ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಹುಲಕೋಟಿ ಗ್ರಾಮದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ನವಮಿ ಕಾರ್ಯಕ್ರಮಗಳನ್ನು ಏ. 17ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಬೆಳಿಗ್ಗೆ ಶ್ರೀರಾಮನಿಗೆ ಅಭಿಷೇಕ, 10 ಗಂಟೆಗೆ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮ, ಮಧ್ಯಾಹ್ನ ಸಕಲ ಸದ್ಭಕ್ತರಿಗೆ ಪಾನಕ ಪ್ರಸಾದ ಸೇವೆ ನೆರವೇರಲಿದೆ.
ಏ. 18ರಂದು ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ಜರುಗಲಿದ್ದು, ಬೆಳಿಗ್ಗೆ ಗ್ರಾಮದ ಎಲ್ಲಾ ದೇವರಿಗೆ ಅಭಿಷೇಕ, ನಂತರ ಶ್ರೀರಾಮ ಭಜನಾ ಸಂಘದವರಿಂದ ಶ್ರೀರಾಮ ಮಂದಿರದಿಂದ ಗ್ರಾಮದಲ್ಲಿ ದಿಂಡಿಯ ಪ್ರದಕ್ಷಿಣೆ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ ಗ್ರಾಮದ ಎಲ್ಲಾ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ, ಪಾಲಕಿ ಸೇವೆ, ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ ನೇರವೇರುವುದು.
ಸಾಯಂಕಾಲ 6 ಗಂಟೆಗೆ ಶ್ರೀ ಕರಿಯಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗುವುದು. ಏ.19ರ ಸಾಯಂಕಾಲ 6 ಗಂಟೆಗೆ ಲಘು ರಥೋತ್ಸವವು (ಕಡುಬಿನ ಕಾಳಗ) ಜರುಗಲಿದೆ. ಗ್ರಾಮದ ಸರ್ವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ಆಶಿರ್ವಾದ ಪಡೆದುಕೊಳ್ಳಬೇಕೆಂದು ದೇವಸ್ಥಾನ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ.