Home Blog Page 5

ಯೋಗಿರಾಜ ಮಹಾರಾಜರ ಪುಣ್ಯಾರಾಧನೆ ಸಂಪನ್ನ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕಳೆದ ಮೂರು ದಿನಗಳಿಂದ ಇಲ್ಲಿಯ ವಿದ್ಯಾಶಂಕರ ದೇವಸ್ಥಾನದಲ್ಲಿ ನಡೆದ ಯೋಗಿರಾಜ ಮಹಾರಾಜರ ಪುಣ್ಯಾರಾಧನೆ ಕಾರ್ಯಕ್ರಮವು ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಬೆಳಿಗ್ಗೆ ಕಾಕಡಾರತಿಯೊಂದಿಗೆ ವಿದ್ಯಾಶಂಕರ, ಯೋಗಿರಾಜರ ಮೂರ್ತಿಗೆ ಲಘು ಅಭಿಷೇಕ ಜರುಗಿತು. ನಂತರ ಭಕ್ತ ಮಂಡಳಿಯು ಗ್ರಾಮದ ಬ್ರಾಹ್ಮಣರ ಮನೆಗೆ ತೆರಳಿ ಭೀಮಭಿಕ್ಷೆಯನ್ನು ನಡೆಸಿದರು. ನಂತರ ಸತ್ಯನಾರಾಯಣ ಪೂಜೆ ನೆರವೇರಿತು.

ಯೋಗಿರಾಜರ ಭಾವಚಿತ್ರವನ್ನು ಪಾಲಕಿಯಲ್ಲಿ ಅವಭೃತ ಸ್ನಾನದೊಂದಿಗೆ ವಿದ್ಯಾಶಂಕರ ದೇಗುಲಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಸಾಲಾಗಿ ಮಲಗಿ ತಮ್ಮ ಭಕ್ತಿಯ ಸಂಕಲ್ಪವನ್ನು ಸಮರ್ಪಿಸಿಕೊಂಡ ಭಕ್ತರನ್ನು ದಾಟಿ ಪಾಲಕಿಯು ಗರ್ಭಗುಡಿಯನ್ನು ಪ್ರವೇಶಿಸಿತು.

ನರೇಗಲ್ಲದ ವೆಂಕಟೇಶ ಕುಲಕರ್ಣಿ, ಹುಬ್ಬಳ್ಳಿಯ ಆಕಾಶವಾಣಿ ಕಲಾವಿದ ಎಸ್.ಆರ್. ಅಂಬೇಕರ್ ಅವರ ಭಕ್ತಿ ಸಂಗೀತ ಕಾರ್ಯಕ್ರಮವು ಮನ ಸೆಳೆಯಿತು. ಇವರಿಗೆ ಮಾಲತಿ ಕುಲಕರ್ಣಿ, ಉಮೇಶ ಪಾಟೀಲ ಅವರು ಸಂಗೀತ ಸೇವೆ ನೀಡಿದರು. ವಿಶ್ವನಾಥ ಕುಲಕರ್ಣಿಯವರ ರಾಜ ನೀತಿಯ ಕುರಿತ ಗಮಕ ವಾಚನವು ಮನ ತಣಿಸಿತು. ಇದಕ್ಕೂ ಪೂರ್ವ ಗದಗ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯಿಂದ ಕೋಲಾಟ, ಭಜನೆ ನಡೆಯಿತು. ಶಿಕ್ಷಕಿ ಭಾಗ್ಯಶ್ರೀ ಘಳಗಿಯವರು ರಚಿಸಿದ `ಹೆಳವನಕಟ್ಟೆಯ ಗಿರಿಯಮ್ಮ’ ಎಂಬ ಧಾರ್ಮಿಕ ನಾಟಕವು ಆಕರ್ಷಿಸಿತು.

