಸಾಮಾನ್ಯರ ಮೇಲೆ ಮುಷ್ಕರ ಬೀರುತ್ತಿರುವ ಪರಿಣಾಮವನ್ನು ಗಮನಿಸಬೇಕಾಗಿದೆ. ಸಾರಿಗೆ ಮುಷ್ಕರದ ಲಾಭವನ್ನು ಖಾಸಗಿ ಬಸ್ ಮಾಲಕರು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನೂ ಗಮನಿಸಬೇಕು. ಈಗಾಗಲೇ ಸರಕಾರ ಎಲ್ಲವನ್ನು ಖಾಸಗಿಯವರಿಗೆ ಒಪ್ಪಿಸಿ ಕೈತೊಳೆದುಕೊಳ್ಳಲು ಯತ್ನಿಸುತ್ತಿರುವಾಗ, ಕೊರೋನಾದಂತಹ ಸಂಕಟದ ಕಾಲದಲ್ಲಿ ಸಾರಿಗೆ ನೌಕರರ ಬಿಗಿ ನಿಲುವು ಅವರಿಗೇ ತಿರುಗುಬಾಣವಾಗಬಹುದು. ಮುಷ್ಕರಕ್ಕೆ ಜನರ ಸಹಕಾರವೂ ಅತ್ಯಗತ್ಯ. ಜನರ ಅನುಕಂಪವನ್ನು ಕಳೆದುಕೊಂಡ ಹೋರಾಟಗಳು ವಿಫಲವಾದದ್ದೇ ಹೆಚ್ಚು. ಆದುದರಿಂದ, ಹೋರಾಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಈ ಸಂಕಟ ಕಾಲದಲ್ಲಿ ಸರಕಾರ ಮತ್ತು ಕಾರ್ಮಿಕ ಸಂಘಟನೆಗಳು ಕೊಡುಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗಿದೆ..!

ಕೆ.ಶಿವು.ಲಕ್ಕಣ್ಣವರ

ಸ್ಟೈಲಿಶ್‌ ಸ್ಟಾರ್‌ ಅಭಿಮಾನಿಗಳಿಗೆ ಇಂದು ಡಬಲ್‌ ಧಮಾಕಾ…

ವಿಜಯಸಾಕ್ಷಿ ಸಿನಿಮಾ ವಿಶೇಷ
ಏಪ್ರಿಲ್‌ 8ರಂದು ಅಲ್ಲು ಅರ್ಜುನ್‌ ಬರ್ತ್‌ಡೇ. ಇದೆ ವೇಳೆ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌ ಸೇರಿದಂತೆ ಸಿನಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್‌ ಇಂಡಿಯಾ ಮೂವಿ ʻಪುಷ್ಪʼ ಟೀಸರ್‌ ರಿಲೀಸ್‌ ಆಗಿದೆ.
ಮೈತ್ರಿ ಮೂವೀಸ್‌ ಬ್ಯಾನರ್‌ನಲ್ಲಿ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು ಸುಕುಮಾರ್‌ ನಿರ್ದೇಶನದ ʻಪುಷ್ಪʼ ಸಿನಿಮಾ 2021 ರ ಆಗಸ್ಟ್‌ 13 ರಂದು ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ದಕ್ಷಿಣದ ಪ್ರತಿಭಾವಂತ ನಟರಾದ ಫಹದ್‌ ಫಸಲ್‌, ಧನಂಜಯ ಸಹ ಅಭಿನಯಿಸಿದ್ದಾರೆ.
ಅಲ್ಲು ಅರ್ಜುನ್‌ ಮತ್ತು ಸುಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದಿದ್ದ ಆರ್ಯ, ಆರ್ಯ-2 ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ಇದೀಗ ಇದೇ ಕಾಂಬಿನೇಶನ್‌ನಲ್ಲಿ ವಿಭಿನ್ನ ಕಥಾಹಂದರದ ಜೊತೆ ಬರ್ತಿರೋ ʻಪುಷ್ಪʼ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

error: Content is protected !!