HomeEntertainment‘ರಾಮಾಯಣ’ ಟ್ರೇಲರ್ ರಿಲೀಸ್‌: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಅಬ್ಬರ

‘ರಾಮಾಯಣ’ ಟ್ರೇಲರ್ ರಿಲೀಸ್‌: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಅಬ್ಬರ

For Dai;y Updates Join Our whatsapp Group

‘ರಾಮಾಯಣ’ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಗೊಂಡಿದ್ದು, ಭಾರತೀಯ ಸಿನಿಮಾದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಭವ್ಯ ಪ್ರಯತ್ನವಾಗಿ ಹೊರಹೊಮ್ಮಿದೆ. ರಾವಣನಾಗಿ ಯಶ್ ಅವರ ರೌದ್ರಾವತಾರ, ರಾಮನಾಗಿ ರಣಬೀರ್ ಕಪೂರ್ ಅವರ ಘನತೆ, ಸಾಯಿ ಪಲ್ಲವಿ ಅವರ ಸೀತೆ ಪಾತ್ರ ಹಾಗೂ ವಿಶ್ವಮಟ್ಟದ VFX ಟ್ರೇಲರ್‌ನ ಪ್ರಮುಖ ಹೈಲೈಟ್‌ಗಳಾಗಿವೆ.

ಬಹುನಿರೀಕ್ಷಿತ ಈ ಟ್ರೇಲರ್ ಅನ್ನು ಚಿತ್ರತಂಡ ಬ್ರಾಹ್ಮೀ ಮುಹೂರ್ತವಾದ ಬೆಳಗ್ಗೆ 4.15ಕ್ಕೆ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಪ್ರಿಯರು ದೃಶ್ಯ ವೈಭವ ಮತ್ತು ತಾಂತ್ರಿಕ ಗುಣಮಟ್ಟವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಸುಮಾರು ನಾಲ್ಕು ನಿಮಿಷಗಳ ಟ್ರೇಲರ್‌ನಲ್ಲಿ ರಾಮಾಯಣದ ಕಥೆಯನ್ನು ಸಂಪೂರ್ಣ ಹೇಳದೆ, ಅದರ ಪ್ರಮುಖ ಘಟ್ಟಗಳನ್ನು ಮಾತ್ರ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಅಯೋಧ್ಯೆ, ವನವಾಸ, ಸೀತಾ ಸ್ವಯಂವರ, ರಾವಣನ ಲಂಕೆ, ರಾಕ್ಷಸ ಸಾಮ್ರಾಜ್ಯ ಹಾಗೂ ಯುದ್ಧದ ಸನ್ನಿವೇಶಗಳು ಅದ್ದೂರಿ VFX ಮೂಲಕ ಕಣ್ಣಿಗೆ ಹಬ್ಬವಾಗಿವೆ.

ಟ್ರೇಲರ್‌ನಲ್ಲಿ ಯಶ್ ಅವರ ರಾವಣ ಪಾತ್ರವೇ ಹೆಚ್ಚು ಗಮನ ಸೆಳೆಯುತ್ತದೆ. ರಾಜಸಿಕ ವೇಷಭೂಷಣ, ಚಿನ್ನದ ಸಿಂಹಾಸನ, ತೀಕ್ಷ್ಣ ನೋಟ ಹಾಗೂ ರೌದ್ರಾಭಿನಯದ ಮೂಲಕ ಅವರು ಪಾತ್ರಕ್ಕೆ ವಿಭಿನ್ನ ಆಯಾಮ ನೀಡಿದ್ದಾರೆ. ರಣಬೀರ್ ಕಪೂರ್ ಶ್ರೀರಾಮನಾಗಿ ಸಮಚಿತ್ತ, ಶಾಂತ ಮತ್ತು ಶಕ್ತಿಶಾಲಿ ವ್ಯಕ್ತಿತ್ವವನ್ನು ಮೂಡಿಸಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರವೂ ಟ್ರೇಲರ್‌ನಲ್ಲಿ ಪ್ರಭಾವ ಮೂಡಿಸಿದೆ.

ಹಾಲಿವುಡ್‌ನ ಡಿಎನ್‌ಇಜಿ ತಂಡ ರೂಪಿಸಿರುವ ದೃಶ್ಯ ಪರಿಣಾಮಗಳು ಚಿತ್ರದ ಮಟ್ಟವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ದಿವೆ. ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತ ಟ್ರೇಲರ್‌ಗೆ ಮತ್ತಷ್ಟು ಭವ್ಯತೆ ಹಾಗೂ ಭಾವನಾತ್ಮಕ ಆಳವನ್ನು ನೀಡಿದೆ.

ಚಿತ್ರದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರವಾಲ್, ಅರುಣ್ ಗೋವಿಲ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ ಮತ್ತು ಅನುಪಮ್ ಖೇರ್ ಸೇರಿದಂತೆ ಬೃಹತ್ ತಾರಾಗಣ ಅಭಿನಯಿಸಿದೆ. ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪೌರಾಣಿಕ ಸಿನಿಮಾಗಳಲ್ಲಿ ಒಂದಾಗಿ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img