Home Blog Page 4

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ – ನಾಳೆ ಗರ್ಭಗುಡಿ ಬಂದ್

0

ಹಾಸನ: ವರ್ಷದ ಮಹತ್ವಪೂರ್ಣ ಹಾಸನಾಂಬೆ ತಾಯಿ ದರ್ಶನಕ್ಕೆ ಇಂದು (ಬುಧವಾರ) ವಿಧ್ಯುಕ್ತ ತೆರೆ ಬಿದ್ದಿದ್ದು, ಭಕ್ತರು ಇಂದು ಮುಂಜಾನೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

14 ದಿನಗಳ ಸಾರ್ವಜನಿಕ ದರ್ಶನ ಅವಧಿಯಲ್ಲಿ ಈಗಾಗಲೇ 26 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಧ್ರುವ ಸರ್ಜಾ, ಹರ್ಷ, ನಟಿ ಮಿಲನ ನಾಗರಾಜ್ ಸೇರಿದಂತೆ ಹಲವರು ಇಂದು ದರ್ಶನ ಪಡೆದಿದ್ದಾರೆ. ಸಂಜೆ 7 ರಿಂದ ರಾತ್ರಿ 12 ಗಂಟೆಯವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಜಾತ್ರಾ ಮಹೋತ್ಸವದ ಹದಿಮೂರು ದಿನಗಳಲ್ಲಿ 1000 ರೂ., 300 ರೂ. ವಿಶೇಷ ಟಿಕೆಟ್ ಮಾರಾಟ ಮತ್ತು ಲಡ್ಡು ಮಾರಾಟದಿಂದ ದೇವಾಲಯಕ್ಕೆ ಒಟ್ಟು 22 ಕೋಟಿ ರೂ. ಆದಾಯ ಬಂದಿದೆ. ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸ್ಥಳೀಯ ಅಧಿಕಾರಿಗಳು ತಾಯಿ ಸೇವೆಯಲ್ಲಿ ಭಾಗಿಯಾಗಿದ್ದರು.

ನಾಳೆ ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.

ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್‌ರೇಪ್ ಕೇಸ್: ಮೂವರು ಅರೆಸ್ಟ್!

0

ಬೆಂಗಳೂರು:- ಗಂಗಗೊಂಡನಹಳ್ಳಿ ನಿವಾಸದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾದಕನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್, ಗ್ಲೇನ್, ಸಯೋಗ ಬಂಧಿತರು. ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯಲ್ಲಿ, ಕೃತ್ಯವನ್ನು ಪೂರ್ವ ಯೋಜಿತವಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಮನೆಯಲ್ಲಿದ್ದ ಇಬ್ಬರು ಪುರುಷರನ್ನು ಹಲ್ಲೆ ಮಾಡಿ ಕಟ್ಟಿಹಾಕಿ, ನಂತರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಮಹಿಳೆಯ ಮೊಬೈಲ್ ಮತ್ತು ₹50,000 ನಗದು ದೋಚಿದ್ದಾರೆ.

ಕೂಡಲೇ ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೋಲೀಸರು ಇದೀಗ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ.

WPL 2026: ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ದಿನಾಂಕ ಫಿಕ್ಸ್!