ಭಕ್ತ ಮಂಡಳಿಯ ಆರ್.ಡಿ. ದೇಸಾಯಿ, ನಾಗರಾಜ ಜಿ.ಕುಲಕರ್ಣಿ, ದತ್ತಣ್ಣ ಜೋಶಿ, ಅಶೋಕ ಜೋಶಿ, ಆರ್.ಜಿ. ಕುಲಕರ್ಣಿ, ಆರ್.ವಿ. ಘಳಗಿ, ಜಿ.ಜಿ. ಕುಲಕರ್ಣಿ, ಶಂಕರ ಜೋಶಿ, ಶ್ರೀಕಾಂತ ದೇಸಾಯಿ, ಶ್ರೀರಂಗ ದೇಸಾಯಿ, ಎನ್.ಜಿ. ಕುಲಕರ್ಣಿ, ಗೋಪಾಲ ಜೋಶಿ ಇತರರು ಪಾಲ್ಗೊಂಡಿದ್ದರು.

ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ಎಂದಿಗೂ ತಪ್ಪಲ್ಲ: ಮಂಕಾಳ ವೈದ್ಯ

0

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ಎಂದಿಗೂ ತಪ್ಪಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

ಪವರ್ ಶೇರಿಂಗ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮಾತು ಕೊಟ್ಟಿದ್ರೆ, ಮಾತು ಉಳಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ. ಮಾತು ಆಗಿದ್ರೆ ಖಂಡಿತ ಬಿಟ್ಟು ಕೊಡುತ್ತಾರೆ. ಮಾತು ಆಗಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಮ್ಮಲ್ಲಿ ಗೊಂದಲ ಆಗಬಾರದು. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಸರಿಯಾದ ಸಮಯಕ್ಕೆ ಹೈಕಮಾಂಡ್ ನಿರ್ಧಾರ, ನಿರ್ಣಯ ಮಾಡುತ್ತೆ ಎಂದರು.

ಸಿಎಂ, ಡಿಸಿಎಂ ನಿವಾಸಕ್ಕೆ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೋಗಿದ್ದೆ ಅಷ್ಟೇ. ಯಾವ ಕ್ರಾಂತಿಯೂ ಆಗೋದಿಲ್ಲ.ನಾವು ಪಕ್ಷಕ್ಕೆ, ಹೈಕಮಾಂಡ್‌ಗೆ ಬೆಂಬಲ ಕೊಡುತ್ತೇವೆ. ನನ್ನನ್ನು ಸಚಿವರನ್ನಾಗಿ ಮಾಡಿದ್ದು ಹೈಕಮಾಂಡ್. ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ತೆಗದುಕೊಳ್ಳುತ್ತಾರೆ ಎಂದು ಹೇಳಿದರು.

ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ ಯಶಸ್ವಿಗೊಳಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕುಷ್ಟರೋಗವು ಮೈಕೋ ಬ್ಯಾಕ್ಟೀರಿಯಮ್ ಲೆಫ್ರಿ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಇದು ಚರ್ಮ ಹಾಗೂ ನರಗಳಿಗೆ ಸಂಬಂಧಿಸಿದ ರೋಗವಾಗಿದೆ. ಇದನ್ನು ಎಮ್‌ಡಿಟಿ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದ್ದು, ನವೆಂಬರ್ 24ರಿಂದ ಡಿಸೆಂಬರ್ 9ರವರೆಗೆ ನಡೆಯಲಿರುವ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್. ಲಿಂಗದಾಳ ಸಮೀಕ್ಷಣಾ ತಂಡಕ್ಕೆ ಸೂಚಿಸಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಷ್ಟರೋಗ ವಿಭಾಗ ಗದಗ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಡವಿಸೋಮಾಪೂರ, ಲಕ್ಕುಂಡಿ ಮತ್ತು ಹಾತಲಗೇರಿ ಗ್ರಾಮದಲ್ಲಿ ಅಭಿಯಾನದ ಪೂರ್ವಭಾವಿ ಸಭೆ ಹಾಗೂ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಸಮೀಕ್ಷಾ ತಪಾಸಣೆ ಕಾರ್ಯಕ್ರಮವನ್ನು ಆರಂಭಿಸಿ ಪ್ರತಿದಿನ 20 ಮನೆಗಳ ವರದಿಯನ್ನು ಮೇಲ್ವಿಚಾರಕರಿಗೆ ತಲುಪಿಸಬೇಕು. ಪ್ರತಿಯೊಬ್ಬರಿಗೂ ಕುಷ್ಟರೋಗದ ಬಗ್ಗೆ ಅರಿವು ಮೂಡಿಸುವಲ್ಲಿ ಗುಂಪು ಸಭೆ ನಡೆಸಿ. ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ, ತಾಮ್ರ ವರ್ಣದ ಸ್ಪರ್ಶಜ್ಞಾನ ಇಲ್ಲದ ತದ್ದು ಮಚ್ಚೆಗಳು ಇದ್ದರೆ ಅಥವಾ ಕಣ್ಣಿನ ರೆಪ್ಪೇಗಳು ಉದುರಿದ್ದರೆ ಅವು ಕುಷ್ಟರೋಗದ ಲಕ್ಷಣ ಇರಬಹುದು. ಈ ಬಗ್ಗೆ ಪ್ರತಿಯೊಂದು ಮನೆಯವರಿಗೆ ಅರಿವನ್ನು ಮೂಡಿಸಬೇಕೆಂದು ಹೇಳಿದರು.

ಅಧ್ಯಕ್ಷತೆಯನ್ನು ವೈದ್ಯಾಧಿಕಾರಿ ಡಾ. ವರ್ಷಾ ಬ್ಯಾಲಿಹಾಳ ವಹಿಸಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್.ಬಿ. ಗಡಾದ, ವೈ.ಎನ್. ಕಡೆಮನಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಹುಲಿಗೆಮ್ಮ ಮಾದರ, ಚಂದ್ರಪ್ರಭಾ ತೋಟದ, ಗಂಗಮ್ಮ ಕುಂಬಾರ, ಸಲ್ಮಾ ಕುಕನೂರ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಗಾಯತ್ರಿ ಬಡಿಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ಮಾತನಾಡಿ, ಕುಷ್ಟರೋಗವನ್ನು ಮುಖ್ಯವಾಗಿ ದೇಹದ ಯಾವುದೇ ಭಾಗದಲ್ಲಿ ಕಂಡುಬರುವ ತಿಳಿ ಬಳಿ ಅಥವಾ ತಾಮ್ರ ಬಣ್ಣದ ಸ್ಪರ್ಶಜ್ಞಾನ ಇಲ್ಲದೆ ಇರುವ ಮಚ್ಚೆಗಳು ಮತ್ತು ಚರ್ಮ, ಕಿವಿಯ ಹಾಲೆ ಮುಖ ಮತ್ತು ಕೈಕಾಲುಗಳ ಮೇಲೆ ಕಂಡುಬರುವ ಗಂಟುಗಳು, ಊದಿಕೊಂಡ ನರಗಳು ಕಂಡುಬಂದರೆ ಮಾಹಿತಿಯನ್ನು ನೀಡಿ ಸಹಕರಿಸಬೇಕು ಹೇಳಿದರು.

ಬೆಳಕಿನಲ್ಲಿ ಮನುಕುಲದ ಕಲ್ಯಾಣವಿದೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹಾತಲಗೇರಿ ನಾಕಾದ ಕನಕ ವೃತ್ತದಲ್ಲಿ ಕನಕ ಕಾರ್ತಿಕೋತ್ಸವವನ್ನು ಸಮರ್ಪಣಾ ಭಾವದಿಂದ ಆಚರಿಸಲಾಯಿತು. ಗದಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪಣ್ಣ ಹೆಬಸೂರ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ದೀಪ ಬೆಳಗಿಸಿ ಮಾತನಾಡಿ, ಮನುಷ್ಯನು ತನ್ನಲ್ಲಿರುವ ಅಜ್ಞಾನದ ಕತ್ತಲನ್ನು ನಿವಾರಿಸಿಕೊಳ್ಳಲು ಮಹಾತ್ಮರ ಬದುಕಿನ ಜೀವನ ಸಂದೇಶದ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳವುದೇ ಕಾರ್ತಿಕೋತ್ಸವದ ಆಚರಣೆಯು ಮುಖ್ಯ ಉದ್ದೇಶ. ಭರತಖಂಡದಲ್ಲಿ ವಿಭೂತಿಪುರುಷರು, ಅನುಭಾವಿಗಳು, ಶರಣರು, ಸಂತರು, ದಾಸರು ತಮ್ಮ ಜೀವನದ ನಡೆ-ನುಡಿಗಳಿಂದ ಮನುಕುಲದ ಕಲ್ಯಾಣವನ್ನು ಬಯಸಿದ್ದಾರೆ. ಅವರ ಆದರ್ಶದಲ್ಲಿ ನಮ್ಮ ಬದುಕನ್ನು ಬೆಳಕಿನತ್ತ ಸಾಗಿಸಬೇಕೆಂದು ನುಡಿದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಡಾ. ಎಸ್.ಎಫ್. ಜಕಬಾಳ, ಸಾಹಿತಿಗಳಾದ ಡಾ. ಎನ್.ಎಂ. ಅಂಬಲಿಯವರ, ಡಾ. ಎಸ್.ಎನ್. ವೆಂಕಟಾಪೂರ, ಅರುಣೋದಯ ವಾಯು ವಿಹಾರ ಸಂಘದ ಪ್ರೊ. ಎಂ.ಸಿ. ವಗ್ಗಿ, ಪ್ರಭಾಕರ ನಾರಾಯಣಪೂರ, ಪ್ರೊ. ಮಾರುತಿ ಮಡ್ಡಿ, ಸೋಮಣ್ಣ ಬೆನಕವಾರಿ, ಎಚ್.ಎನ್. ಚಿಗರಿ, ಹಾಲೇಶ ಶಹಪೂರ, ಉಮೇಶ ಹಡಪದ, ಸುಭಾಷ ಪರಸುನಾಯಕರ, ವಿ.ಬಿ. ಪಿಡಗಣ್ಣವರ, ಶಿಕ್ಷಕರಾದ ಕಂಕರಿ, ಅಶೋಕ ಕೊಡಗಲಿ, ನಾಗಪ್ಪ ತೋಟಗೇರಿ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್: ಮೂವರು ಅರೆಸ್ಟ್, 70 ಲಕ್ಷ ಹಣ ಸೀಜ್!

0

ಬೆಂಗಳೂರು:- ನಗರದ ಡೈರಿ ಸರ್ಕಲ್ ಬಳಿ ನಡೆದಿದ್ದ 7 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ನವೀನ್, ನೆಲ್ಸನ್ ಹಾಗೂ ರವಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 70 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 70 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದು, ಈವರೆಗೆ 6 ಕೋಟಿ 45 ಲಕ್ಷ ರೂ ಹಣ ಜಪ್ತಿ ಮಾಡಲಾಗಿದೆ. ಇನ್ನು 67 ಲಕ್ಷ ರೂ. ಹಣ ಪತ್ತೆಯಾಗ ಬೇಕಿದೆ. ಸದ್ಯ ಆರೋಪಿಗಳನ್ನು ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು, ಮತ್ತಿಬ್ಬರಿಗಾಗಿ ಶೋಧ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್​ಟೇಬಲ್ ಸಾಥ್ ನೀಡಿರುವ ಸ್ಫೋಟಕ ಸತ್ಯ ಬಯಲಾಗಿದೆ. ಗೋವಿಂದಪುರ ಠಾಣೆ ಕಾನ್ಸ್​ಟೇಬಲ್ ಅಣ್ಣಪ್ಪ, ಸಿಎಂಎಸ್ ಕಂಪನಿ ಹಳೆ ಉದ್ಯೋಗಿ ಕ್ಸೇವಿಯರ್, ಸಿಎಂಎಸ್ ವಾಹನ ವಿಭಾಗದ ಮೇಲ್ವಿಚಾರಕ ಗೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಘಟನೆ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ಬೆಳವಣಿಗೆ ನಡೆಯಲಿದೆ: ಕ್ರಾಂತಿಯ ಬಾಂಬ್‌ ಸಿಡಿಸಿದ ಹೆಚ್ ಡಿಕೆ ಕುಮಾರಸ್ವಾಮಿ

0

ಬೆಂಗಳೂರು:- ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ಬೆಳವಣಿಗೆ ನಡೆಯಲಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ರಜತಮಹೋತ್ಸವದ ಅಂಗವಾಗಿ ಇಂದು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಎದುರು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದ ಸಾಲ ಸದ್ಯ 7.5 ಲಕ್ಷ ರೂಪಾಯಿ ಇದೆ. ಇದ್ರಲ್ಲಿ 5.5 ಲಕ್ಷ ಕೋಟಿ ಸಾಲ ಸಿದ್ದರಾಮಯ್ಯನವರೇ ನಾಡಿನ ಮೇಲೆ ಹೊರಿಸಿದ್ದಾರೆ. ರಾಜ್ಯದ ಜನ ಈ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಾಯ್ತಿದ್ದಾರೆ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಎಂದು ಬಾಂಬ್ ಸಿಡಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಆಗಬೇಕು. ಜೆಡಿಎಸ್‌ (JDS) ಅನ್ನ ಅಧಿಕಾರಕ್ಕೆ ತರಬೇಕು ಅನ್ನೋದಕ್ಕಿಂತ ಇವತ್ತು ರಾಜ್ಯದ ರಾಜಕೀಯ ಹೇಗೆ ನಡೆಯುತ್ತಿದೆ ಅನ್ನೋದ್ರ ಬಗ್ಗೆ ಯೋಚಿಸಬೇಕು. ಈ ರಾಜ್ಯ ಸಂಪದ್ಭರಿತ ರಾಜ್ಯ. ಕಳೆದ 25-30 ವರ್ಷಗಳಲ್ಲಿ ದೇಶದ ಕೊಡುಗೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದ್ರೀಗ ರಾಜ್ಯದ ಸಾಲದ ಪ್ರಮಾಣ 7.5 ಲಕ್ಷ ಕೋಟಿ ರೂ. ಆಗಿದೆ. ಇದರಲ್ಲಿ ಸಿದ್ದರಾಮಯ್ಯ ಸಾಲದ ಪಾಲು 5.5 ಲಕ್ಷ ಕೋಟಿ ರೂ. ಇದೆ.

ಈ ನಾಡಿನ ಮೇಲೆ ಇಷ್ಟು ಸಾಲ ಹೊರಿಸಿದ್ದಾರೆ. ಈಗಾಗಲೇ ಬೇಸತ್ತಿರುವ ಜನ ಈ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಾಯ್ತಾ ಇದ್ದಾರೆ. ಏಕೆಂದ್ರೆ ಈ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಚಿಂತೆಯಿಲ್ಲ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಅಂತ ಹೊಸ ಕ್ರಾಂತಿಯ ಬಾಂಬ್‌ ಸಿಡಿಸಿದರು.

