ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಗದಗ ಸೆಂಟ್ರಲ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ವೈದ್ಯರಾದ ಡಾ. ಸಿ.ಬಿ. ಹಿರೇಗೌಡರ, ಡಾ. ವಿ.ಸಿ. ಶಿರೋಳ, ಡಾ. ಶಿಲ್ಪಾ ಪವಾಡಶೆಟ್ಟರ, ಡಾ. ಪ್ರಕಾಶ ರಕ್ಕಸಗಿ, ಡಾ. ಮಧುಸೂದನ ಚಿಂತಾಮಣಿ, ಡಾ. ಕುಮಾರ ಕಂಠಿಮಠ ಅವರನ್ನು ಈ ಸಂದರ್ಭದಲ್ಲಿ ಸನ್ಮಾಸಲಾಯಿತು.
ಡಾ. ಸಿ.ಬಿ. ಹಿರೇಗೌಡರ ಮಾತನಾಡಿ, ರೋಟರಿ ಸೆಂಟ್ರಲ್ ಸಂಸ್ಥೆ ವೈದ್ಯರ ದಿನಾಚರಣೆಯ ನಿಮಿತ್ತ ವೈದ್ಯರ ಮನೆಗೆ, ಅವರಿರುವ ಆಸ್ಪತ್ರೆಗಳಿಗೆ ಹೋಗಿ ಸನ್ಮಾನಿಸುತ್ತಿರುವದು ಶ್ಲಾಘನೀಯ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧನ್ ಚಂದ್ರ ರಾಯ್ ಅವರ ನೆನಪಿಗಾಗಿ ಭಾರತದಾದ್ಯಂತ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಸಮಾಜಕ್ಕೆ ವೈದ್ಯರ ಸೇವೆ ಅನುಪಮವಾದದ್ದು. ಎಲ್ಲ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯವೇ ದೊಡ್ಡದು. ಅನಾರೋಗ್ಯವನ್ನು ಕಳೆದು ಉತ್ತಮ ಆರೋಗ್ಯವನ್ನು ಸೃಷ್ಟಿಸಿ ಬದುಕಿಗೆ ಚೈತನ್ಯ ನೀಡುವ ವೈದ್ಯ ರೋಗಿಗಳ ಪಾಲಿಗೆ ದೇವರು ಎಂದರು.
ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಗದಗನ 2025-26ನೇ ಸಾಲಿನ ನೂತನ ಅಧ್ಯಕ್ಷ ಚೇತನ ಅಂಗಡಿ, ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ. ಪ್ರಭು ಗಂಜಿಹಾಳ, ಮಾಜಿ ಅಸಿಸ್ಟಂಟ್ ಗವರ್ನರ್ ಮಲ್ಲಿಕಾರ್ಜುನ ಐಲಿ, 3170ದ ನೂತನ ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ, ಚಂದ್ರಗೌಡ ಹಿರೇಗೌಡರ, ಎಸ್.ಆಯ್. ಅಣ್ಣಗೇರಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಮಲ್ಲಿಕಾರ್ಜುನ ಚಂದಪ್ಪನವರ, ಪರಶುರಾಮ ನಾಯ್ಕರ್ ಮೊದಲಾದ ಸದಸ್ಯರು ಪಾಲ್ಗೊಂಡಿದ್ದರು.