0

ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಆವೃತ್ತಿಗೆ ಸಿದ್ಧತೆಗಳು ಜೋರಾಗಿವೆ. 2026ರ ಸೀಸನ್‌ಗೆ ಸಂಬಂಧಿಸಿದ ಮೆಗಾ ಹರಾಜು ಮುಂದಿನ ತಿಂಗಳು ನವೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಮೆಗಾ ಹರಾಜು ಪ್ರಕ್ರಿಯೆ ಐಪಿಎಲ್ ಮಾದರಿಯಲ್ಲಿಯೇ ನಡೆಯಲಿದ್ದು, ಇದು ಮಹಿಳಾ ಲೀಗ್‌ನ ನಾಲ್ಕನೇ ಆವೃತ್ತಿಗೆ ಪ್ರಮುಖ ಅಂಕಣವಾಗಲಿದೆ. ಹರಾಜಿನ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ ನವೆಂಬರ್ 26 ಅಥವಾ 27ರಂದು ಹರಾಜು ನಡೆಯುವ ಸಾಧ್ಯತೆಯಿದೆ. ಮೊದಲು ನವೆಂಬರ್ 26ರಿಂದ 29ರವರೆಗೆ ದಿನಾಂಕ ನಿಗದಿ ಮಾಡಲಾಗಿದ್ದರೂ, ಈಗ ವೇಳಾಪಟ್ಟಿಯನ್ನು ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಹರಾಜು ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಮೆಗಾ ಹರಾಜು ದೆಹಲಿಯಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಹೊಸ ತಂಡ ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದರೂ, ಅದು ನಡೆಯದಂತೆ ಕಾಣುತ್ತಿದೆ. ಹೀಗಾಗಿ, ನಾಲ್ಕನೇ ಸೀಸನ್‌ನಲ್ಲಿಯೂ ಐದು ತಂಡಗಳೇ ಸ್ಪರ್ಧಿಸಲಿವೆ. ಮೆಗಾ ಹರಾಜಿನಲ್ಲಿ ಸುಮಾರು 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ನವೆಂಬರ್ 5ರೊಳಗೆ ಉಳಿಸಿಕೊಳ್ಳುವ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ರಕ್ತದಲ್ಲಿ ಚಿತ್ರ ಬಿಡಿಸಿದ ಅಭಿಮಾನಿ ಮೇಲೆ ಪ್ರೇಮ್ ಗರಂ: ಈ ರೀತಿಯ ಪ್ರೀತಿ ಬೇಡ ಎಂದ ನಿರ್ದೇಶಕ!

0

ಕನ್ನಡದ ಜನಪ್ರಿಯ ನಿರ್ದೇಶಕ ಮತ್ತು ನಟ ಜೋಗಿ ಪ್ರೇಮ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಯೊಬ್ಬ ಅತಿಯಾದ ರೀತಿಯಲ್ಲಿ ಆಚರಿಸಿರುವ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅಭಿಮಾನಿಯೊಬ್ಬನು ತನ್ನ ರಕ್ತವನ್ನು ಇಂಕ್ ಆಗಿ ಬಳಸಿಕೊಂಡು, “ಹ್ಯಾಪಿ ಬರ್ತ್‌ಡೇ ಬಾಸ್” ಎಂದು ಬರೆದು ಚಿತ್ರ ಬಿಡಿಸಿಕೊಂಡಿದ್ದಾನೆ. ತನ್ನ ಪ್ರೀತಿಯ ನಿರ್ದೇಶಕನಿಗೆ ವಿಭಿನ್ನ ಉಡುಗೊರೆ ನೀಡಬೇಕೆಂಬ ಹುಮ್ಮಸ್ಸಿನಿಂದ ಈ ರೀತಿ ವಿಚಿತ್ರವಾಗಿ ನಡೆದುಕೊಂಡಿದ್ದಾನೆ.