ಸ್ಟ್ರಾಂಗ್ ಬ್ಯಾಕ್ – ಸ್ಟ್ರಾಂಗ್ ಕಮ್‌ಬ್ಯಾಕ್! ಸಮಂತಾಳ ಹೊಸ ಜಿಮ್ ಫೋಟೋ ವೈರಲ್

ಟಾಲಿವುಡ್ ನಟಿ ಸಮಂತಾ ರುತ್‌ಪ್ರಭು ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ಸದಾ ಸಕ್ರಿಯರಾಗಿರುತ್ತಾರೆ. ಬ್ರ್ಯಾಂಡ್ ಪ್ರಚಾರ, ಸಿನೆಮಾ ಪ್ರಮೋಷನ್‌ಗಳ ಜೊತೆಗೆ ತಮ್ಮ ಹಳೆಯ ನೆನಪುಗಳನ್ನು ಸಹ ಆಗಾಗ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಅವರದ್ದು. ಇದೀಗ ಮತ್ತೊಮ್ಮೆ ತಮ್ಮ ಹಳೆಯ ಸ್ಮೃತಿಗಳನ್ನು ನೆನಪಿಸಿಕೊಂಡಿದ್ದಾರೆ.

ಸಮಂತಾ ಜಿಮ್‌ನಲ್ಲಿ ವರ್ಕೌಟ್ ಮಾಡಿ ತಮ್ಮ ಬೆನ್ನಿನ ಸ್ಟ್ರಾಂಗ್ ಲುಕ್‌ ಅನ್ನು ಮೂಡಿಸಿದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಮನದಾಳದ ಭಾವನೆಗಳನ್ನು ಹೊತ್ತ ಸಾಲುಗಳನ್ನೂ ಸೇರಿಸಿದ್ದಾರೆ. ಅನಾರೋಗ್ಯದಿಂದ ಬಳಲಿದ ನಂತರ ಅದೇ ಶಕ್ತಿಯಲ್ಲಿ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲವೋ ಎಂಬ ಸೂಚನೆ ಫೋಟೋ ಮತ್ತು ಬರಹದಲ್ಲಿ ಕಾಣುತ್ತದೆ. ಹೀಗಾಗಿ ‘ಆ್ಯಕ್ಷನ್ ಮೋಡ್’, ‘ಬೀಸ್ಟ್ ಮೋಡ್’ ಎಂದು ಕ್ಯಾಪ್ಶನ್‌ ಹಾಕಿ ಫಿಟ್ನೆಸ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಸಮಂತಾ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಆಗಾಗ ಕಾಣಿಸಿಕೊಂಡಿರುವುದು, ಹಾಗೂ ಎರಡನೇ ಮದುವೆ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗಳು ಪದೇಪದೇ ಸುದ್ದಿಯಾಗುತ್ತಿವೆ. ಇಬ್ಬರೂ ಹಲವು ಸ್ಥಳಗಳಿಗೆ ಒಟ್ಟಿಗೆ ಭೇಟಿ ನೀಡಿರುವುದರಿಂದ ಊಹಾಪೋಹವೂ ಹೆಚ್ಚಾಗಿದೆ.

ಇದರ ಮಧ್ಯೆ, ಸಮಂತಾಳ ಜಿಮ್ ವರ್ಕೌಟ್ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

“ವುಮೆನ್‌ ಕಾರ್ಡ್ ಬೇಡ ಅಶ್ವಿನಿಯವ್ರೆ!”: ಏಕವಚನ ರಾದ್ಧಾಂತಕ್ಕೆ ಕ್ಲಾಸ್‌ ತೆಗೆದುಕೊಂಡ ಕಿಚ್ಚ ಸುದೀಪ್

ಬಿಗ್‌ಬಾಸ್ ಮನೆಯಲ್ಲಿ “ನನಗೆ ಮರ್ಯಾದೆ ಸಿಕ್ಕಿಲ್ಲ” ಎಂದು ಆರೋಪಿಸಿ ರಾದ್ಧಾಂತ ಸೃಷ್ಟಿಸಿದ್ದ ಅಶ್ವಿನಿ ಗೌಡರಿಗೆ, ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಗಟ್ಟಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಪ್ರೋಮೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಶ್ವಿನಿ ವಿಚಾರದಲ್ಲಿ ಸುದೀಪ್ ಮೌನವಾಗಿದ್ದಾರೆ ಎಂಬ ಅಭಿಪ್ರಾಯಗಳು ನೆಟ್ಟಿಗರಲ್ಲಿ ವ್ಯಕ್ತವಾಗಿದ್ದಾಗಲೇ, ಇತ್ತೀಚಿನ ಪ್ರೋಮೊ ಆ ಆರೋಪಕ್ಕೆ ತೆರೆ ಎಳೆಯುವಂತೆ ಮಾಡಿದೆ. ಕಿಚ್ಚ, ಅಶ್ವಿನಿಯ ವರ್ತನೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾನೆ.

