ವಿಜಯನಗರ:- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ED ದಾಳಿ ನಡೆಸಿದ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
Chitradurga: ಮುರುಘಾ ಮಠದಲ್ಲಿ ಕಳ್ಳತನ: ಶಿವಮೂರ್ತಿ ಶರಣರ ಬೆಳ್ಳಿ ಮೂರ್ತಿ ಕದ್ದೊಯ್ದ ಕಳ್ಳರು!
ಈ ಸಂಬಂಧ ಹೊಸಪೇಟೆ ತಾಲೂಕಿನ ತಿಮ್ಮಲಾಪುರದ ರಾಹೆ 50 ರ ಬಳಿ ಮಾತನಾಡಿದ ಅವರು, ED ಅಧಿಕಾರಿಗಳು ದಾಳಿ ಮಾಡಿದ್ದಾರೆ, ತನಿಖೆ ನಡೆಯುತ್ತಿದೆ. ತನಿಖೆ ನಂತರ ಯಾರು ತಪ್ಪಿತಸ್ಥರೆಂದು ಗೊತ್ತಾಗಲಿದೆ. ಪ್ರಕರಣದಲ್ಲಿ ಸಿಎಂ, ಡಿಸಿಎಂ, ನಾಗೇಂದ್ರ ಮತ್ತು ದದ್ದಲ್ ಗಮನಕ್ಕೆ ಬಾರದ ಹಾಗೆ ಹಣ ವರ್ಗಾವಣೆ ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಈ ವಿಚಾರದಲ್ಲಿ ನಾಗೇಂದ್ರ ಮತ್ತು ದದ್ದಲ್ ಅವರದ್ದು ತಪ್ಪಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ನಾಗೇಂದ್ರ ಪರ ಬ್ಯಾಟ್ ಬೀಸಿದರು.
ಇದೇ ವೇಳೆ ಪತ್ರದಲ್ಲಿ ನಾಗೇಂದ್ರ ಮೌಖಿಕ ಆದೇಶ ಅಂತ ಹೆಸರು ಉಲ್ಲೇಖ ಮಾಡಲಾಗಿದೆ ಅನ್ನೋ ವಿಚಾರವಾಗಿ ಮಾತನಾಡಿದ ರಾಮಲಿಂಗಾರೆಡ್ಡಿ, ಅಯ್ಯೋ ಪತ್ರಗಳು ಬರಿತಾರೆ, ಮಾಡ್ತಾರೆ. ಆಡಿಯೋ, ವಿಡಿಯೋಗಳು ಅಂತ ಹೇಳ್ತಾರೆ. ತನಿಖೆ ನಡೆಯುತ್ತಿದೆ ಅಲ್ವಾ ಎಲ್ಲಾ ಸತ್ಯಾಂಶ ತನಿಖೆ ಬಳಿಕ ಹೊರ ಬರಲಿದೆ ಎಂದರು.
ಪ್ರಕರಣ ಸಂಬಂಧ ED, CBI, SIT ತನಿಖೆ ಮಾಡುತ್ತಿದ್ದಾರೆ. 50 ಕೋಟಿಗೂ ಹೆಚ್ಚು ಹಣ ಅವ್ಯವಹಾರ ಆಗಿದ್ರೆ, ಅದು ಸಿಬಿಐ, ED ತನಿಖೆ ಮಾಡುತ್ತದೆ. ಸದ್ಯ ತನಿಖೆ ನಡೆಯುತ್ತಿದೆ ನಡೆಯಲಿ ತೊಂದರೆ ಕೊಡೋದು ಬೇಡ ಎಂದರು.
ಇನ್ನೂ ರಾಮನ ಹೆಸರು ಇರೋ ಕಾರಣ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಅನ್ನೋ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಹೇಳ್ತಾರೆ, ಹೇಳಲಿ ಯೋಗಿ ಆದಿತ್ಯನಾಥ್ ಎಷ್ಟು ಹೆಸರು ಬದಲಿಸಿಲ್ಲಾ ಹೇಳಿ. ರಾಜ್ಯದಲ್ಲಿ ಎಷ್ಟು ಹೆಸರು ಬದಲಾವಣೆ ಮಾಡಿಲ್ಲಾ, ಗುಲ್ಬರ್ಗ ಇದ್ದಿದ್ದು, ಕಲಬುರಗಿ, ಬೆಂಗಳೂರ್ ಇದ್ದದ್ದು, ಬೆಂಗಳೂರು, ಬಿಜಾಪುರ ಇದ್ದಿದ್ದು ವಿಜಯಪುರ ಅಂತ ಮಾಡಿಲ್ವಾ-? ಹೇಳಿ ನೋಡೋಣ ಎಂದು ಹೇಳುವ ಮೂಲಕ ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟಿದ್ದಾರೆ.
ಇನ್ನೂ ನಾನು ಡಿಸಿಎಂ ಆಕಾಂಕ್ಷಿಯಲ್ಲಾ, ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿದ್ದು. ನೀವು ಮೀಡಿಯಾದವರು ಕೇಳಿದ್ರೆ, ಹೇಳ್ತಾರೆ. ಹೈಕಮಾಂಡ್ ಈ ವಿಚಾರದಲ್ಲಿ ಮಾತನಾಡಬೇಡಿ ಅಂದಿದೆ, ಮಾತನಾಡೋಲ್ಲಾ. ಸದ್ಯ ಸಿಎಂ ಬದಲಾವಣೆ ಇಲ್ಲಾ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಭೆ ಮಾಡಿ ಅರ್ಹರಿಗೆ ರೇಷನ್ ಕಾರ್ಡ್ ಕೊಡಿ ಅಂತ ಅಧಿಕಾರಿಗಳಿಗೆ ಹೇಳಿದ್ದಾರೆ. ಅನರ್ಹರು ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದರೆ ಅಮಾನ್ಯ ಮಾಡಿ ಅಂತ ಖಡಕ್ಕಾಗಿ ಸೂಚಿಸಿದ್ದಾರೆ. ಸಾರಿಗೆಯ ನಾಲ್ಕು ವಿಭಾಗಗಳು ಡಿಜಿಟಲೀಕರಣ ಆಗುತ್ತವೆ. ಸಣ್ಣಪುಟ್ಟ ಸಮಸ್ಯೆ ಇವೆ ಸರಿಪಡಿಸುತ್ತೇವೆ. ಇನ್ನೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.