ಎಸ್, ಅಕ್ಟೋಬರ್ 22ರಂದು ಜೋಗಿ ಪ್ರೇಮ್ ಹುಟ್ಟುಹಬ್ಬವಾಗಿದ್ದು, ಅದನ್ನು ಸ್ಮರಣೀಯಗೊಳಿಸಲು ಅಭಿಮಾನಿಯೊಬ್ಬ ತನ್ನದೇ ರಕ್ತದಲ್ಲಿ ಬರಹ ಬರೆದು ವಿಡಿಯೋ ರೂಪದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಆ ವೀಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ವಿಡಿಯೋ ನೋಡಿ ಬೇಸರಗೊಂಡ ಪ್ರೇಮ್ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. “ಮಕ್ಕಳೇ, ಇಂಥಹ ತಪ್ಪು ಮಾಡಬೇಡಿ. ಪ್ರೀತಿ ತೋರಿಸುವುದು ಒಳ್ಳೇದು, ಆದರೆ ಈ ರೀತಿ ಮಾಡಿದ್ರೆ ಅದು ಅಭಿಮಾನವಲ್ಲ, ಹಾನಿ.”ನಿಮ್ಮ ಪ್ರೀತಿಯನ್ನು ಹೀಗೆ ತೋರಿಸಬೇಡಿ. ರಕ್ತದಲ್ಲಿ ಬರೆಯೋದು, ನೋವು ತಗೊಳ್ಳೋದು ಯಾವುದಕ್ಕೂ ಅರ್ಥವಿಲ್ಲ. ನನಗೆ ಖುಷಿ ಕೊಡೋದಕ್ಕಿಂತ ನೋವು ಕೊಡುತ್ತದೆ ಎಂದರು.

ಇನ್ನೂ ನಿರ್ದೇಶಕ ಪ್ರೇಮ್ ಅವರ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. “ನಿಜವಾದ ಅಭಿಮಾನ ಅಂದರೆ ಕಲೆಯನ್ನು ಪ್ರೀತಿಸುವುದು, ರಕ್ತ ಸುರಿಸುವುದು ಅಲ್ಲ” ಎಂಬ ಸಂದೇಶ ನೀಡಿರುವ ಪ್ರೇಮ್ ಅವರ ಮಾತುಗಳಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ “ಅಡಿಕೆ” ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ: ಆರಗ ಜ್ಞಾನೇಂದ್ರ

0

ಶಿವಮೊಗ್ಗ: ಅಡಿಕೆ ಬೆಳೆ ಕುರಿತಾಗಿ ಕೇಂದ್ರ ಸರ್ಕಾರ ಮುಂದುವರಿಸುತ್ತಿರುವ ಅಧ್ಯಯನವನ್ನು ಹೊರತುಪಡಿಸಿ, ಅಡಿಕೆ ಬೆಲೆಯಲ್ಲಿ ಏರುವಿಕೆ ಕಾಣುತ್ತಿದ್ದಂತೆ, ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಸಾವಿರಾರು ವರ್ಷ ಇತಿಹಾಸವಿರುವ ಅಡಿಕೆ ಕುರಿತಂತೆ ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ. ಸಂಶೋಧನೆಯ ಫಲಿತಾಂಶ ಬರುವವರೆಗೆ ಇಂತಹ ತಪ್ಪು ಮಾಹಿತಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕು. ಅಡಿಕೆಯಿಂದ ಬದುಕು ನಡೆಸುವ ಲಕ್ಷಾಂತರ ಕುಟುಂಬಗಳ ಬದುಕು ಹಾನಿಗೊಳಗಾಗಬಾರದು” ಎಂದರು.

ಅವರ ಅಭಿಪ್ರಾಯದಲ್ಲಿ, ವಿಶ್ವಸಂಸ್ಥೆಯ ಒತ್ತಡಕ್ಕೆ ಮಣಿಯದೆ, ಕೇಂದ್ರ ಸರ್ಕಾರ ಸಂಶೋಧನೆಯ ಫಲಿತಾಂಶ ಬರುವವರೆಗೆ ಸಂಯಮದಿಂದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಿದೆ 200 ಕೋಟಿ ಅನುದಾನ!

0

ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲೆ ಎರಡನೇ ದೊಡ್ಡ ಪಾಲಿಕೆ. 82 ವಾರ್ಡ್‌ಗಳು ಇದ್ದು, ಸುಮಾರು 13 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಈ ಪಾಲಿಕೆ ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯವಾಗಿದೆ.

ಮೇಯರ್ ಜ್ಯೋತಿ ಪಾಟೀಲ್ ತಿಳಿಸಿದಂತೆ, ಪಾಲಿಕೆಗೆ ನಿವೃತ್ತರ ಪಿಂಚಣಿ, ಪೌರ ಕಾರ್ಮಿಕರ ಸಂಬಳ ಸೇರಿದಂತೆ ಹಲವು ಅನುದಾನಗಳನ್ನು ಇನ್ನೂ ಸರ್ಕಾರದಿಂದ ಪಡೆಯಬೇಕಿದೆ.

ಮೇಯರ್ ಕಳೆದ ತಿಂಗಳು ಸಿಎಂ ಧಾರವಾಡಕ್ಕೆ ಭೇಟಿ ನೀಡಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಿದ್ದರು, ಆದರೆ ಇನ್ನೂ ಯಾವುದೇ ಅನುದಾನ ಬಂದಿಲ್ಲ. ಹಳೆಯ ಬಾಕಿ ಅನುದಾನ ಸೇರಿಸಿದರೆ, ಪಾಲಿಕೆಗೆ ಸರಾಸರಿ 200 ಕೋಟಿ ರೂಪಾಯಿ ಅನುದಾನ ಬೇಕಾಗಿದೆ.

ಪಾಲಿಕೆ ಆಡಳಿತದಲ್ಲಿರುವ ಬಿಜೆಪಿ ಸದಸ್ಯರು ಸಿಎಂ ಭೇಟಿ ನೀಡಿ ಮನವಿ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ. ಸ್ಥಳೀಯ ಜನರು ಕೂಡ ಈ ಅನುದಾನ ಬಂದರೆ ನಗರ ಅಭಿವೃದ್ಧಿ, ಪಿಂಚಣಿ ಮತ್ತು ಸಂಬಳ ಪಾವತಿ ಸುಗಮವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ.

ನೋಂದಣಿ ಇಲ್ಲದ ಸಂಸ್ಥೆಗೆ ಹಣ ಎಲ್ಲಿಂದ ಬರುತ್ತದೆ?: RSS ವಿರುದ್ಧ ಬಿಕೆ ಹರಿಪ್ರಸಾದ್ ಕಿಡಿ

0

ಬೆಂಗಳೂರು:-ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಂಸದ ಬಿಕೆ ಹರಿಪ್ರಸಾದ್ ಆರ್‌ಎಸ್‌ಎಸ್‌ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಕೆಲವರು ಡಿಜೆ ಹಾಕಿ ಎಣ್ಣೆ ಹಚ್ಚಿ ಮಸೀದಿ ಮತ್ತು ಚರ್ಚ್ ಮುಂಭಾಗದಲ್ಲಿ ನೃತ್ಯ ಮಾಡುವುದನ್ನು ಉದಾಹರಣೆಯಾಗಿ ತಾಳಿಹಾಕಿದರು.

ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ನಡೆಸುವ ಪಂಥಸಂಚಲನದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿ, “ದೊಣ್ಣೆ ಹಿಡಿಯದೇ ಪಂಥಸಂಚಲನ ಮಾಡಬಹುದು. ನೋಂದಣಿ ಇಲ್ಲದ ಸಂಸ್ಥೆಗೆ ಹಣ ಎಲ್ಲಿಂದ ಬರುತ್ತದೆ?” ಎಂದು ಹೇಳಿದರು.

