ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಗಜೇಂದ್ರಗಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರ್ಚ್.19ರ ಬೆಳಿಗ್ಗೆ 9.30ರ ಸಮಯಕ್ಕೆ ಆರೋಪಿತಳಾದ ಗಜೇಂದ್ರಗಡ ನೆಲ್ಲೂರಿನ ಸೀತವ್ವ ಶರಣಪ್ಪ ಲಮಾಣಿ, ಕಳ್ಳಭಟ್ಟಿ ಸಾರಾಯಿ ಹಾನಿಕಾರಕವೆಂದು ಗೊತ್ತಿದ್ದೂ ನೆಲ್ಲೂರ ಗ್ರಾಮದ ಸರಕಾರಿ ಹಳ್ಳದ ಬಳಿ ಕುಳಿತುಕೊಂಡು ಮಾರಾಟ ಮಾಡುತ್ತಿದ್ದಾಗ 2ಲೀ.ನ 4 ಪ್ಲಾಸ್ಟಿಕ್ಬಾಟಲಿಯಲ್ಲಿ ತುಂಬಿಸಿದ್ದ ಕಳ್ಳಭಟ್ಟಿ ಸಾರಾಯಿಯೊಂದಿಗೆ ಸಾರಾಯಿ ತಯಾರಿಕೆಗೆ ಬಳಸಿದ್ದ ಅಂದಾಜು 1,050ರೂ ಮೌಲ್ಯದ ಪಾತ್ರೆ, ಕೊಡ ಇತ್ಯಾದಿ ಪರಿಕರಗಳ ಸಮೇತ ಸಿಕ್ಕುಬಿದ್ದಿದ್ದಾಳೆ.
ಇದೇ ದಿನ, ಮಧ್ಯಾಹ್ನ 2.40ರ ಸಮಯಕ್ಕೆ ಗಜೇಂದ್ರಗಡದ ಜನತಾ ಪ್ಲಾಟ್ ನಿವಾಸಿ ಮಾರುತಿ ಗಿಡ್ಡಪ್ಪ ಗುಡೂರ ಈತನು ಗಜೇಂದ್ರಗಡ-ಕಾಲಕಾಲೇಶ್ವರ ರಸ್ತೆಯ ಪಂಪ್ಹೌಸ್ ಹತ್ತಿರ ರಸ್ತೆಯ ಮೇಲೆ ಕೂತು ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು, ಒಟ್ಟೂ 1 ಸಾವಿರ ರೂ. ಮೌಲ್ಯದ ಸಾರಾಯಿಯೊಂದಿಗೆ ವಶಕ್ಕೆ ಪಡೆದಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.