ಕ್ಯಾಪ್ಟನ್ ಆಗಿದ್ದ ರಘು ಮನೆ ಕೆಲಸಕ್ಕೆ ಅಶ್ವಿನಿ ಅವರನ್ನು “ಬನ್ನಿ ಅಶ್ವಿನಿ, ಕೆಲಸ ಮಾಡಬನ್ನಿ” ಎಂದು ಕರೆದಿದ್ದಕ್ಕೆ, ಅದನ್ನೇ ಅವಮಾನವೆಂದೂ, ತಮ್ಮ “ಸೊಸೈಟಿ ಸ್ಟೇಟಸ್‌ಗೆ ಧಕ್ಕೆ” ಎಂದೂ ಅಶ್ವಿನಿ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ರಾದ್ಧಾಂತ ಮಾಡಿದ್ದರು. ಕಣ್ಣೀರು ಹಾಕಿ ಊಟ ಬಿಟ್ಟು, ಮನೆಯಿಂದ ಹೊರಗೆ ಹೋಗುವುದಾಗಿ ಹೇಳಿ ಸಂಚಲನ ಸೃಷ್ಟಿಸಿದ್ದರು.

ಈ ಘಟನೆ ಕುರಿತು ವಾರದ ಪಂಚಾಯಿತಿಯಲ್ಲಿ ಮಾತನಾಡಿದ ಕಿಚ್ಚ, ಅಶ್ವಿನಿಯನ್ನು ನೇರವಾಗಿ ಪ್ರಶ್ನಿಸಿದರು—
“ಏಕವಚನ, ಏಕವಚನ, ಏಕವಚನ… ನಿಮಗೆ ‘ಹೋಗಿ ಬನ್ನಿ’ ಅನ್ನೋದರಲ್ಲೇ ತೊಂದರೆ ಇದ್ದರೆ, ಪ್ರತಿ ಮಗುವಿಗೂ ಹೋಗಿಬನ್ನಿ ಅಂತ ಹೇಳ್ತಾರೆ. ಇಲ್ಲಿ ಯಾರು ಏನು ತಪ್ಪು ಮಾತಾಡಿದ್ದಾರೆ?” ಎಂದು ಕಿಚ್ಚ ಖಾರವಾಗಿ ಕೇಳಿದರು.

“ಹೆಣ್ಣುಮಕ್ಕಳಲ್ಲಿ ಯಾರಾದರೂ ಅಶ್ವಿನಿ ಗೌಡ ನಿಮ್ಮನ್ನು ಮಾನ-ಮರ್ಯಾದೆಯ ಜೊತೆಗೆ ನಡೆದುಕೊಂಡಿದ್ದಾರೆ ಅನ್ನೋದು ಇದ್ದರೆ ಕೈ ಎತ್ತಿ” ಎಂದು ಕಿಚ್ಚ ಕೇಳಿದಾಗ, ಯಾರೊಬ್ಬರೂ ಕೈ ಎತ್ತದೇ ನಿಶ್ಬ್ದವಾಗಿದ್ದರು. ಅದರ ನಂತರ ಕಿಚ್ಚ ಅಂತಿಮವಾಗಿ ಎಚ್ಚರಿಕೆ ನೀಡಿದರು— “ಅಶ್ವಿನಿಯವ್ರೇ, ಈ ಮನೆಯಲ್ಲಿ ವುಮೆನ್ ಕಾರ್ಡ್ ಬೇಡ!” ಎಂದು ಎಚ್ಚರಿಕೆ ನೀಡಿದ್ದಾರೆ.