ಅವರು ಗುರು ದಕ್ಷಣೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಕೋಟಿ ಕೋಟಿ ರೂಪಾಯಿ ಖರ್ಚಾಗುತ್ತಿದ್ದು, ಈ ಹಣದ ಮೂಲ ಮತ್ತು ಬಳಸುವ ವಿಧಾನವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಿ ಕೇಳಿದ್ದಾರೆ. ಅವರು ಆರ್‌ಎಸ್‌ಎಸ್ ನೋಂದಣಿ ಹೊಂದಿದ ಸಂಸ್ಥೆಯಾಗಿದ್ದರೂ, ಹಣದ ಪ್ರಾಮಾಣಿಕತೆ, ಪಾವತಿ ಪ್ರಕ್ರಿಯೆ ಹಾಗೂ ಸಾರ್ವಜನಿಕವಾಗಿ ಖಾತರಿ ನೀಡುವ ಕೆಲಸಗಳಲ್ಲಿ ಗಂಭೀರ ವಿವಾದಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಹರಿಪ್ರಸಾದ್ ಅಭಿಪ್ರಾಯವಾಗಿ, ದೇಶಭಕ್ತಿ ಎಂದರೆ ತ್ರಿವರ್ಣ ಧ್ವಜ, ರಾಷ್ಟ್ರ ಗೀತೆ, ಸಂವಿಧಾನಕ್ಕೆ ಗೌರವ ಕೊಡಬೇಕು; ಆದರೆ ಕೆಲವು ಸಂಘಟನೆಗಳು ಈ ಮೌಲ್ಯಗಳಿಗೆ ಗೌರವ ಕೊಡುತ್ತಿಲ್ಲ ಎಂದು ಹೇಳಿದರು.

ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು!

0

ತಿರುವನಂತಪುರಂ: ಕೇರಳದ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಯ ಪ್ರಸಿದ್ಧ ಪವಿತ್ರ ಕ್ಷೇತ್ರದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇರುಮುಡಿ ಕಟ್ಟು ಹೊತ್ತು ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ದಾಖಲೆ ದಾಖಲಿಸಿದ್ದಾರೆ.

ಸೋಮವಾರದಿಂದ ಸಂಜೆ 6:20ರ ಸುಮಾರಿಗೆ ತಿರುವನಂತಪುರಂಕ್ಕೆ ಆಗಮಿಸಿದ ಮುರ್ಮು ಅವರಿಂದು ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್‌ಡೋರ್ ಸ್ಟೇಡಿಯಂಗೆ ಬಂದಿಳಿದರು,

ಈ ವೇಳೆ ಹೆಲಿಕಾಪ್ಟರ್ ಟೈರ್ ಕಾಂಕ್ರೀಟ್‌ನಲ್ಲಿ ಹೂತುಹೋಯಿತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ನ್ನು ತಳ್ಳಿ ಬದಿಸರಿಸಿದರು. ನಂತರ ಅಲ್ಲಿಂದ ಶಬರಿಮಲೆಗೆ ತೆರಳಿ ತುಲಾ ಮಾಸ ಪೂಜೆಯ ಕೊನೆಯ ದಿನದಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

ತಿಗಣೆ ಔಷಧಿ ವಾಸನೆ ತಾಳಲಾರದೆ ಪಿಜಿಯಲ್ಲಿ ಬಿಟೆಕ್ ವಿದ್ಯಾರ್ಥಿ ಸಾವು!

0

ಬೆಂಗಳೂರು: ತಿಗಣೆ ಔಷಧಿ ವಾಸನೆ ತಾಳಲಾರದೆ ಬಿಟೆಕ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಎಚ್ ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಿರುಪತಿ ಮೂಲದ ಪವನ್ ಮೃತ ದುರ್ಧೈವಿಯಾಗಿದ್ದು, ತಿಗಣೆ ಔಷಧಿ ವಾಸನೆ ತಾಳಲಾರದೆ ಅಸ್ವಸ್ಥಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕೂಡಲೇ ಯುವಕನನ್ನು ಖಾಸಗಿ ಆಸ್ಪತ್ರೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  ವಿದ್ಯಾರ್ಥಿ ಪವನ್​​ ವಾಸವಾಗಿದ್ದ ಪಿಜಿಯಲ್ಲಿ ತಿಗಣೆ ಔಷಧಿ ಸಿಂಪಡಣೆ ಮಾಡಿದ್ದರು. ಆ ಬಗ್ಗೆ ಮಾಹಿತಿ ಇಲ್ಲದೆ ಕೊಠಡಿಗೆ ತೆರಳಿದ್ದ.

ತಿಗಣೆ ಔಷಧದ ವಿಷಕಾರಿ ವಾಸನೆಯನ್ನು ಉಸಿರಾಡಿದ ಕಾರಣದಿಂದ ಪವನ್​​ ಅಸ್ವಸ್ಥನಾಗಿ ಕುಸಿದುಬಿದ್ದು, ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ‌ ಮೃತದೇಹ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬೆಂಗಳೂರಿನ ಹೆಚ್​​ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.

Yathindra Siddaramaiah: ಸಿಎಂ ಪುತ್ರನಿಂದಲೇ ಬಹಿರಂಗವಾಯ್ತು ಕರ್ನಾಟಕದ ಹೊಸ ʼನಾಯಕʼನ ಹೆಸರು!

0

ಬೆಳಗಾವಿ: ಯಾರ ಕುರ್ಚಿ ಅಲುಗಾಡಲಿದೆ? ಯಾವ ಸಚಿವರಿಗೆ ಕೊಕ್ ಕಾದಿದೆ? ಯಾವ ಹಿರಿ ತಲೆಯ ನಾಯಕರಿಗೆ ಎದುರಾಗುತ್ತೆ ಶಾಕ್? ನವೆಂಬರ್ ಕ್ರಾಂತಿಯೋ, ಇಲ್ಲ ಬ್ರಾಂತಿಯೋ? ನಾಯಕತ್ವ ಬದಲಾವಣೆ ಖಚಿತ ಅಂತಾ ಬಿಜೆಪಿಯವರು ನುಡಿಯುತ್ತಿರುವ ಭವಿಷ್ಯ ನಿಜವಾಗುತ್ತದೆಯಾ? ಈ ಎಲ್ಲಾ ಪ್ರಶ್ನೆಗಳು ಈಗ ಕರ್ನಾಟಕ ರಾಜಕೀಯದಲ್ಲಿ ಹೆಚ್ಚಾಗಿವೆ.

ಇದೆಲ್ಲರದ ಮಧ್ಯೆ ಯತೀಂದ್ರ ಸಿದ್ದರಾಮಯ್ಯ ಆಡಿರುವ ಮಾತು ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ.

ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕು. ಸತೀಶ್‌ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. ಇವತ್ತು ತಂದೆಯವರು ರಾಜಕೀಯ ಕೂನೆಗಾಲದಲ್ಲಿದ್ದಾರೆ. ಅವರ ರಾಜಕೀಯ ಕೂನೆ ಘಟ್ಟದಲ್ಲಿರುವ ಸಮಯದಲ್ಲಿ ಈ ರೀತಿ ವೈಚಾರಿಕವಾಗಿ ಪ್ರಗತಿಪರವಾಗಿ ಸಿದ್ದಾಂತ ಇಟ್ಟುಕೊಂಡಿರುವವರಿಗೆ ಮಾರ್ಗದರ್ಶಶನ, ನೇತೃತ್ವ ವಹಿಸಿಕೊಳ್ಳಲು ಒಬ್ಬ ನಾಯಕ ಬೇಕು. ಸತೀಶ್ ಜಾರಕಿಹೊಳಿಯವರು ಅಂತಹ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥರಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿ ನಮ್ಮನ್ನು ಮುನ್ನಡೆಸುವ ನಂಬಿಕೆ ಇದೆ. ತತ್ವ ಬದ್ಧತೆ ಇರುವ ನಾಯಕರು ಸಿಗುವುದು ಬಹಳ ಕಷ್ಟ. ಅಂತಹ ಕೆಲಸವನ್ನು ಜಾರಕಿಹೊಳಿ ಮಾಡುತ್ತಿದ್ದಾರೆ. ಆ ಕೆಲಸ ಇದೇ ರೀತಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
error: Content is protected !!