ಮಸೀದಿಗಳಲ್ಲಿ ವಿಶೇಷ ಪೂಜೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಾಕಿಸ್ತಾನದ ಉಗ್ರರನ್ನು ಸದೆಬಡಿಯಲು ಸನ್ನದ್ಧರಾಗಿರುವ ಮತ್ತು ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತದ ಯೋಧರಿಗೆ ಜಯ ಸಿಗಲಿ, ಭಾರತಮಾತೆ ವೀರಯೋಧರ ರಕ್ಷಣೆ ಮಾಡಲು ಹಾಗೂ ಉಗ್ರವಾದ ಸರ್ವನಾಶವಾಗಲಿ ಎಂದು ಪ್ರಾರ್ಥಿಸಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

ಪ್ರಾರ್ಥನೆಯ ನಂತರ ಪಟ್ಟಣದ ಪೀರಂಕಳ್ಳಿ ಮಸೀದಿಯಿಂದ ವೀರ ಕನ್ನಡಿಗ ಟಿಪ್ಪು ಸೇನೆಯ ಸದಸ್ಯರು ಮೆರವಣಿಗೆ ಸಂಘಟಿಸಿದ್ದರು. ಹತ್ತಾರು ಮುಸ್ಲಿಂ ಸಹೋದರರು ಕೈಯಲ್ಲಿ ತಿರಂಗಾ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತ ದೂದಪೀರಾಂ ದರ್ಗಾದಲ್ಲಿ ಗದ್ದುಗೆಗೆ ಚಾದರ ಹೊದೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೌಲಾನಾ ಉಸ್ಮಾನ್ ಹಸ್ರಪಿ, ಹಾಪೀಜ್ ಸಾದಿಕ್, ಮೌಲ್ವಾನ ಖಯೂಮ್, ಮೌಲಾನಾ ಪಾರೂಕ್, ಮುನ್ನಾ ಹಜರತ, ಜಾಕೀರ್ಹುಸೇನ್ ಹವಾಲ್ದಾರ, ಹಜರತ್ ಪಟೇಲ್ ಕನಕವಾಡ, ಮಹಮ್ಮದಲೀ ಕಾರಡಗಿ, ಖ್ವಾಜಾಪೀರ್ ಜಮಖಂಡಿ, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಂ.ಎಂ. ಗದಗ, ಶಪೀಕ್ ಸಿದ್ದಾಪುರ ಸೇರಿದಂತೆ ಮತ್ತಿತರರು ಇದ್ದರು. ಪಟ್ಟಣದ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.


Spread the love

LEAVE A REPLY

Please enter your comment!
Please enter your name here