ಕಿಚ್ಚ ಸುದೀಪ್‌ನ ಈ ಗಟ್ಟಿಯಾದ ಕ್ಲಾಸ್, ಅಶ್ವಿನಿಯ ಏಕವಚನ ರಾದ್ಧಾಂತ ವಿವಾದಕ್ಕೆ ಸ್ಪಷ್ಟ ತೆರೆ ಎಳೆದಂತಾಗಿದೆ.

ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ: ಡಿಸಿಎಂ ಡಿಕೆ ಶಿವಕುಮಾರ್

0

ಬೆಂಗಳೂರು:- ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ ಮತ್ತು ಮತ್ಸ್ಯ ಮೇಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗಿದೆ ಮತ್ತು ಈ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಸಣ್ಣ ಕೆರೆಗಳನ್ನು ಸ್ಥಳೀಯ ಸೊಸೈಟಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಉಳಿದ ಕೆರೆಗಳಲ್ಲಿ ಹರಾಜು ಪ್ರಕ್ರಿಯೆ ಮೂಲಕ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗುವುದು ಎಂದರು.

“ಮೀನು ಎಂದರೆ ಲಕ್ಷ್ಮಿ. ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತೀರಿ. ನಿಮಗೆ ಸೂರ್ಯ, ಚಂದ್ರ ಎರಡೇ ಕಾಣುವುದು. ಉಳಿದಂತೆ ನಿಮ್ಮ ಆತ್ಮಬಲದಿಂದ ಇದನ್ನು ಮಾಡಿಕೊಂಡು ಬರುತ್ತಿದ್ದೀರಿ. ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ. ನಾನು ಮುಖ್ಯಮಂತ್ರಿಗಳಿಗೆ ಮಶೀರ್ ಫಿಶ್ ತೋರಿಸಿದೆ.

ನಾನು ಸಣ್ಣವನಿದ್ದಾಗ ಸಂಗಮಕ್ಕೆ ಹೋಗಿ ಮೀನು ಹಿಡಿಯುತ್ತಿದ್ದೆ. ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ. ಅದಕ್ಕೆ ಬಹಳ ತಾಳ್ಮೆ ಬೇಕು. ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿ ಮೇಲಿದೆ. ಮೀನುಗಾರನಿಗೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆ ವಾರವಾದರೂ ಒಂದು ಮೀನು ಸಿಗುವುದಿಲ್ಲ. ಅಂತಹ ತಾಳ್ಮೆ ವೃತ್ತಿ ನಡೆಸುತ್ತಿರುವ ನೀವು ಶ್ರಮಜೀವಿಗಳು” ಎಂದು ಬಣ್ಣಿಸಿದರು.

ಕೇರಳದ ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿ ನಾಪತ್ತೆ!

0

ಕೋಲಾರ:- ಕೋಲಾರದ ಅಯ್ಯಪ್ಪ ಮಾಲಾಧಾರಿಯೊಬ್ಬರು ಕೇರಳದ ಶಬರಿಮಲೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಮಾಲಾಧಾರಿಯನ್ನು ಅಮರೇಶ ಎಂದು ಗುರುತಿಸಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕು ನೂಟುವೆ ಗ್ರಾಮದ ಅಮರೇಶ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋದ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾರೆ.

ಈ ಅಯ್ಯಪ್ಪ ಮಾಲಾಧಾರಿಗೆ ಮಾತು ಬರಲ್ಲ, ಕಾಣಿಸಿದಲ್ಲಿ ತಿಳಿಸುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರವೇಶ ದ್ವಾರದಲ್ಲಿ ಪ್ರವೇಶ ಪಡೆದ ಮೇಲೆ ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

error: Content is protected !!